Wednesday, February 22, 2012

ಆಯುಕ್ತರು ನನ್ನ ಪತ್ರಗಳ ಮೇಲೆ ಕ್ರಮ ತೆಗೆದುಕೊಳ್ಳಲು ಆರು ತಿಂಗಳು ಬೇಕೇ?

ಮಾನ್ಯರೇ,
ನಾನು ತಮ್ಮ ಇಲಾಕೆಯಲ್ಲಿ ಸಲ್ಲಿಸಿದ ದೂರುಗಳ ಮೇಲೆ ಕ್ರಮ ತೆಗೆದುಕೊಂಡು ನನಗೆ ಹಿಂಬರಹ ನೀಡಲು ತಮಗೆ ಸುಮಾರು ಆರು ತಿಂಗಳುಗಳ ಕಾಲಾವಕಾಶ ನೀಡಿದ್ದರು ಇದುವರೆವಿಗೂ ನನ್ನ ದೂರಿನ ಮೇಲೆ ಯಾವ ಕ್ರಮ ತೆಗೆದುಕೊಂಡಿರುವಿರಿ ಎಂಬ ಬಗ್ಗೆ ಕನಿಷ್ಠ ಒಂದು ಹಿಂಬರಹವನ್ನಾದರು ನೀದಿಲ್ಲದಿರುವ ಇಲಾಖೆ ಕಾರ್ಯವೈಖರಿ ಆಕ್ಷೇಪಾರ್ಹ.

೧. ಶ್ರೀ ಕೆಂಪತಿಮ್ಮಯ್ಯ -ಇವರ ಮೇಲೆ ಮೊಕದ್ದಮೆ ದಾಕಲಿಸುವ ಕುರಿತು
೨. ಶ್ರೀ, ಟಿ ಎಲ್ ನಾರಾಯಣಸ್ವಾಮಿ ಇವರ ಮೇಲೆ ನ್ಯಾಯಾಂಗ ನಿಂದನಾ ಪ್ರಕರಣ ಹೂಡುವ ಬಗ್ಗೆ
೩. ಸರ್ವೋದಯ ಕಾಲೇಜು, ತುಮಕೂರು ಕಾಲೇಜಿನ ಕಡತಗಳು ಕಾಣೆಯಾಗಿರುವ ಬಗ್ಗೆ
೪. ಉದಯಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಅನುದಾನಕ್ಕೆ ಒಳಪಡದೇ ಸುಮಾರು ೨೫ ವರ್ಷಗಳಿಂದ ಇಲಾಖೆಯಿಂದ ವೇತನಾನುದಾನ ಪಡೆಯುತ್ತಿರುವ ಬಗ್ಗೆ

ದಾಕಲೆಗಳ ಸಮೇತ ನಿಮಗೆ ದೂರು ಸಲ್ಲಿಸಲಾಗಿದ್ದರು ಇದುವರೆವಿಗೂ ನಿಮ್ಮಿಂದ ಬಗ್ಗೆ ಯಾವುದೇ ಮಾಹಿತಿ ಬರದಿರುವುದು ವಿಶಾದನಿಯ. ಹೀಗಾದಲ್ಲಿ ಸಾರ್ವಜನಿಕರು ಇಲಾಕೆಯ ಮೇಲೆ ಹೇಗೆ ತಾನೇ ನಂಬಿಕೆ ಇಡಲು ಸಾಧ್ಯ ?
ಈಗಾಗಲೇ ನನ್ನ ಹಿಂದಿನ ಮೇಲ್ ಒಂದರಲ್ಲಿ ಪ್ರಕರಣ ದಾಕಲಿಸುವುದಾಗಿ ತಿಳಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಕಲಿಸಲು ಮೇಲ್ ತಲುಪಿದ ಒಂದು ವಾರದೊಳಗೆ ತಮ್ಮ ಕಚೇರಿಯಿಂದ ಅನುಮತಿ/ಹಿಂಬರಹ ಬರದಿದ್ದಲ್ಲಿ ಉದ್ದೇಶಪೂರ್ವಕವಾಗಿ ಬ್ರಷ್ಟ ಅಧಿಕಾರಿಯನ್ನು ರಕ್ಷಿಸಲು ಇಲಾಕಾ ಹಿರಿಯ ಅಧಿಕಾರಿಗಳು ಯತ್ನಿಸುತ್ತಿದ್ದಾರೆಂದು ಭಾವಿಸಿ ತಮ್ಮ ಅನುಮತಿಗಾಗಿ ಕಾಯದೆ ಪ್ರಕರಣ ದಾಖಲಿಸುತ್ತೆನೆಂಬ ವಿಚಾರವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಘನ ನ್ಯಾಯಾಲಯದ ಮುಂದೆ ತಮಗೆ ಹಿಂದೆ ಕಳುಹಿಸಿರುವ ಮೇಲ್ ಗಳನ್ನೂ ದಾಕಲೆಗಳಾಗಿ ಹಾಜರುಪಡಿಸಲಾಗುವುದು. ವಿಚಾರ ಅತಿ ಪ್ರಮುಖವಾದುದೆಂದು ಪರಿಗಣಿಸಿ ಆದ್ಯತೆಯ ಮೇರೆಗೆ ಕ್ರಮ ತೆಗೆದುಕೊಳ್ಳಲು ಕೋರಿದೆ.

No comments:

Post a Comment