Thursday, February 02, 2012

ಅನುದಾನಕ್ಕೆ ಒಳಪಡದೇ ಇಲಾಕೆ ಯಿಂದ ಸುಮಾರು ೨೫ಕ್ಕಿತಲೂ ಹೆಚ್ಚು ವರ್ಷಗಳಿಂದಲೂ ವೇತನ ಪಡೆಯುತ್ತಿರುವ ಉದಯ ಭಾರತಿ ಉಪನ್ಯಾಸಕರು: ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟ

ಮಾನ್ಯ ನಿರ್ದೇಶಕರಲ್ಲಿ ನನ್ನ ಮತ್ತೊಂದು ಮನವಿ ಎಂದರೆ,
ಅನುದಾನಿತ ಕಾಲೇಜುಗಳ ನವ್ಕರರ ಪರವಾಗಿ ನಾನು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಕಲಿಸಿ ಅನುದಾನ ರಹಿತ ಅವಧಿಯ ಸೇವೆಯನ್ನು ವೇತನ ನಿಗಧಿ, ಪಿಂಚಣಿ, ಭಡ್ತಿ, ಸೇವಾ ಜೇಷ್ಟತೆ ಹಾಗು ಇತರೆ ಸವಲಭ್ಯಗಳನ್ನೂ ಕೋರಿದ್ದು , ಘನ ನ್ಯಾಯಾಲಯವು ಅದನ್ನು ಪುರಸ್ಕರಿಸಿ ಆದೇಶಿಸಿರುವುದು ತಮಗೆ ತಿಳಿದ ಸಂಗತಿ.
ಮತ್ತೆ ಅದಕ್ಕೆ ಪ್ರತಿಯಾಗಿ ಸರ್ಕಾರ ಹಾಗು ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗುವುದನ್ನು ತಪ್ಪಿಸಲು ತಮ್ಮ ಇಲಾಕೆ ರಿಟ್ ಮೇಲ್ಮನವಿ ಸಲ್ಲಿಸಿರುವುದು ತಮಗೆ ತಿಳಿದ ವಿಚಾರವಾಗಿದೆ.
ಆದರೆ
ಈಗ ನಾನು ಬ್ಲಾಗ್ ಬರಹದಲ್ಲಿ ಬರೆಯುತ್ತಿರುವ ವಿಚಾರ ತುಂಬಾ ಗಂಭಿರವಾದುದು. ಕಾರಣ ನಾನು ಅನುದಾನಕ್ಕೆ ಒಳಪಟ್ಟ ಸಿಬ್ಬಂದಿ ಯವರ ಅನುದಾನ ರಹಿತ ಅವಧಿಯ ಸೇವೆಯನ್ನು ವೇತನ ನಿಗಧಿ, ಪಿಂಚಣಿ, ಭಡ್ತಿ, ಸೇವಾ ಜೇಷ್ಟತೆ ಹಾಗು ಇತರೆ ಸವಲಭ್ಯಗಳನ್ನೂ ಕೋರಿದ್ದಕ್ಕೆ ನೀಡಲು ಬರುವುದಿಲ್ಲ, ಅದು ಸರ್ಕಾರದ ನಿಯಮಗಳಿಗೆ ಪಾಲಿಸಿಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯದಲ್ಲಿ ತಿಳಿಯಪಡಿಸಿರುತ್ತಿರಿ.
ಆದರೆ
ಉದಯಭಾರತಿ ಪದವಿ ಪೂರ್ವ ಕಾಲೇಜಿನ ಕೆಳಗೆ ಕಾಣಿಸಲ್ಪಟ್ಟ ಸಿಬ್ಬಂದಿಗಳು ಅನುದಾನಕ್ಕೆ ಇದುವರೆವಿಗೂ ಒಳಪಟ್ಟಿಲ್ಲ. ಆದರೆ ಇಲಾಕೆ ಅವರಿಗೆ ೨೬ ವರ್ಷಗಳಿಂದ ನಿರಂತರವಾಗಿ ವೇತನ ಬಿಡುಗಡೆ ಮಾಡುತ್ತಿದೆ.!!!!!!!!!!!!!!!!!!!!!!!!!!!!!!!
ಅವರೆಂದರೆ
ಶ್ರೀ ಏನ್.ಕೆ.ಜಯಪ್ರಕಾಶ್ , ಹಿಂದಿ ಉಪನ್ಯಾಸಕ, ಉದಯಭಾರತಿ ಪದವಿ ಪೂರ್ವ ಕಾಲೇಜು ತಿಪಟೂರು
ಶ್ರೀ ಎಂ ಬಸವರಾಜಪ್ಪ, ಸಮಾಜಶಾಸ್ತ್ರ ಉಪನ್ಯಾಸಕರು, ಉದಯಭಾರತಿ ಪದವಿ ಪೂರ್ವ ಕಾಲೇಜು ತಿಪಟೂರು
ಶ್ರೀ ಆನಂದ, ಅಟೆಂಡರ್ , ಉದಯಭಾರತಿ ಪದವಿ ಪೂರ್ವ ಕಾಲೇಜು ತಿಪಟೂರು
ಶ್ರೀ ಶಿವಬಸವಯ್ಯ, ಸೇವಕ, ಉದಯಭಾರತಿ ಪದವಿ ಪೂರ್ವ ಕಾಲೇಜು ತುರುವೇಕೆರೆ

ಹಾಗೆಯೇ
ಶ್ರೀಬಿ.ಹೆಚ್.ರಾಮಯ್ಯ, ಸಮಾಜಶಾಸ್ತ್ರಉಪನ್ಯಾಸಕ, .ಎಂ.ಎಸ್. ಪದವಿಪೂರ್ವಕಾಲೇಜು, ಬೆಂಗಳೂರು
ಶ್ರೀಎಂ. ಆರ್ ಶೇಕರ್, ವಾಣಿಜ್ಯಶಾಸ್ತ್ರಉಪನ್ಯಾಸಕ, ಬಾಪೂಜಿಸಂಯುಕ್ತಪದವಿಪೂರ್ವಕಾಲೇಜು, ಭರಮಸಾಗರ, ಚಿತ್ರದುರ್ಗಜಿಲ್ಲೆ.
ಇವುನನಗೆತಿಳಿದಿರುವಂತಹಾನಿದರ್ಶನಗಳು.
ಇಂತಹಾ ಇನ್ನೆಷ್ಟು ಹಗರಣಗಳನ್ನು ಇಲಾಕೆಯ ಅಧಿಕಾರಿಗಳು ಮಾಡಿರುವರೋ ನನಗೆ ತಿಳಿಯದು.

ಆಶ್ಚರ್ಯ ಆಯ್ತಾ ಮೇಡಂ, ಇದು ಸತ್ಯ. ಪದವಿ ಪೂರ್ವ ಶಿಕ್ಷಣ ಇಲಾಕೆಯಲ್ಲಿ "ಹೀಗೂ ಉಂಟು!".

ನನ್ನ ಮನವಿ ತಮ್ಮಲ್ಲಿ ಇಷ್ಟೇ.
ಅನುದಾನಕ್ಕೆ ಒಳಪಡದ ಸಿಬ್ಬಂದಿಗಳಿಗೆ ಅನುದಾನ ರಹಿತ ಅವಧಿಯ ಸೇವೆಯನ್ನು ವೇತನ ನಿಗಧಿ, ಪಿಂಚಣಿ, ಭಡ್ತಿ, ಸೇವಾ ಜೇಷ್ಟತೆ ಹಾಗು ಇತರೆ ಸವಲಭ್ಯಗಳನ್ನೂ ನೀಡಿರುವ ಇಲಾಕೆಯು ಅನುದಾನಕ್ಕೆ ಒಳಪಟ್ಟ ಸಿಬ್ಬಂದಿಗಳಿಗೆ ಅನುದಾನ ರಹಿತ ಅವಧಿಯ ಸೇವೆಯನ್ನು ವೇತನ ನಿಗಧಿ, ಪಿಂಚಣಿ, ಭಡ್ತಿ, ಸೇವಾ ಜೇಷ್ಟತೆ ಹಾಗು ಇತರೆ ಸವಲಭ್ಯಗಳನ್ನೂ ಪರಿಗಣಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಹೇಳುವುದು ತೀರಾ ಹಾಸ್ಯಾಸ್ಪದ.

ಆದಕಾರಣ ತಾವುಗಳು ಕೃಪೆ ಮಾಡಿ ಎಲ್ಲಾ ಅನುದಾನಿತ ಸಿಬ್ಬಂದಿಗಳ ಅನುದಾನ ರಹಿತ ಅವಧಿಯ ಸೇವೆಯನ್ನು ವೇತನ ನಿಗಧಿ, ಪಿಂಚಣಿ, ಭಡ್ತಿ, ಸೇವಾ ಜೇಷ್ಟತೆ ಹಾಗು ಇತರೆ ಸವಲಭ್ಯಗಳನ್ನೂ ಪಡೆಯಲು ಪರಿಗಣಿಸುವಂತೆ ಕೋರಿದ್ದೇನೆ. ಇಲ್ಲದಿದ್ದಲ್ಲಿ ಅನುದಾನಕ್ಕೆ ಒಳಪಡದ ಸಿಬ್ಬಂದಿಗಳಿಗೆ ಬಿಡುಗಡೆ ಮಾಡುತ್ತಿರುವ ಅನುದಾನವನ್ನು ತಕ್ಷಣವೆ ತಡೆಹಿಡಿದು ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಕೋರಿದ್ದೇನೆ. ಸಾರ್ವಜನಿಕ ಹಣ ಪೋಲಾಗುವುದನ್ನು ತಪ್ಪಿಸಲು ಹಾಗು ಸರ್ಕಾರದ ನೀತಿ ನಿಯಮಗಳಿಗೆ ವ್ಯತಿರಿಕ್ತವಾಗಿ ವೇತನ ಪಡೆಯುತ್ತಿರುದನ್ನು ತಪ್ಪಿಸಲು ನಿಮ್ಮ ಧೃಡ ನಿರ್ಧಾರ ಅವಶ್ಯವಾಗಿದೆ.
ತಮಗೆ ಈ ಬಗ್ಗೆ ದಾಕಲೆಗಳು ಬೇಕಾದಲ್ಲಿ ಬ್ಲಾಗ್ ನಲ್ಲಿ ಪ್ರಕಟಿಸಲು ಸಿದ್ಧನಿದ್ದೇನೆ.

ನಿಮ್ಮ ಒಂದು ಆದೇಶದಿಂದ ಸರ್ಕಾರದ ಕೋಟ್ಯಾಂತರ ರೂಪಾಯಿಗಳು ಪೋಲಾಗುವುದನ್ನು ಹಾಗು ಸರ್ಕಾರಿ ನಿಯಮ ಉಲ್ಲಂಗನೆಯಾಗುವುದನ್ನು ತಪ್ಪಿಸಬಹುದಾದರೆ ನಿಮ್ಮ ಆದೇಶವು ಸಾರ್ವಜನಿಕ ಉಪಯೋಗಿ ಹಾಗು ದಿಟ್ಟ ನಿರ್ಧಾರ ಎನಿಸಿಕೊಳ್ಳುತ್ತದೆ. ಅಂತಹಾ ದಿಟ್ಟ ನಿರ್ಧಾರಕ್ಕಾಗಿ ನಾನು ಸಾರ್ವಜನಿಕ ಹಿತಾಸಕ್ತಿಯಿಂದ ಕಾಯುತ್ತಿದ್ದೇನೆ.


No comments:

Post a Comment