Monday, February 13, 2012

ಖಾಲಿಯಾದ ಒಂದು ಹುದ್ದೆಗೆ ಮೂರೂ ಜನರ ನೇಮಕಾತಿ ಅನುಮೋದನೆ: ಬಂಪರ್ ಸ್ಕೀಮ್-ಸರ್ಕಾರಕ್ಕೆ ಸುಮಾರು ಹದಿನೈದು ವರ್ಷಗಳಿಂದ ಪಂಗನಾಮ !!!




ಮಾನ್ಯ ಆಯುಕ್ತರೇ,
ನಿಮ್ಮೊಂದಿಗೆ ನಾನು ದಿನಾಂಕ ೨೫.೧೧.೨೦೧೧ ರಂದು ಸಿ.ಇ. ಟಿ ಕಚೇರಿಯಲ್ಲಿ ಚರ್ಚಿಸಿದಂತೆ ನಾನು ಈಗ ತಮಗೆ ನಿಮ್ಮ ಇಲಾಕೆಯಲ್ಲಿ ಸರ್ಕಾರಕ್ಕೆ ಪಂಗನಾಮ ಹಾಕಿ ಸರ್ಕಾರದ ಹಣ ಎತ್ತಿಹಾಕಿ ಗುಳುಂ ಮಾಡಲು ಇಲಾಕೆಯಲ್ಲಿ ಇರುವ ಒಂದು ಸ್ಕೀಮ್ ಬಗ್ಗೆ ಇಲ್ಲಿ ಬರೆಯುತ್ತಿದ್ದೇನೆ.

ಸರ್ವೋದಯ ಪದವಿ ಪೂರ್ವ ಕಾಲೇಜು, ತುಮಕೂರು ಇದು ಸರ್ಕಾರಕ್ಕೆ ವಂಚಿಸಿ ಮಂಜೂರಾದ ಕೇವಲ ಒಂದು ಅನುದಾನಿತ ಹುದ್ದೆಗೆ ವರ್ಷಗಳ ಅಂತರದಲ್ಲಿ ಮೂರೂ ಜನರನ್ನು ನೇಮಿಸಿ, ಇಲಾಖೆಯಿಂದ ಅನುದಾನವನ್ನು ಪಡೆಯುತ್ತಿರುವ ವಿಚಾರವು ದಿನಾಂಕ ೨೫.೧೧.೨೦೧೧ ರಂದು ನಿಮಗೆ ತಿಳಿಸಿದ್ದೆನು. ಅದಕ್ಕೆ ಪ್ರತಿಯಾಗಿ ದಾಕಲೆಗಳನ್ನು ಕೊಡಲು ತಾವು ತಿಳಿಸಿದ್ರಿ. ನಾನು ಇ ವಿಚಾರವಾಗಿ ದಾಖಲೆಗಳ ಸಮೇತ ದಿನಾಂಕ ೨೩.೧೦.೨೦೦೯ರದು ಕೊಟ್ಟ ದೂರು ಮತ್ತು ಅದರ ಕಡತ ಕೆಳೆದುಹೋಗಿದೆ ಅಂತಾ ನಿಮ್ಮ ಇಲಾಖೆಯಿಂದ ಬೇಜವಾಬ್ದಾರಿ ನಿರ್ಲಕ್ಷ್ಯತೆಯ ಉತ್ತರ ಬಂದ ಬಗ್ಗೆ ಮತ್ತು ಆ ಉತ್ತರದ ಪ್ರತಿಯನ್ನು ತಮಗೆ ಕಳುಹಿಸಿದ್ದೆನು.

ಶ್ರೀ ಜಿ ಸೀತಾರಾಂ ಎಂಬ ವ್ಯಕ್ತಿ ಸರ್ವೋದಯ ಪದವಿ ಪೂರ್ವ ಕಾಲೇಜು, ತುಮಕೂರು ಫಿಜಿಕ್ಸ್ ಉಪನ್ಯಾಸಕನ ಹುದ್ದೆ ಹಾಗು ಪ್ರಾಚಾರ್ಯನ ಹುದ್ದೆ ಖಾಲಿ ಆಗಬೇಕು. ಕಾರಣ ಆತ ಈ ಎರಡೂ ಹುದ್ದೆ ಅಲಂಕರಿಸಿದ್ದರು. ಆದರೆ ಅಲ್ಲಿ ನಡೆದದ್ದೇ ಬೇರೆ.

೧೯೯೩ರಲ್ಲಿ ರಸಾಯನಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಕಮಲಾಕ್ಷಿ ಇಲಾಕೆಯಿಂದ ಸೀತಾರಾಂ ನಿವೃತ್ತಿ ಹೊಂದಿದ ಹುದ್ದೆಗೆ (?) ಅನುಮೋದನೆಗೆ ಒಳಪಡುತ್ತಾರೆ. ಪಿಜಿಕ್ಸ್ ಉಪನ್ಯಾಸಕನ ಹುದ್ದೆ ತೆರವಾದರೆ ಕೆಮಿಸ್ಟ್ರಿ ಉಪನ್ಯಾಸಕರನ್ನು ತುಂಬಿಕೊಳ್ಳಲು ಯಾವ ನಿಯಮ ತಿಳಿಸುತ್ತದೆಯೋ ಕಾಣೆ. ಒಂದು ವೇಳೆ ನಿಯಮ ಹಾಗೆ ಇದ್ದರು ಕಥೆ ಅಲ್ಲಿಗೇ ಮುಗಿಯಲಿಲ್ಲ.

೧೯೯೫ರಲ್ಲಿ ಶ್ರೀ ರಂಗನಾಥ್ ಎನ್ನುವ ವ್ಯಕ್ತಿ ಸೀತಾರಾಂ ನಿವೃತ್ತಿ ಹೊಂದಿದ ಹುದ್ದೆಗೆ (?) ಅನುಮೋದನೆಗೆ ಒಳಪಡುತ್ತಾರೆ. ಅಲ್ಲಿಗೇ ಸೀತಾರಾಂ ನಿವೃತ್ತಿಯಿಂದ ತೆರವಾದ ಹುದ್ದೆಗೆ ಎರಡನೇ ಅನುಮೋದನೆ/ವೇತನ ಬಿಡುಗಡೆ ಆಯ್ತು.


೧೯೯ರಲ್ಲಿ ಶ್ರೀ ಬಸಪ್ಪ ಎನ್ನುವ ವ್ಯಕ್ತಿ ಸೀತಾರಾಂ ನಿವೃತ್ತಿ ಹೊಂದಿದ ಹುದ್ದೆಗೆ (?) ಅನುಮೋದನೆಗೆ ಒಳಪಡುತ್ತಾರೆ. ಅಲ್ಲಿಗೇ ಸೀತಾರಾಂ ನಿವೃತ್ತಿಯಿಂದ ತೆರವಾದ ಹುದ್ದೆಗೆ ಮೂರನೇ ಅನುಮೋದನೆ/ವೇತನ ಬಿಡುಗಡೆ ಮಾಡುತ್ತದೆ ಇಲಾಕೆ. ಖಾಲಿ ಇದ್ದದ್ದು ಒಂದು ಹುದ್ದೆ.

ಈ ಮೋಸ ತಿಳಿದ ಶ್ರೀ ರಂಗನಾಥ್ ಮತ್ತು ಶ್ರೀ ಬಸಪ್ಪ ರಾಜಿನಾಮೆ ನೀಡಿ ಹೊರನಡೆಯುತ್ತಾರೆ. ಆದರೆ ಮತ್ತೆ ಅವರ ರಾಜಿನಾಮೆಯಿಂದ ತೆರವಾದ ಹುದ್ದೆಗಳಿಗೆ ನೇಮಕಾತಿ ಅನುಮೋದನೆ ಮಾಡಿ ವೇತನ ಬಿಡುಗಡೆ ಮಾಡುತ್ತಿದೆ ಇಲಾಕೆ. ಅಂದರೆ ಕೇವಲ ಒಂದು ಹುದ್ದೆ ಇಲಾಖೆ/ಸರ್ಕಾರದಿಂದ ಮಂಜುರಾದರೆ ಸಾಕು, ಮೂರೂ ಜನ ಸಂಬಳ ಪಡೆಯಲು ಸ್ಕೆಚ್ ಹಾಕಬಹುದು ಮತ್ತು ಕಾರ್ಯಗತಗೊಳಿಸಲು ಬಹುದು.

ಈ ತರಹದ ಇನ್ನೆಷ್ಟು ಅನುಮೋದನೆಗನೂ ಇಲಾಕೆ ಮಾಡಿದೆಯೋ ದೇವರಿಗೆ ಗೊತ್ತು. ಮಾನ್ಯ ಆಯುಕ್ತರು ಪದವಿ ಪೂರ್ವ ಶಿಕ್ಷಣ ಇಲಾಕೆಯ ಕಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ಸರ್ಕಾರದಿಂದ/ಆರ್ಥಿಕ ಇಲಾಖೆಯಿಂದ ಮಂಜುರಾಗಿರುವ ಒಟ್ಟು ಹುದ್ದೆಗಳು ಹಾಗು ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ಬಗ್ಗೆ ಏಕೆ ಮಾಹಿತಿ ಪಡೆದು ಕ್ರಮ ಜರುಗಿಸಬಾರದು?

ಇಲಾಖೆಯ ಕಡತದಲ್ಲಿಯೇ ಇದ್ದ ತ್ಯಾಬುಳರ್ ಮಾದರಿಯ ಮಾಹಿತಿಯನ್ನು ಇಲಾಕೆಯ ಆಯುಕ್ತರಿಗೆ ಹೊರಗಿನ ವ್ಯಕ್ತಿಯೊಬ್ಬ ಈ ತರಹ ಮೇಲ್ ಮೂಲಕ (ದೂರಿನ ಕಡತ ಕಳೆದಿರುವುದರಿಂದ?) ಕಳಿಸುತ್ತಿರುವುದು ವಿಪರ್ಯಾಸವೇ ಸರಿ. ಆ ಪ್ರತಿಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಪ್ರಮಾಣಿಸಿ ನೋಡಿದರೆ ಸತ್ಯ ತಿಳಿಯುತ್ತದೆ ಎಂಬ ನಂಬಿಕೆಯಿಂದ ....ಪ್ರಕಟಿಸಲಾಗಿದೆ.

ವಂದನೆಗಳು


No comments:

Post a Comment