Tuesday, February 28, 2012

Justice Delayed is Justice Denied-Final Appeal To the Commissioner



ಮಾನ್ಯರೇ,
ತಡವಾದ ನ್ಯಾಯ ತಿರಸ್ಕೃತವಾದ ನ್ಯಾಯಕ್ಕೆ ಸಮ ಎಂಬುದಾಗಿ ಕಾನೂನು ಶಾಸ್ತ್ರ ಹೇಳುತ್ತದೆ. ಅದಕ್ಕೆ ಕಾಲಮಿತಿ ಅಧಿನಿಯಮ ಅಮ್ಬುದಾಗಿ ಪ್ರತ್ಯೇಕ ಕಾನೂನೇ ಇದೆ. ಇದು ತಮಗೆ ಗೊತ್ತಿಲ್ಲ ಅಂತಾ ನಾನು ಇಲ್ಲಿ ಲಿಖಿಸುತ್ತಿಲ್ಲ. ಆದರೆ ನಾನು ನೀಡಿದ ನ್ಯಾಯಬದ್ಧ ಮನವಿಗಳಿಗೆ ನಿಮ್ಮ ಇಲಾಖೆ ಸ್ಪಂದಿಸುತ್ತಿರುವ ರೀತಿ ನನ್ನನ್ನು ಈ ಅಂತಿಮ ಮನವಿ ಬರೆಯುವಂತೆ ಪ್ರೇರೇಪಿಸಿದೆ.
ನಿಮ್ಮ ಇಲಾಖಾ ಅಧಿಕಾರಿಗಳಾದ ಶ್ರೀ ಕೆಂಪ ತಿಮ್ಮಯ್ಯ, ಶ್ರೀ ಟಿ ಎಲ್ ನಾರಾಯಣಸ್ವಾಮಿ ಇವರ ಮೇಲೆ ಕ್ರಮ ತೆಗೆದುಕೊಳ್ಳಲು ಕೋರಿ ನಿಮಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಿದೆ. ಅನುದಾನಕ್ಕೆ ಒಳಪಡದ ನೌಕರರ ಬಗ್ಗೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದಿದೆ. ಆದರೆ ಇದುವರೆವಿಗೂ ನೀವು ಯಾವ ಕ್ರಮ ತೆಗೆದುಕೊಂಡ ಬಗ್ಗೆ ನನಗೆ ಮಾಹಿತಿ ಇಲ್ಲ. ನಿಮ್ಮ ಇಲಾಖೆಯಿಂದಲೇ ನಿಮ್ಮ ಇಲಾಖಾ ಅಧಿಕಾರಿಗಳ ಬಗ್ಗೆ ಇಲಾಖಾ ಮುಖ್ಯಸ್ಥರಾದ ನೀವು ಮಾಹಿತಿ ಪಡೆಯಲು ತಿಂಗಳು ಬೇಕಾದರೆ ಇನ್ನು ಸಾಮಾನ್ಯ ನಾಗರಿಕನ ಪಾಡೇನು?
ಸರ್ಕಾರವು ತನ್ನ ಪತ್ರದಲ್ಲಿ ನನ್ನ ದೂರುಗಳನ್ನೂ ಲಗತ್ತಿಸಿ ಸಮಗ್ರ ವರದಿ ಸಲ್ಲಿಸುವಂತೆ ನಿಮಗೆ ೦೮/೧೧/೨೦೧೧ರಲ್ಲಿಯೇ ಸೂಚಿಸಿದ್ದರು ನೀವುಗಳು ಯಾವ ಕಾರಣದಿಂದ ವಿಳಂಬ ಧೋರಣೆ ಅನುಸರಿಸುತ್ತಿರುವಿರಿ ಎಂಬುದು ನನಗೆ ತಿಳಿಯುತ್ತಿಲ್ಲ.
ಮಾನ್ಯರೇ ದಯಮಾಡಿ ಅರ್ಥಮಾಡಿಕೊಳ್ಳಿ. ಸದರಿ ನೌಕರರ ಶಿಸ್ತು ಪ್ರಾಧಿಕಾರ ನೀವುಗಳು. ನಾನು ನಿಮ್ಮ ಅನುಮತಿ ಇಲ್ಲದೆ ಮೊಕದ್ದಮೆ ದಾಕಲಿಸಿದಲ್ಲಿ ಇಲಾಖಾ ಮುಖ್ಯಸ್ಥರನ್ನು ಸಹಾ ಆರೋಪಿಯನ್ನಾಗಿ ಮಾಡಬೇಕಾಗುತ್ತದೆ. ಕಾರಣ ಸದರಿ ನೌಕರರ ಮೇಲಾಧಿಕಾರಿಗಳು ತಾವೇ ಮತ್ತು ಅನುಮತಿಯನ್ನು ತಾವು ಇದುವರೆವಿಗೂ ನೀಡಿಲ್ಲ. ಆದರೆ ನಾನು ತಾನೇ ಎಷ್ಟು ದಿನಗಳವರೆಗೆ ಕಾಯಲು ಸಾಧ್ಯ? ತಾವೇ ಯೋಚಿಸಿ ನೋಡಿ.. ವಿಳಂಬ ಆದರೆ ಪ್ರಕರಣವು ಕಾಲವಿಲಂಬದ ಆಧಾರದ ಮೇಲೆ ವಜಾ ಆಗುವ ವಿಚಾರ ತಮಗೂ ಗೊತ್ತು.
ಸರ್ಕಾರದ ಪತ್ರ ಬಂದ ಮೂರೂ ನಿಮ್ಮಿಂದ ಕ್ರಮಜರುಗಿಸಲು ಆಗಿಲ್ಲವೆಂಬುದು ವಿಶಾದನಿಯ ಸಂಗತಿ. ತಮ್ಮ ನೆನಪಿನಿಂದ ಸರ್ಕಾರದ ಪತ್ರ ಅಳಿಸಿಹೊಗಿದ್ದಿರಬಹುದು. ಅದಕ್ಕೆ ಮತ್ತೊಂದು ಬಾರಿ ಅದನ್ನು ನಿಮ್ಮ ನೆನಪಿಗೆ ತರುವ ಪುಟ್ಟ ಪ್ರಯತ್ನ ಅಷ್ಟೇ ಇದು........ ಅದು ಇಗಲಾದರು ಕ್ರಮ ತೆಗೆದುಕೊಂತಿರಾ ಅನ್ನೋ ನಂಬಿಕೆ ಹೊತ್ತುಕೊಂಡು....ಪ್ರಕಟಿಸಿದ್ದೇನೆ....

Monday, February 27, 2012

ಕಾನೂನುಬಾಹಿರ ವ್ಯವಹಾರ: ಖಾಸಗಿ ಶಾಲೆಗಳಿಗೆ ಕಡಿವಾಣ-ಕಾಲೇಜುಗಳಿಗೂ ಅನ್ವಯ-ಪ್ರಜಾವಾಣಿ ವಾರ್ತೆ

ನವದೆಹಲಿ: ಖಾಸಗಿ ಶಾಲಾ ಆಡಳಿತ ಮಂಡಳಿಗಳೇ ಎಚ್ಚರ! ನೀತಿ- ನಿಯಮಗಳನ್ನು ಮೀರಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸುಲಿಗೆ ಮಾಡಿದರೆ ದಂಡನೆಗೆ ಒಳಗಾಗುವಿರಿ! ಪ್ರಾಥಮಿಕ- ಪ್ರೌಢ ಶಾಲೆಗಳ ಕಾನೂನು ಬಾಹಿರ ವ್ಯವಹಾರಗಳಿಗೆ ಕಡಿವಾಣ ಹಾಕಲು ಪರಿಣಾಮಕಾರಿಯಾದ ಮಸೂದೆಯೊಂದನ್ನು ರೂಪಿಸಿ, ಜಾರಿಗೊಳಿಸಲು ಕೇಂದ್ರದ ಯುಪಿಎ ಸರ್ಕಾರ ಉದ್ದೇಶಿಸಿದೆ. ಈ ಮಸೂದೆ ಕಿರಿಯ ಕಾಲೇಜುಗಳಿಗೂ ಅನ್ವಯವಾಗಲಿದೆ.

ಡೊನೇಷನ್ ಹಾವಳಿ ಸೇರಿದಂತೆ ಖಾಸಗಿ ಶಾಲೆಗಳ `ಕಾನೂನು ಬಾಹಿರ ವ್ಯವಹಾರ`ಗಳಿಗೆ ಕಡಿವಾಣ ಹಾಕಲು ಈ ಮಸೂದೆ ರೂಪಿಸಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಇಂಥ ಮಸೂದೆ ಈಗಾಗಲೇ ಸಂಸತ್ತಿನ ಒಪ್ಪಿಗೆಗಾಗಿ ಕಾದು ಕುಳಿತಿದೆ.

`ಖಾಸಗಿ ಶಾಲೆಗಳ ಮಾನ್ಯತೆ ನಿಯಮಾವಳಿ` (ಬೈಲಾ) ಮೀರುವ ಶಾಲೆಗಳ ಆಡಳಿತ ಮಂಡಳಿಗಳ ಮೇಲೆ ಸಿವಿಲ್- ಕ್ರಿಮಿನಲ್ ಮೊಕದ್ದಮೆ ಹೂಡಲು ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಮಸೂದೆಯಲ್ಲಿ ಅವಕಾಶವಿದೆ. ತಪ್ಪಿತಸ್ಥ ಶಾಲೆಗಳಿಗೆ 50 ಸಾವಿರದಿಂದ 5 ಲಕ್ಷದವರೆಗೆ ದಂಡ ಹಾಕಲು ಇಲ್ಲವೆ, ಆಡಳಿತ ಮಂಡಳಿ ಮುಖ್ಯಸ್ಥರನ್ನು 1 ತಿಂಗಳಿಂದ ಗರಿಷ್ಠ 3 ವರ್ಷಗಳವರೆಗೆ ಜೈಲಿಗೆ ಕಳುಹಿಸುವ ಅಧಿಕಾರವೂ ಇರುತ್ತದೆ.

ಈ ನಿಗದಿತ ಚೌಕಟ್ಟಿನೊಳಗೆ ಹೊಸ ಮಸೂದೆ ರೂಪಿಸಲು ಮಾನವ ಸಂಪನ್ಮೂಲ ಸಚಿವಾಲಯದ ರಾಜ್ಯ ಸಚಿವೆ ಪುರಂದರೇಶ್ವರಿ ನೇತೃತ್ವದಲ್ಲಿ 22ಸದಸ್ಯರ ಸಮಿತಿ ರಚಿಸಲಾಗಿದೆ. ಕೆಲ ರಾಜ್ಯಗಳ ಶಿಕ್ಷಣ ಸಚಿವರು ಮತ್ತು ಶಿಕ್ಷಣ ತಜ್ಞರು ಸದಸ್ಯರಾಗಿರುವ ಈ ಸಮಿತಿಯ ಮೊದಲ ಸಭೆ ಈಚೆಗೆ ನಡೆಯಿತು. ಡೊನೇಷನ್ ಹೆಸರಿನಲ್ಲಿ ಪೋಷಕರ `ಸುಲಿಗೆ` ನಡೆಯುತ್ತಿದೆ. `ಪ್ರಾಸ್ಪೆಕ್ಟಸ್`ಗಳನ್ನು ಹೆಚ್ಚಿನ ಬೆಲೆಗೆ ಮಾರಲಾಗುತ್ತಿದೆ.

ಅಗತ್ಯಕ್ಕಿಂತ ಹೆಚ್ಚು ಶುಲ್ಕ ವಸೂಲು ಮಾಡಲಾಗುತ್ತಿದೆ. ಪುಸ್ತಕ ಮತ್ತು ಸಮವಸ್ತ್ರಗಳನ್ನು ಶಾಲೆಯಲ್ಲೇ ಖರೀದಿಸುವಂತೆ ಒತ್ತಡ ಹಾಕಲಾಗುತ್ತಿದೆ ಎಂಬ ದೂರುಗಳು ಮೇಲಿಂದ ಮೇಲೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಸೂದೆ ಜಾರಿಗೆ ಉದ್ದೇಶಿಸಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಉನ್ನತ ಮೂಲಗಳು `ಪ್ರಜಾವಾಣಿ`ಗೆ ತಿಳಿಸಿವೆ.

ಪ್ರವೇಶ ಪಾರದರ್ಶಕವಾಗಿರಬೇಕು. ಒಟ್ಟು ಸೀಟುಗಳ ಪ್ರಮಾಣ, ಪ್ರವೇಶ ವಿಧಾನ, ಸ್ಥಳೀಯರಿಗೆ ಎಷ್ಟು ಸೀಟು ಕೊಡಲಾಗಿದೆ ಇತ್ಯಾದಿ ಮಾಹಿತಿ ಬಹಿರಂಗಪಡಿಸಬೇಕು ಎಂಬ ನಿಯಮಗಳಿದ್ದರೂ ಶಾಲಾ ಆಡಳಿತ ಮಂಡಳಿಗಳು ಪಾಲಿಸುತ್ತಿಲ್ಲ. ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆ ಪಡೆದ ಸಂದರ್ಭದಲ್ಲಿ ವಿದ್ಯಾರ್ಥಿಯಿಂದ ಪಡೆದ ಶುಲ್ಕ ಹಿಂತಿರುಗಿಸುತ್ತಿಲ್ಲ.

ವಿದ್ಯಾರ್ಥಿಗಳನ್ನು ಆಕರ್ಷಿಸಲು ಸುಳ್ಳು ಜಾಹಿರಾತು ನೀಡಲಾಗುತ್ತಿದೆ. ಮೈದಾನ, ಕ್ರೀಡಾ ಸಾಮಗ್ರಿ, ಗ್ರಂಥಾಲಯ ಇಲ್ಲದಿದ್ದರೂ ಹಣ ಕೀಳಲಾಗುತ್ತಿದೆ. ಕಟ್ಟಡ ನಿಧಿ ವಸೂಲು ಮಾಡಲಾಗುತ್ತಿದೆ. ಈ ರೀತಿಯ ಕಾನೂನುಬಾಹಿರ ವ್ಯವಹಾರಗಳಿಗೆ ವಿರಾಮ ಹಾಕಬೇಕಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ದೇಶದಲ್ಲಿ ಸುಮಾರು 18 ಲಕ್ಷ ಶಾಲೆಗಳಿವೆ. ಇದರಲ್ಲಿ ಶೇ. 37ರಷ್ಟು ಖಾಸಗಿ ಶಾಲೆಗಳು. ಸಿಬಿಎಸ್‌ಇ ಮಾನ್ಯತೆ ಪಡೆಯುವ ಸಮಯದಲ್ಲಿ ಶಾಲಾ ಆಡಳಿತ ಮಂಡಳಿಗಳು ನೀತಿ- ನಿಯಮ ಹಾಗೂ ಷರತ್ತು ಪಾಲಿಸುವುದಾಗಿ `ಮುಚ್ಚಳಿಕೆ` ಬರೆದುಕೊಡುತ್ತವೆ. ಅದನ್ನು ಪಾಲಿಸುವುದಿಲ್ಲ. ಕಾನೂನು ಉಲ್ಲಂಘಿಸುವ ಶಾಲೆಗಳಿಗೆ ದಂಡ ಹಾಕಲು ಈಗಿರುವ ಕಾನೂನಿನಲ್ಲೂ ಅವಕಾಶವಿದೆ.

ಮಾನ್ಯತೆಯನ್ನೂ ರದ್ದುಪಡಿಸಬಹುದು. ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ ಎಂಬ ಕಾರಣದಿಂದ ಇಂಥ ಕಠಿಣ ಕ್ರಮಗಳಿಗೆ ಮುಂದಾಗುತ್ತಿಲ್ಲ. ಈ ಮೃದು ಧೋರಣೆಯನ್ನು ಶಾಲೆಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಮೂಲಗಳು ಆರೋಪಿಸಿವೆ.

ಶಾಲೆಗಳು ಡೊನೇಷನ್ ಕೇಳಿದರೆ ಅಥವಾ ಹೆಚ್ಚಿನ ಶುಲ್ಕ ವಸೂಲು ಮಾಡಿದರೆ ವಿದ್ಯಾರ್ಥಿ ಪೋಷಕರು ಲಿಖಿತ ದೂರು ಸಲ್ಲಿಸಬಹುದು. ಮೂಲಸೌಲಭ್ಯಗಳ ಕೊರತೆ ಮತ್ತಿತರ ವೇಳೆ ಶಿಕ್ಷಣ ಅಧಿಕಾರಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಅಧಿಕಾರಿಗಳೂ ಒಳಗೊಂಡಂತೆ ಯಾರೂ ಬೇಕಾದರೂ ದೂರು ಕೊಡಬಹುದು.

ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್, ಮೊದಲ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ದೂರಿನ ವಿಚಾರಣೆ ನಡೆಸಲಿವೆ. ಅಷ್ಟೇ ಅಲ್ಲದೆ, `ಶಿಕ್ಷಣ ನ್ಯಾಯಮಂಡಳಿ` ಸ್ಥಾಪನೆಗೂ ಮಸೂದೆಯಲ್ಲಿ ಅವಕಾಶ ಇರುತ್ತದೆ.

prajavani Front Page 27.02.2012

Thursday, February 23, 2012

ಪ್ರಜಾವಾಣಿ ವಾರ್ತೆ-ಎಂಜಿನಿಯರಿಂಗ್ `ಸಾಮಾನ್ಯ ಪ್ರವೇಶ ಪರೀಕ್ಷೆ` (ಸಿಇಟಿ) ಮುಂದಿನ ಶೈಕ್ಷಣಿಕ ವರ್ಷದಿಂದ (2013) ಜಾರಿಗೆ ಬರುವ ಕುರಿತು ಅನಿಶ್ಚತತೆ

ನವದೆಹಲಿ: ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ಏಕರೂಪದ ಎಂಜಿನಿಯರಿಂಗ್ `ಸಾಮಾನ್ಯ ಪ್ರವೇಶ ಪರೀಕ್ಷೆ` (ಸಿಇಟಿ) ಮುಂದಿನ ಶೈಕ್ಷಣಿಕ ವರ್ಷದಿಂದ (2013) ಜಾರಿಗೆ ಬರುವ ಕುರಿತು ಅನಿಶ್ಚತತೆ ತಲೆದೋರಿದೆ. ಅನೇಕ ರಾಜ್ಯಗಳು ತಮ್ಮ ಅಧೀನದಲ್ಲಿರುವ ಕಾಲೇಜುಗಳಿಗೆ ಸಿಇಟಿ ಅನ್ವಯಿಸುವ ಸಂಬಂಧ ಖಚಿತ ಬದ್ಧತೆ ನೀಡದಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.

ಆದರೆ, ಕೇಂದ್ರ ಸರ್ಕಾರದ ಅಧೀನದ ಕಾಲೇಜುಗಳಲ್ಲಿ ಹೊಸ ವ್ಯವಸ್ಥೆ ಮುಂದಿನ ವರ್ಷದಿಂದಲೇ ಜಾರಿಗೆ ಬರಲಿದೆ.

ಏಕರೂಪ ಸಿಇಟಿ ಆರಂಭ ಕುರಿತು ರಾಜ್ಯಗಳ ಜತೆ ಸಮಗ್ರವಾಗಿ ಸಮಾಲೋಚಿಸಬೇಕೆಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ 2014ರ ಶೈಕ್ಷಣಿಕ ವರ್ಷದಲ್ಲೂ ಇದು ಜಾರಿಯಾಗುವ ಕುರಿತು ಅನುಮಾನ ತಲೆದೋರಿದೆ. ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಸಮ್ಮುಖದಲ್ಲಿ ಬುಧವಾರ ನಡೆದ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಏಕರೂಪ ಸಿಇಟಿ ಕುರಿತು ಸಮಗ್ರವಾಗಿ ಚರ್ಚೆ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

ಮಾನವ ಸಂಪನ್ಮೂಲ ಸಚಿವಾಲಯ ತನ್ನ ವ್ಯಾಪ್ತಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಮುಂದಿನ ವರ್ಷದಿಂದ ಏಕರೂಪ ಸಿಇಟಿ ಜಾರಿಗೆ ಕಟಿಬದ್ಧವಾಗಿದೆ. ಇದರಿಂದ ದೇಶದ 15 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), 30 ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ಮಾಲಜಿ (ಎನ್‌ಐಟಿ), 4 ಮಾಹಿತಿ ತಂತ್ರಜ್ಞಾನ ಕಾಲೇಜ್ (ಐಐಐಟಿ), ಐದು ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್) ಹಾಗೂ ಡೀಮ್ಡ ಕಾಲೇಜುಗಳಿಗೆ ಸಾಮಾನ್ಯ ಪರೀಕ್ಷೆ ಪದ್ದತಿ ಅನ್ವಯವಾಗಲಿದೆ.

ಶಿಕ್ಷಣ ಸಚಿವರ ಸಭೆಯಲ್ಲಿ ಸಮಗ್ರವಾಗಿ ಚರ್ಚೆಸಿದ ಬಳಿಕ 2013ರಿಂದ ಏಕರೂಪ ಸಿಇಟಿ ಜಾರಿಗೆ ತಾತ್ವಿಕ ಒಪ್ಪಿಗೆ ಕೊಡಲಾಯಿತು. ಆದರೆ, ಸಾಮಾನ್ಯ ಪ್ರವೇಶ ಪರೀಕ್ಷೆ ಜತೆಗೆ ರಾಜ್ಯ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಗೂ ಕೃಪಾಂಕ ನೀಡಲು ಮಾನವ ಸಂಪನ್ಮೂಲ ಸಚಿವಾಲಯ ಸಮ್ಮತಿಸಿದ ಬಳಿಕ ಈ ಏಕರೂಪ ಪರೀಕ್ಷೆ ಪದ್ಧತಿ ಜಾರಿಗೆ ಸಮ್ಮತಿಸಲಾಯಿತು. 2013ರಲ್ಲಿ ಸಿಇಟಿ ಎರಡು ಸಲ ಅಂದರೆ ಏಪ್ರಿಲ್- ಮೇ ಹಾಗೂ ನವೆಂಬರ್- ಡಿಸೆಂಬರ್‌ನಲ್ಲಿ ನಡೆಯಲಿದ್ದು ಫಲಿತಾಂಶ ಎರಡು ವರ್ಷಗಳ ಅವಧಿಗೆ ಮಾನ್ಯತೆ ಹೊಂದಿರುತ್ತದೆ. ಅನಂತರ ಇದನ್ನು ವರ್ಷಕ್ಕೆ ಮೂರು, ನಾಲ್ಕು ಸಲ ನಡೆಸಲಿದ್ದು ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ತಿಳಿಸಿದರು.

ಏಕರೂಪ ಸಿಇಟಿ ಕೇಂದ್ರ ಮತ್ತು ರಾಜ್ಯ ಅನುಸರಿಸುತ್ತಿರುವ ಮೀಸಲು ನೀತಿಗೆ ಯಾವುದೇ ರೀತಿಯಲ್ಲೂ ಅಡ್ಡಿ ಮಾಡದು ಎಂದು ಸ್ಪಷ್ಟಪಡಿಸಿದರು.

ರಾಜ್ಯ ಮಟ್ಟದ ಎಂಜಿನಿಯರಿಂಗ್ ಪ್ರವೇಶಕ್ಕೆ ರಾಜ್ಯಗಳು ತಮ್ಮ ಶಿಕ್ಷಣ ಮಂಡಳಿ ಪರೀಕ್ಷೆ ಜತೆಗೆ ತಮಗೆ ಅಗತ್ಯ ಕಂಡಷ್ಟು ಕೃಪಾಂಕ ನೀಡಬಹುದು. ಆದರೆ, ಕನಿಷ್ಠ ಶೇ. 40 ಕೃಪಾಂಕ ಕಡ್ಡಾಯ. ತಮಿಳುನಾಡಿನಂತೆ ಶೇ. 100 ಕೃಪಾಂಕ ಬೇಕಾದರೂ ನೀಡಬಹುದು. ಇದರಿಂದ ಉದ್ದೇಶಿತ ವ್ಯವಸ್ಥೆಗೆ ತೊಂದರೆ ಆಗದು ಎಂದರು.

Read the thread here

Wednesday, February 22, 2012

ಆಯುಕ್ತರು ನನ್ನ ಪತ್ರಗಳ ಮೇಲೆ ಕ್ರಮ ತೆಗೆದುಕೊಳ್ಳಲು ಆರು ತಿಂಗಳು ಬೇಕೇ?

ಮಾನ್ಯರೇ,
ನಾನು ತಮ್ಮ ಇಲಾಕೆಯಲ್ಲಿ ಸಲ್ಲಿಸಿದ ದೂರುಗಳ ಮೇಲೆ ಕ್ರಮ ತೆಗೆದುಕೊಂಡು ನನಗೆ ಹಿಂಬರಹ ನೀಡಲು ತಮಗೆ ಸುಮಾರು ಆರು ತಿಂಗಳುಗಳ ಕಾಲಾವಕಾಶ ನೀಡಿದ್ದರು ಇದುವರೆವಿಗೂ ನನ್ನ ದೂರಿನ ಮೇಲೆ ಯಾವ ಕ್ರಮ ತೆಗೆದುಕೊಂಡಿರುವಿರಿ ಎಂಬ ಬಗ್ಗೆ ಕನಿಷ್ಠ ಒಂದು ಹಿಂಬರಹವನ್ನಾದರು ನೀದಿಲ್ಲದಿರುವ ಇಲಾಖೆ ಕಾರ್ಯವೈಖರಿ ಆಕ್ಷೇಪಾರ್ಹ.

೧. ಶ್ರೀ ಕೆಂಪತಿಮ್ಮಯ್ಯ -ಇವರ ಮೇಲೆ ಮೊಕದ್ದಮೆ ದಾಕಲಿಸುವ ಕುರಿತು
೨. ಶ್ರೀ, ಟಿ ಎಲ್ ನಾರಾಯಣಸ್ವಾಮಿ ಇವರ ಮೇಲೆ ನ್ಯಾಯಾಂಗ ನಿಂದನಾ ಪ್ರಕರಣ ಹೂಡುವ ಬಗ್ಗೆ
೩. ಸರ್ವೋದಯ ಕಾಲೇಜು, ತುಮಕೂರು ಕಾಲೇಜಿನ ಕಡತಗಳು ಕಾಣೆಯಾಗಿರುವ ಬಗ್ಗೆ
೪. ಉದಯಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಅನುದಾನಕ್ಕೆ ಒಳಪಡದೇ ಸುಮಾರು ೨೫ ವರ್ಷಗಳಿಂದ ಇಲಾಖೆಯಿಂದ ವೇತನಾನುದಾನ ಪಡೆಯುತ್ತಿರುವ ಬಗ್ಗೆ

ದಾಕಲೆಗಳ ಸಮೇತ ನಿಮಗೆ ದೂರು ಸಲ್ಲಿಸಲಾಗಿದ್ದರು ಇದುವರೆವಿಗೂ ನಿಮ್ಮಿಂದ ಬಗ್ಗೆ ಯಾವುದೇ ಮಾಹಿತಿ ಬರದಿರುವುದು ವಿಶಾದನಿಯ. ಹೀಗಾದಲ್ಲಿ ಸಾರ್ವಜನಿಕರು ಇಲಾಕೆಯ ಮೇಲೆ ಹೇಗೆ ತಾನೇ ನಂಬಿಕೆ ಇಡಲು ಸಾಧ್ಯ ?
ಈಗಾಗಲೇ ನನ್ನ ಹಿಂದಿನ ಮೇಲ್ ಒಂದರಲ್ಲಿ ಪ್ರಕರಣ ದಾಕಲಿಸುವುದಾಗಿ ತಿಳಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಕಲಿಸಲು ಮೇಲ್ ತಲುಪಿದ ಒಂದು ವಾರದೊಳಗೆ ತಮ್ಮ ಕಚೇರಿಯಿಂದ ಅನುಮತಿ/ಹಿಂಬರಹ ಬರದಿದ್ದಲ್ಲಿ ಉದ್ದೇಶಪೂರ್ವಕವಾಗಿ ಬ್ರಷ್ಟ ಅಧಿಕಾರಿಯನ್ನು ರಕ್ಷಿಸಲು ಇಲಾಕಾ ಹಿರಿಯ ಅಧಿಕಾರಿಗಳು ಯತ್ನಿಸುತ್ತಿದ್ದಾರೆಂದು ಭಾವಿಸಿ ತಮ್ಮ ಅನುಮತಿಗಾಗಿ ಕಾಯದೆ ಪ್ರಕರಣ ದಾಖಲಿಸುತ್ತೆನೆಂಬ ವಿಚಾರವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಘನ ನ್ಯಾಯಾಲಯದ ಮುಂದೆ ತಮಗೆ ಹಿಂದೆ ಕಳುಹಿಸಿರುವ ಮೇಲ್ ಗಳನ್ನೂ ದಾಕಲೆಗಳಾಗಿ ಹಾಜರುಪಡಿಸಲಾಗುವುದು. ವಿಚಾರ ಅತಿ ಪ್ರಮುಖವಾದುದೆಂದು ಪರಿಗಣಿಸಿ ಆದ್ಯತೆಯ ಮೇರೆಗೆ ಕ್ರಮ ತೆಗೆದುಕೊಳ್ಳಲು ಕೋರಿದೆ.

Monday, February 13, 2012

ಖಾಲಿಯಾದ ಒಂದು ಹುದ್ದೆಗೆ ಮೂರೂ ಜನರ ನೇಮಕಾತಿ ಅನುಮೋದನೆ: ಬಂಪರ್ ಸ್ಕೀಮ್-ಸರ್ಕಾರಕ್ಕೆ ಸುಮಾರು ಹದಿನೈದು ವರ್ಷಗಳಿಂದ ಪಂಗನಾಮ !!!




ಮಾನ್ಯ ಆಯುಕ್ತರೇ,
ನಿಮ್ಮೊಂದಿಗೆ ನಾನು ದಿನಾಂಕ ೨೫.೧೧.೨೦೧೧ ರಂದು ಸಿ.ಇ. ಟಿ ಕಚೇರಿಯಲ್ಲಿ ಚರ್ಚಿಸಿದಂತೆ ನಾನು ಈಗ ತಮಗೆ ನಿಮ್ಮ ಇಲಾಕೆಯಲ್ಲಿ ಸರ್ಕಾರಕ್ಕೆ ಪಂಗನಾಮ ಹಾಕಿ ಸರ್ಕಾರದ ಹಣ ಎತ್ತಿಹಾಕಿ ಗುಳುಂ ಮಾಡಲು ಇಲಾಕೆಯಲ್ಲಿ ಇರುವ ಒಂದು ಸ್ಕೀಮ್ ಬಗ್ಗೆ ಇಲ್ಲಿ ಬರೆಯುತ್ತಿದ್ದೇನೆ.

ಸರ್ವೋದಯ ಪದವಿ ಪೂರ್ವ ಕಾಲೇಜು, ತುಮಕೂರು ಇದು ಸರ್ಕಾರಕ್ಕೆ ವಂಚಿಸಿ ಮಂಜೂರಾದ ಕೇವಲ ಒಂದು ಅನುದಾನಿತ ಹುದ್ದೆಗೆ ವರ್ಷಗಳ ಅಂತರದಲ್ಲಿ ಮೂರೂ ಜನರನ್ನು ನೇಮಿಸಿ, ಇಲಾಖೆಯಿಂದ ಅನುದಾನವನ್ನು ಪಡೆಯುತ್ತಿರುವ ವಿಚಾರವು ದಿನಾಂಕ ೨೫.೧೧.೨೦೧೧ ರಂದು ನಿಮಗೆ ತಿಳಿಸಿದ್ದೆನು. ಅದಕ್ಕೆ ಪ್ರತಿಯಾಗಿ ದಾಕಲೆಗಳನ್ನು ಕೊಡಲು ತಾವು ತಿಳಿಸಿದ್ರಿ. ನಾನು ಇ ವಿಚಾರವಾಗಿ ದಾಖಲೆಗಳ ಸಮೇತ ದಿನಾಂಕ ೨೩.೧೦.೨೦೦೯ರದು ಕೊಟ್ಟ ದೂರು ಮತ್ತು ಅದರ ಕಡತ ಕೆಳೆದುಹೋಗಿದೆ ಅಂತಾ ನಿಮ್ಮ ಇಲಾಖೆಯಿಂದ ಬೇಜವಾಬ್ದಾರಿ ನಿರ್ಲಕ್ಷ್ಯತೆಯ ಉತ್ತರ ಬಂದ ಬಗ್ಗೆ ಮತ್ತು ಆ ಉತ್ತರದ ಪ್ರತಿಯನ್ನು ತಮಗೆ ಕಳುಹಿಸಿದ್ದೆನು.

ಶ್ರೀ ಜಿ ಸೀತಾರಾಂ ಎಂಬ ವ್ಯಕ್ತಿ ಸರ್ವೋದಯ ಪದವಿ ಪೂರ್ವ ಕಾಲೇಜು, ತುಮಕೂರು ಫಿಜಿಕ್ಸ್ ಉಪನ್ಯಾಸಕನ ಹುದ್ದೆ ಹಾಗು ಪ್ರಾಚಾರ್ಯನ ಹುದ್ದೆ ಖಾಲಿ ಆಗಬೇಕು. ಕಾರಣ ಆತ ಈ ಎರಡೂ ಹುದ್ದೆ ಅಲಂಕರಿಸಿದ್ದರು. ಆದರೆ ಅಲ್ಲಿ ನಡೆದದ್ದೇ ಬೇರೆ.

೧೯೯೩ರಲ್ಲಿ ರಸಾಯನಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಕಮಲಾಕ್ಷಿ ಇಲಾಕೆಯಿಂದ ಸೀತಾರಾಂ ನಿವೃತ್ತಿ ಹೊಂದಿದ ಹುದ್ದೆಗೆ (?) ಅನುಮೋದನೆಗೆ ಒಳಪಡುತ್ತಾರೆ. ಪಿಜಿಕ್ಸ್ ಉಪನ್ಯಾಸಕನ ಹುದ್ದೆ ತೆರವಾದರೆ ಕೆಮಿಸ್ಟ್ರಿ ಉಪನ್ಯಾಸಕರನ್ನು ತುಂಬಿಕೊಳ್ಳಲು ಯಾವ ನಿಯಮ ತಿಳಿಸುತ್ತದೆಯೋ ಕಾಣೆ. ಒಂದು ವೇಳೆ ನಿಯಮ ಹಾಗೆ ಇದ್ದರು ಕಥೆ ಅಲ್ಲಿಗೇ ಮುಗಿಯಲಿಲ್ಲ.

೧೯೯೫ರಲ್ಲಿ ಶ್ರೀ ರಂಗನಾಥ್ ಎನ್ನುವ ವ್ಯಕ್ತಿ ಸೀತಾರಾಂ ನಿವೃತ್ತಿ ಹೊಂದಿದ ಹುದ್ದೆಗೆ (?) ಅನುಮೋದನೆಗೆ ಒಳಪಡುತ್ತಾರೆ. ಅಲ್ಲಿಗೇ ಸೀತಾರಾಂ ನಿವೃತ್ತಿಯಿಂದ ತೆರವಾದ ಹುದ್ದೆಗೆ ಎರಡನೇ ಅನುಮೋದನೆ/ವೇತನ ಬಿಡುಗಡೆ ಆಯ್ತು.


೧೯೯ರಲ್ಲಿ ಶ್ರೀ ಬಸಪ್ಪ ಎನ್ನುವ ವ್ಯಕ್ತಿ ಸೀತಾರಾಂ ನಿವೃತ್ತಿ ಹೊಂದಿದ ಹುದ್ದೆಗೆ (?) ಅನುಮೋದನೆಗೆ ಒಳಪಡುತ್ತಾರೆ. ಅಲ್ಲಿಗೇ ಸೀತಾರಾಂ ನಿವೃತ್ತಿಯಿಂದ ತೆರವಾದ ಹುದ್ದೆಗೆ ಮೂರನೇ ಅನುಮೋದನೆ/ವೇತನ ಬಿಡುಗಡೆ ಮಾಡುತ್ತದೆ ಇಲಾಕೆ. ಖಾಲಿ ಇದ್ದದ್ದು ಒಂದು ಹುದ್ದೆ.

ಈ ಮೋಸ ತಿಳಿದ ಶ್ರೀ ರಂಗನಾಥ್ ಮತ್ತು ಶ್ರೀ ಬಸಪ್ಪ ರಾಜಿನಾಮೆ ನೀಡಿ ಹೊರನಡೆಯುತ್ತಾರೆ. ಆದರೆ ಮತ್ತೆ ಅವರ ರಾಜಿನಾಮೆಯಿಂದ ತೆರವಾದ ಹುದ್ದೆಗಳಿಗೆ ನೇಮಕಾತಿ ಅನುಮೋದನೆ ಮಾಡಿ ವೇತನ ಬಿಡುಗಡೆ ಮಾಡುತ್ತಿದೆ ಇಲಾಕೆ. ಅಂದರೆ ಕೇವಲ ಒಂದು ಹುದ್ದೆ ಇಲಾಖೆ/ಸರ್ಕಾರದಿಂದ ಮಂಜುರಾದರೆ ಸಾಕು, ಮೂರೂ ಜನ ಸಂಬಳ ಪಡೆಯಲು ಸ್ಕೆಚ್ ಹಾಕಬಹುದು ಮತ್ತು ಕಾರ್ಯಗತಗೊಳಿಸಲು ಬಹುದು.

ಈ ತರಹದ ಇನ್ನೆಷ್ಟು ಅನುಮೋದನೆಗನೂ ಇಲಾಕೆ ಮಾಡಿದೆಯೋ ದೇವರಿಗೆ ಗೊತ್ತು. ಮಾನ್ಯ ಆಯುಕ್ತರು ಪದವಿ ಪೂರ್ವ ಶಿಕ್ಷಣ ಇಲಾಕೆಯ ಕಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ಸರ್ಕಾರದಿಂದ/ಆರ್ಥಿಕ ಇಲಾಖೆಯಿಂದ ಮಂಜುರಾಗಿರುವ ಒಟ್ಟು ಹುದ್ದೆಗಳು ಹಾಗು ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ಬಗ್ಗೆ ಏಕೆ ಮಾಹಿತಿ ಪಡೆದು ಕ್ರಮ ಜರುಗಿಸಬಾರದು?

ಇಲಾಖೆಯ ಕಡತದಲ್ಲಿಯೇ ಇದ್ದ ತ್ಯಾಬುಳರ್ ಮಾದರಿಯ ಮಾಹಿತಿಯನ್ನು ಇಲಾಕೆಯ ಆಯುಕ್ತರಿಗೆ ಹೊರಗಿನ ವ್ಯಕ್ತಿಯೊಬ್ಬ ಈ ತರಹ ಮೇಲ್ ಮೂಲಕ (ದೂರಿನ ಕಡತ ಕಳೆದಿರುವುದರಿಂದ?) ಕಳಿಸುತ್ತಿರುವುದು ವಿಪರ್ಯಾಸವೇ ಸರಿ. ಆ ಪ್ರತಿಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಪ್ರಮಾಣಿಸಿ ನೋಡಿದರೆ ಸತ್ಯ ತಿಳಿಯುತ್ತದೆ ಎಂಬ ನಂಬಿಕೆಯಿಂದ ....ಪ್ರಕಟಿಸಲಾಗಿದೆ.

ವಂದನೆಗಳು


Sunday, February 12, 2012

ಕೆಂಪ ತಿಮ್ಮಯ್ಯನಿಂದ ಮತ್ತೊಂದು ದುರ್ನಡತೆ: ಆಯುಕ್ತರಿಗೆ ಚಳ್ಳೆ ಹಣ್ಣು ತಿನ್ನಿಸಿದ ಧೀರ: ಉಪನ್ಯಾಸಕನಿಗೆ ಸೇವಾ ವಿಚ್ಸಿನ್ನತೆ ತಂದಿಟ್ಟ ಬ್ರಷ್ಟ






ಕೆಂಪ ತಿಮ್ಮಯ್ಯನಿಂದ ನನ್ನ ಮತ್ತೊಬ್ಬ ಕಕ್ಷಿದಾರನಿಗೆ ಆದ ಅನ್ಯಾಯದ ಬಗ್ಗೆ ಈ ಬರಹದಲ್ಲಿ ಬೆಳಕು ಚೆಲ್ಲಿ ಕೆಮ್ಪತಿಮ್ಮಯ್ಯನ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು ಕೋರುತ್ತೇನೆ.

ಶ್ರೀ ಸಿದ್ದಪ್ಪ, ಆಂಗ್ಲಭಾಷಾ ಉಪನ್ಯಾಸಕರ ವರ್ಗಾವಣೆಯ ನಂತರ ಕೆಲಸಕ್ಕೆ ಹಾಜರು ಪಡಿಸಿಕೊಳ್ಳದ ಬಗ್ಗೆ ನಿಮ್ಮ ಇಲಾಕೆಯ ಕಡತ ಸಂಕ್ಯೆ ಯುಯು ೪೪/೬೦/೨೦೦೭-೦೮ರಲ್ಲಿ ಮಾಹಿತಿ ಇದೆ.
ನಿಮ್ಮ ಕಚೇರಿ ಯಿಂದಲೇ ವರ್ಗಾವಣೆ ಆದೇಶ ಇದ್ದರು ಆತನನ್ನು ವರ್ಗಾಯಿಸಲ್ಪಟ್ಟ ಕಾಲೇಜಿನವರು ಕೆಲಸಕ್ಕೆ ಹಾಜರು ಪಡಿಸಿ ಕೊಳ್ಳಲಿಲ್ಲ. ಕೆಲಸದಿಂದ ರಿಲಿವ್ ಮಾಡಿದ ಕಾಲೇಜು ಸಹಾ ಮತ್ತೆ ಕೆಲಸಕ್ಕೆ ಹಾಜರು ಪಡಿಸಿಕೊಳ್ಳಲು ತಮ್ಮ ಇಲಾಕೆಯ್ ಆದೇಶ ಕೇಳಿತು. ಕಾರಣ ಶ್ರೀ ಸಿದ್ದಪ್ಪ ಇಲಾಕೆಗೆ, ಸರ್ಕಾರಕ್ಕೆ, ಕಾಲೇಜಿನ ಪ್ರಾಂಶುಪಾಲರಿಗೆ, ಆಡಳಿತ ಮಂಡಳಿಗೆ ಹಾಗು ಜಿಲ್ಲಾ ಉಪನಿರ್ದೆಶಕರಿಗೂ ಮನವಿ ಸಲ್ಲಿಸುತ್ತಾ ಬಂದರೂ ಸುಮಾರು ಐದು ತಿಂಗಳು ಆತನಿಗೆ ವೇತನವನ್ನಾಗಲಿ, ಸೇವೆಯನ್ನಾಗಲಿ ನೀಡಲಿಲ್ಲ.
ಅದನ್ನು ಕೋರಿ ಶ್ರೀ ಸಿದ್ದಪ್ಪ ಇಲಾಕೆಗೆ ಮನವಿ ಸಲ್ಲಿಸಲಾಗಿ ಕಡತದಲ್ಲಿ ತಪ್ಪು ತಪ್ಪು ಮಾಹಿತಿ ಮಂಡಿಸಿ ಇಲಾಕಾ ನಿರ್ದೇಶಕರನ್ನು ತಪ್ಪು ದಾರಿಗೆ ಎಳೆದು, ನನ್ನ ಕಕ್ಷಿದಾರ ಶ್ರೀ ಸಿದ್ದಪ್ಪನವರಿಗೆ ಅನ್ಯಾಯ ಎಸಗಿರುತ್ತಾರೆ. ನಾನು ಇ ಹಿಂದೆ ತಮಗೆ ತಿಳಿಸಿದಂತೆ ಇ ಬ್ರಷ್ಟ ಅಧಿಕಾರಿಯ ಒಂದೊಂದೇ ಹಗರಣಗಳು ಬೆಳಕಿಗೆ ಬರುತ್ತಿವೆ. ಈತ ಕೈ ಇಡುವ ಎಲ್ಲಾ ಕಡತಗಳು ವಿರುಪಗೊಳಿಸಲ್ಪದುತ್ತವೆ. ವರದಿಯನ್ನೇ ಬದಲಿಸುವುದರಲ್ಲಿ ಈತ ಎತ್ತಿದ ಕೈ. ಇಲ್ಲಿ ಆತ ಎಸಗಿರುವ ತಪ್ಪಿನಿಂದಾಗಿ ಶ್ರೀ ಸಿದ್ದಪ್ಪ ಎಂಬ ಉಪನ್ಯಾಸಕನ ಸೇವೆಯಲ್ಲಿ ವಿಚ್ಸಿನ್ನತೆ ಉಂಟಾಗಿದೆ.
ಇಂತಹಾ ಲಜ್ಜೆಗೇಡಿ ಸಿಬ್ಬಂದಿಯಿಂದಾಗಿ ನೊಂದ ವ್ಯಕ್ತಿಗಳು ನ್ಯಾಯಾಲಯಕ್ಕೆ ಮೊರೆ ಹೋದರೆ ನಿರ್ದೇಶನಾಲಯದ ಮಾನ ಹರಾಜಾಗುತ್ತದೆ. ಖುದ್ದಾಗಿ ಆಯುಕ್ತರೇ ಎರಡು ಸಾರಿ ನಿಯಮಗಳನ್ನು, ಸರ್ಕಾರದ ಪತ್ರಗಳನ್ನು ಮಂಡಿಸಲು ಹೇಳಿದರೂ ಆಯುಕ್ತರನ್ನೇ ದಿಕ್ಕು ತಪ್ಪಿಸಿ ಕಡತದಲ್ಲಿ ತಪ್ಪು ಮಂಡಿಸಿದ ಶ್ರೀ ಕೆಂಪತಿಮ್ಮಯ್ಯನ ವಿರುದ್ಧ ಕ್ರಮ ತೆಗೆದುಕೊಳ್ಳಲು ತಮ್ಮನ್ನು ಕೋರುತ್ತೇನೆ.
ಆತ ಮಾಡಿದ ತಪ್ಪು ಹಾಗು ಇಲಾಕೆಯಲ್ಲಿರುವ ದಾಕಲೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

Tuesday, February 07, 2012

ಕೆಂಪತಿಮ್ಮಯ್ಯ ದೂರು ಇದ್ದರೂ ಪಿಂಚಣಿಗೆ ಶಿಫಾರಸ್ಸು ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದನ್ನು ತೋರಿಸುವ ದಾಖಲೆ





ಕೆಂಪತಿಮ್ಮಯ್ಯನೆ ದೂರು ಇದ್ದರೂ ಪಿಂಚಣಿಗೆ ಶಿಫಾರಸ್ಸು ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದನ್ನು ತೋರಿಸುವ ದಾಖಲೆಗಳನ್ನು ಪ್ರಕಟಿಸಲಾಗಿದೆ. ಮಾನ್ಯ ನಿರ್ದೇಶಕರು ನೋಡಿ ಸೂಕ್ತ ಕ್ರಮ ತೆಗೆದುಕೊಳ್ಳಲಿ....

ತುಮಕೂರು ಉಪನಿರ್ದೇಶಕರ ಕಚೇರಿಯಲ್ಲಿ ದಾಕಲೆಗಳ ಕೊಠಡಿ ಇಲ್ಲ-ಉಪನಿರ್ದೇಶಕ ರಿಂದ ನಿರ್ದೇಶಕರಿಗೆ ಪತ್ರ-ಬದಲಾಗದ ಚಿತ್ರ


ತುಮಕೂರು ಜಿಲ್ಲೆಯ ಉಪನಿರ್ದೇಶಕರ ಕಚೇರಿಯು ಕಡತಗಳ ನಾಶಕ್ಕೆ ಇಲಾಕೆ ಇಟ್ಟುಕೊಂಡಿರುವ ಕಚೇರಿ ಎನಿಸುತ್ತದೆ. ಗೆದ್ದಲು ಹತ್ತುತ್ತಿರುವ ಕಡತಗಳು, ಸಾರ್ವಜನಿಕರಿಗೆ ನಿಂತುಕೊಳ್ಳಲು ಇರದ ಜಾಗ, ಸಿಬ್ಬಂದಿಗಳಿಗೆ ಮೂತ್ರ ವಿಸರ್ಜನೆಗೂ ಇರದ ಟಾಯ್ಲೆಟ್, ಮಹಿಳಾ ಸಿಬ್ಬಂದಿಗಳ ಪಾಡು ಹೇಳತೀರದು ..... ಪಕ್ಕದಲ್ಲಿಯೇ ಇರುವ ಸರ್ಕಾರಿ ಕಾಲೇಜಿನ ಶವ್ಚಲಾಯ ದಲ್ಲಿ ನೀರಿರದ ಪರಿಸ್ಥಿತಿ ಅಬ್ಬಾ....ಸಾಕಪ್ಪಾ ಸಾಕು ಎನಿಸುವಂತಹಾ ವಾತಾವರಣ. ಕಾಸಗಿ ಕಾಲೇಜು ಮಂಜುರಾತಿಯಲ್ಲಿ ಕಾಲೇಜಿನ ಸುತ್ತಲು ನಿರ್ಮಲ ವಾರಾವರಣ ಇರಬೇಕೆಂದು ಹೇಳುವ ಇಲಾಕೆ ಉಪನಿರ್ದೇಶಕರ ಕಚೇರಿ ಸುತ್ತ ಕೊಳಕನ್ನು ತೆಗೆದುಹಾಕುವ ಬಗ್ಗೆ ಕ್ರಮ ವಹಿಸಬಾರದೇಕೆ?

ನಿರ್ದೇಶಕರು ಈಗ ಬಗ್ಗೆ ಗಮನ ಹರಿಸುತ್ತಾರೆ ಎಂದು ನಂಬಿರುವೆ........

ಬಗ್ಗೆ ಉಪನಿರ್ದೇಶಕರು (ಅಂದಿನ ಪರಭಾರೆ-ಶ್ರೀ ರಂಗನಾಥ್ ಅಲ್ಲ. ಅವರಿಗೆ ಇದನ್ನು ತಿಳಿಸಲು ಪುರಸೊತ್ತಿಲ್ಲ) ನಿರ್ದೇಶಕರಿಗೆ ಬರೆದ ಪತ್ರದ ಪ್ರತಿ ಇಲ್ಲಿ ಪ್ರಕಟಿಸಲಾಗಿದೆ.

Sunday, February 05, 2012

ಪದವಿ ಪೂರ್ವ ಶಿಕ್ಷಣ ಇಲಾಕೆಯಲ್ಲಿ ಕಡತ ತಿದ್ದುವಿಕೆ ನಿರ್ವಹಣೆ ಬಗ್ಗೆ ಕಾನೂನು ಇಲಾಕೆಯ ಸ್ಪಷ್ಟ ಅಭಿಪ್ರಾಯ: ಈಗಿನ ದಕ್ಷ ನಿರ್ದೇಶಕರಿಂದ ಬದಲಾವಣೆಯ ಗಾಳಿಯ ನಿರೀಕ್ಷೆ

ಮಾನ್ಯ ನಿರ್ದೇಶಕರೇ.
ಪದವಿ ಪೂರ್ವ ಶಿಕ್ಷಣ ಇಲಾಕೆಯಲ್ಲಿ ಕಡತ ನಿರ್ವಹಣೆ ಸರಿಯಿಲ್ಲ, ಕಡತಗಳ ತಿದ್ದುವಿಕೆ ಮುಂತಾದ ಗಂಭೀರ ಆರೋಪ ಮಾಡಿ ನಾನು ಸರ್ಕಾರಕ್ಕೆ ದೂರು ಸಲ್ಲಿಸಿದ್ದ ಬಗ್ಗೆ ದಿನಾಂಕ ೦೩.೦೨.೨೦೧೨ ರ ಬ್ಲಾಗ್ ಬರಹದಲ್ಲಿ ತಿಳಿಯಪಡಿಸಲಾಗಿದೆ. ನಾನು ಕೊಟ್ಟ ದೂರಿನ ಆಧಾರದ ಮೇಲೆ ಕಡತವನ್ನು ಕಾನೂನು ಇಲಾಕೆಯ ಅಭಿಪ್ರಾಯಕ್ಕಾಗಿ ಕಳುಹಿಸಲಾಗಿದ್ದು, ಕಾನೂನು ಇಲಾಕೆಯ ಅಭಿಪ್ರಾಯ ಹೀಗಿದೆ ನೋಡಿ :-

ಹೀಗಾದರು ಇಲಾಕೆಯಲ್ಲಿ ಬದಲಾವಣೆ ಆಗಲಿಲ್ಲ. ಈಗ ಬದಲಾವಣೆಯ ಸುವರ್ಣ ಯುಗ. ಅದು ನಿಮ್ಮ ಅಧಿಕಾರಾವಧಿಯಲ್ಲಿ...ಅದಕ್ಕೆ ಬ್ಲಾಗ್ ಬರಹ. ಸರ್ಕಾರದ ಪತ್ರಗಳ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ದಯಮಾಡಿ ಪರಿಶೀಲಿಸಿ....ಇಲಾಕೆಯಲ್ಲಿ ಬದಲಾವಣೆ ತನ್ನಿ ಎಂದು ನನ್ನ ಮನವಿ

ಇಲಾಕೆ ಮಾಡುತ್ತಿರುವ ಮಹತ್ತರವಾದ ತಪ್ಪು: ಸಾವಿರಾರು ನವ್ಕರರ ಜೀವನಕ್ಕೆ ಕುತ್ತು-ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಪ್ರಾಧಿಕಾರ ಆಡಳಿತ ಮಂಡಳಿಗಳಲ್ಲ !!!



ಮಾನ್ಯ ನಿರ್ದೇಶಕರೇ,
ನನ್ನ ಮನವಿಗಳನ್ನು ಬಹಳ ಶ್ರದ್ಧೆಯಿಂದ ಸ್ವೀಕರಿಸಿ ಕ್ರಮ ತೆಗೆದುಕೊಳ್ಳುತ್ತಿರುವ ತಮಗೆ ನನ್ನ ವಂದನೆಗಳು. ಇಲಾಕೆಯ ಒಂದು ಸಣ್ಣ ತೀರ್ಮಾನವು ಸಾವಿರಾರು ಸಿಬ್ಬಂದಿಗಳ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ತಾವು ಅರಿತು ಆದೇಶ ಹೊರಡಿಸುತ್ತಿರುವ ಬಗ್ಗೆ ನನಗೆ ಸಂತಸವಾಗುತ್ತಿದೆ. ನಿಮ್ಮ ಮಾನ್ಯತೆ ನವೀಕರಣದ ಚೆಕ್ ಲಿಸ್ಟ್ ಕಾಮ್ಪ್ರಹೆನ್ಸಿವ್ ಆಗಿದ್ದು, ಇದರಿಂದ ಸಾಕಷ್ಟು ಸುಧಾರಣೆ ತರಲು ತಾವು ಮುಂದಾಗಿರುವುದು ಸ್ವಾಗತಾರ್ಹ. ಇದಕ್ಕೆ ನಮ್ಮಂತಹಾ ಲಕ್ಷಾಂತರ ಸಾಮಾನ್ಯಜನರ ಬೆಂಬಲ-ಸಹಕಾರ ಸದಾ ಇರುತ್ತದೆ.
ಆದರೆ,
ಖಾಸಗಿ ಅನುದಾನಿತ/ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸಿಬ್ಬಂದಿಗಳ ಶಿಸ್ತು ಪ್ರಾಧಿಕಾರ ಯಾರು ಎಂಬ ಪ್ರಶ್ನೆಗೆ ಇಲಾಕೆಯಲ್ಲಿ ರೆಡಿ ಮೇಡ್ ಉತ್ತರ ಯಾವಾಗಲು ಆಡಳಿತ ಮಂಡಲಿ ಎಂದೇ ಇರುತ್ತದೆ. ಆದರೆ ಅದು ತಪ್ಪು ಎಂದು ತೋರಿಸುವ ಒಂದು ಚಿಕ್ಕ ಪ್ರಯತ್ನವೇ ಬ್ಲಾಗ್ ಬರಹ.

ಖಾಸಗಿ ಅನುದಾನಿತ/ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸಿಬ್ಬಂದಿಗಳ ಶಿಸ್ತು ಪ್ರಾಧಿಕಾರ ಆಡಳಿತ ಮಂಡಲಿ ಅಲ್ಲ, ವ್ಯವಸ್ಥಾಪಕ ಸಮಿತಿ ....

ಕರ್ನಾಟಕ ಶಿಕ್ಷಣ ಕಾಯ್ದೆ ೧೯೮೩ರ ಕಲಮು 46 ಹೇಳುವಂತೆ

46. ªÀåªÀ¸ÁÜ¥ÀPÀ ¸À«ÄwAiÀÄ C¢üPÁgÀUÀ¼ÀÄ ªÀÄvÀÄÛ ¥ÀæPÁAiÀÄðUÀ¼ÀÄ.- (1) F C¢ü¤AiÀĪÀÄzÀ CxÀªÁ CzÀgÀ ªÉÄÃgÉUÉ ¤AiÀīĸÀ¯ÁzÀ ¤AiÀĪÀÄUÀ¼À G¥À§AzsÀUÀ½UÉÆ¼À¥ÀlÄÖ, ªÀåªÀ¸ÁÜ¥ÀPÀ ¸À«ÄwAiÀÄÄ PɼÀPÀAqÀ C¢üPÁgÀUÀ¼À£ÀÄß ºÁUÀÆ ¥ÀæPÁAiÀÄðUÀ¼À£ÀÄß ºÉÆA¢gÀvÀPÀÄÌzÀÄ, JAzÀgÉ:Š

(J) SÁ¸ÀV ²PÀët ¸ÀA¸ÉÜAiÀÄ ¸ÁªÀiÁ£Àå DqÀ½vÀªÀ£ÀÄß ¤ªÀð»¸ÀĪÀÅzÀÄ;

(©) SÁ¸ÀV ²PÀët ¸ÀA¸ÉÜAiÀÄ ªÀÄÄRå¸ÀÜ£À£ÀÄß ©lÄÖ, ²PÀëPÀgÀ£ÀÄß ºÁUÀÆ EvÀgÀ £ËPÀgÀgÀ£ÀÄß £ÉëĸÀĪÀÅzÀÄ;

(¹) ¸ÀA¸ÉÜAiÀÄ ªÀÄÄRå¸ÀÜ£À£ÀÄß ©lÄÖ, ²PÀëPÀgÀ ºÁUÀÆ EvÀgÀ £ËPÀgÀgÀ ªÉÄÃ¯É ²¸ÀÄÛ PÀæªÀĪÀ£ÀÄß PÉÊUÉÆ¼ÀÄîªÀÅzÀÄ;

(r) ¸ÀA¸ÉÜAiÀÄ £ËPÀgÀgÀ£ÀÄß ªÉÄðéZÁgÀuÉ ªÀiÁqÀĪÀÅzÀÄ ºÁUÀÆ CªÀgÀ£ÀÄß ¤AiÀÄAwæ¸ÀĪÀÅzÀÄ; ªÀÄvÀÄÛ

(F) UÉÆvÀÄÛ¥Àr¸À§ºÀÄzÁzÀAxÀ EvÀgÀ AiÀiÁªÀÅzÉà «µÀAiÀÄ.

(2) ªÀåªÀ¸ÁÜ¥ÀPÀ ¸À«ÄwAiÀÄÄ PÉÊUÉÆAqÀ AiÀiÁªÀÅzÉà wêÀiÁð£ÀªÀ£ÀÄß CxÀªÁ PÀæªÀĪÀ£ÀÄß, CzÀ£ÀÄß ºÁUÉ PÉÊUÉÆAqÀ ¢£À¢AzÀ ºÀ¢£ÉÊzÀÄ ¢£ÀUÀ¼ÉƼÀUÁV PÁAiÀÄðzÀ²ðAiÀÄÄ DqÀ½vÀ ¥ÀjµÀwÛUÉ w½¸ÀvÀPÀÄÌzÀÄ. ºÁUÉ PÉÊUÉÆAqÀ wêÀiÁð£À CxÀªÁ PÀæªÀĪÀ£ÀÄß vÀ£ÀUÉ w½¹zÀ E¥ÀàvÉÆÛAzÀÄ ¢£ÀUÀ¼ÉƼÀUÉ DqÀ½vÀ ¥ÀjµÀvÀÄÛ CzÀ£ÀÄß gÀzÀÄÝ¥Àr¹zÀ CxÀªÁ ªÀiÁ¥ÁðlÄ ªÀiÁrzÀ ºÉÆgÀvÀÄ, CzÀ£ÀÄß DqÀ½vÀ ¥ÀjµÀvÉÛà PÉÊUÉÆAqÀ wêÀiÁð£À CxÀªÁ PÀæªÀĪÉAzÀÄ ¨sÁ«¸ÀvÀPÀÄÌzÀÄ.

C®èzÉà ¸ÀPÁðgÀªÀÅ 2007gÀ°èAiÉÄà ªÀåªÀ¸ÁÜ¥ÀPÀ ¸À«ÄwAiÀÄ PÁAiÀÄðUÀ¼À£ÀÄß ¤AiÀĪÀÄUÀ¼À ªÀÄÆ®PÀ w½AiÀÄ¥Àr¹zÉ. D ¤AiÀĪÀĪÀÅ ¸ÀPÁðjà DzÉñÀ ¸ÀASÉå No. ED 79 VIVIDA 2003 (P), Bangalore, Dated : 24th October ೨೦೦೭ರಲ್ಲಿ ತಿಳಿಯಪಡಿಸಿದೆ.

ಮುಂದುವರೆದು ನನ್ನ ಮನವಿಯ ಮೇರೆಗೆ ನಿಮ್ಮ ಕಚೇರಿಯಿಂದ ಮೇಲಿನ ಸುತ್ತೋಲೆ ಹೊರಡಿಸಲ್ಪಟ್ಟಿದೆ.

ವ್ಯವಸ್ಥಾಪಕ ಸಮಿತಿಯಲ್ಲಿ
ಉಪನ್ಯಾಸಕ ಸದಸ್ಯರು,
ಆಡಳಿತ ಮಂಡಳಿಯ ಸದಸ್ಯರು
ಹಾಗು ಪೋಷಕ ಸದಸ್ಯರು ಇರುವುದರಿಂದ ಉಪನ್ಯಾಸಕನ ಮೇಲೆ ಆಡಳಿತ ಪರಿಷತ್ತು ಏಕಪಕ್ಷಿಯ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಇದನ್ನು ರಚನೆ ಮಾಡುವುದರಿಂದಾಗಿ ವ್ಯಾಜ್ಯಗಳ ಪ್ರಮಾಣ ಕಡಿಮೆಯಾಗುತ್ತದೆ. ಸುತ್ತೋಲೆ ಹೊರಡಿಸಿರುವ ನಿಮ್ಮ ಕಚೇರಿ ಮಾನ್ಯತೆ ನವೀಕರಣದ ಚೆಕ್ ಲಿಸ್ಟ್ ನಲ್ಲಿ ವ್ಯವಸ್ಥಾಪಕ ಸಮಿತಿಯ ರಚನೆ ಕಡ್ಡಾಯ ಮಾಡಬೇಕಾಗಿದ್ದಿತು ಎಂದು ನನ್ನ ಭಾವನೆ.

ಮುಂದುವರೆದು ಯಾವುದೇ ಸಿಬ್ಬಂದಿಯ ಮೇಲೆ ಶಿಸ್ತು ಕ್ರಮ ಜರುಗಿಸಬೇಕಾದಲ್ಲಿ ಅದಕ್ಕೆ ವ್ಯವಸ್ಥಾಪಕ ಸಮಿತಿಯ ಒಪ್ಪಿಗೆ ಬೇಕೇ ಬೇಕು ಎಂಬ ಸತ್ಯವನ್ನು, ಆಡಳಿತ ಪರಿಷತ್ತು ಕೇವಲ ಸಂಸ್ಥೆಯ ಆಡಳಿತ ನೋಡಿಕೊಳ್ಳಲು ಇರುವ ವ್ಯವಸ್ಥೆ ಎಂಬ ವಿಚಾರವನ್ನು ನಿಮ್ಮ ಕೈಕೆಳಗಿನ ಸಿಬ್ಬಂದಿಗಳ ಗಮನಕ್ಕೆ ತಂದು ವ್ಯವಸ್ಥಾಪಕ ಸಮಿತಿಯನ್ನು ರಚನೆ ಮಾಡಿಸಿ ಲಕ್ಷಾಂತರ ಜನ ಸಿಬ್ಬಂದಿಗಳಿಗೆ ನೆಮ್ಮದಿಯಿಂದ ಜೀವಿಸಲು, ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೋರುತ್ತೇನೆ.

ಹಿಂದಿನ ನಿರ್ದೇಶಕರು ಕ್ರಮ ತೆಗೆದುಕೊಂಡಿಲ್ಲ, ಮುಂದೆ ಬರುವ ನಿರ್ದೇಶಕರು ನಿಮ್ಮಷ್ಟು ಮುತುವರ್ಜಿಯಿಂದ ಸುಧಾರಣೆ ಮಾಡುತ್ತಾರೆಂಬ ನಂಬಿಕೆ ನನಗಿಲ್ಲ. ಅದಕ್ಕೆ ರಾಜ್ಯದ ಅತ್ಯತ್ತಮ ಅಧಿಕಾರಿಯಲ್ಲಿ ನನ್ನ ಪುಟ್ಟ ಮನವಿ ಅದು ಸಾರ್ವಜನಿಕ ಹಿತಾಸಕ್ತಿ ಯೊಂದಿಗೆ .............

ಭಾರತ ದೇಶದ ಒಬ್ಬ ಸಾಮಾನ್ಯ ನಾಗರಿಕ
ಮಧು

Friday, February 03, 2012

ಇಲಾಕೆಯಲ್ಲಿ ದಾಕಲೆ ನಿರ್ವಹಣೆ ಬಗ್ಗೆ ಸರ್ಕಾರದ ಪತ್ರ-ಬದಲಾಗದ ಇಲಾಕಾ ಚಿತ್ರ





ಇಲಾಕೆಯಲ್ಲಿ ದಾಕಲೆ ನಿರ್ವಹಣೆ ಬಗ್ಗೆ ನಾನು ನೀಡಿದ ದೂರಿಗೆ ಸರ್ಕಾರ ನೀಡಿದ ನಿರ್ದೇಶನಗಳು ಈ ಕೆಳಗಿನಂತಿವೆ. ಮಾನ್ಯ ನಿರ್ದೇಶಕರು ಈಗ ಕ್ರಮ ತೆಗೆದು ಕೊಂಡು ಇಂತಹಾ ಅವ್ಯವಹಾರ ಗಳನ್ನು ತಡೆಗಟ್ಟಿ ಇಲಾಕೆಯ ಅಮೂಲ್ಯ ದಾಕಲೆಗಳನ್ನು ರಕ್ಷಿಸುವಂತೆ ಕೋರಿದ್ದೇನೆ.

ಮಾಹಿತಿ ಆಯೋಗದ ನಿರ್ದೇಶನವನ್ನು ಗಾಳಿಗೆ ತೂರಿದ ನಿರ್ದೇಶನಾಲಯ. ಕಡತ ಕದ್ದವರು ಬಚಾವ್-ಸರ್ಕಾರದ ಬೊಕ್ಕಸಕ್ಕೆ ತಪ್ಪದ ನಷ್ಟ

ಮಾನ್ಯ ನಿರ್ದೇಶಕರಲ್ಲಿ ನನ್ನ ಮನವಿ.
ನಾನು ದಿನಾಂಕ ೨೬.೧೧.೨೦೧೧ ರಂದು ನಿಮ್ಮ ಕಚೇರಿಯಲ್ಲಿ ನಾನು ದಾಕಲೆಗಳ ಸಮೇತ ಕೊಟ್ಟ ದೂರಿನ ಕಡತವೇ ಕಾಣೆಯಾಗಿದೆ. ಕಡತಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ತಿಳಿಸಿ ಮನವಿ ನೀಡಿದ್ದೆ. ಬಹುಶ: ಕೆಲಸಗಳ ಒತ್ತಡದಲ್ಲಿ ಅದನ್ನು ಮರೆತಿರುವಿರಿ ಎಂದು ನಾನಾದರು ಭಾವಿಸಿ ದಿನಾಂಕ ೦೮.೧೨.೨೦೧೧ರದು ಮತ್ತೊಮ್ಮೆ ತಮಗೆ ದೂರು ಸಲ್ಲಿಸಿ ಸ್ವೀಕೃತಿ ಪಡೆದೆನು. ಆದರೆ ತಾವು ದಾಕಲೆಗಳನ್ನು ಕದ್ದವರು/ಕದ್ದವರು ಯಾರು ಎಂಬುದರ ಬಗ್ಗೆ ಕ್ರಮ ತೆಗೆದುಕೊಂಡ ಬಗ್ಗೆ ನನಗೆ ಮಾಹಿತಿ ದೊರಕಲಿಲ್ಲ. ತಮ್ಮ ಪೈಲ್ ಡಿಸ್ಪೋಸಲ್ ನಲ್ಲೂ ಸಹಾ ( ವೆಬ್ ಸೈಟ್ ಹಾಗು ವ್ಯವಸ್ಥೆ ನಿಜಕ್ಕೂ ಅಭಿನಂದನಾರ್ಹ) ನೋಡಲಾಗಿ ಅದು ನನಗೆ ಕಾಣಿಸಲಿಲ್ಲ. ಕಾರಣ ದಿಂದಾಗಿ ಮತ್ತೊಮ್ಮೆ ದಾಕಲೆಗಳ ಸಮೇತ ವಿಚಾರವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.
ನಿಮ್ಮ ಇಲಾಕೆ ನೀಡಿದ ಮಾಹಿತಿ ಹಾಗು ನಾನು ತಮಗೆ ನೀಡಿದ ದೂರು ಎರಡರ ಸಾಪ್ಟ್ ಕಾಪಿ ಇಲ್ಲಿದೆ.


Urgent: RTI Missing Records






Dear Madam,

Sub: Seeking clarification/information on the missing records.

Ref: 1. My RTI request dated 24/11/2009 requesting to provide me the details of Lost files in the Department relating to Tumkur District.

2. JD(Admin) & PIO’s Letter papushi/sibbandi-3/yuyu/ maahani. 05/11-12 dated 21/17/2011

3. JD(Admin) & PIO’s Letter papushi/sibbandi-3/yuyu/ maahani. 05/11-12 dated 15/10/2011

With respect to the above subject, I sought information relating to the details of lost files in the Department relating to Tumkur District from your good office on 30.05.2011. But your JD & PIO has failed to reply with in statutory period. And in Ref.2 JD & PIO intimated me that from 01.01.2011 till 21.07.2011 no records were lost and he informed that he is gathering the said information from the staff. In Ref.3 he again informed that two records have been lost in the Department relating to Tumkur District and he named them. (the letter annexed)

Your PIO is routinely replying that records sought by me are missing or not traceable, etc. Where records are sensitive in nature or may adversely affect vested interests of your officials these answers are very much expected. Such kind of act of your officials invites criminal complaint against officials under sections 201 and 217 of the Indian Penal Code (IPC).

Apart from that, being a social responsible citizen, I have the responsibility/right to know where the file has been lost and what action has been taken against the person with whom the file was in custody as per the KCSR and other rules and laws. Hence, I request you to kindly let me know following details in connection to these missing/not traceable records [hereafter referred to as “said records” for brevity]:

1. Please provide me certified photocopy of pages of registers where the said records were last recorded to have existed.

2. Name, designation and office address of the officers and other staff of the office who had last custody of the said records.

3. Date when your office first came to know that the said records are missing.

4. Details of efforts made to trace out the said records till date of your reply.

5. Certified copy of FIR filed for the missing/non-tracing of said records.

6. In case if FIR is not filed till date of your reply to this application, reasons for it be also made known to me.

7. Certified photocopy of departmental guidelines for preservation and safe custody of records.

8. Certified photocopy of report made by your office to your higher officers and their reply on the matter of the said records.

9. Details of departmental action initiated against erring staff for the said records.

10. Certified photocopy of last queries and replies thereto in connection to said records.

11. Certified copy of record evidencing last periodical verification/ inventory of old records undertaken by the dept/office as per prescribed procedure. If no inventory/verification is undertaken, reasons thereof be made known to me.

12. Name, designation and full address of PIO of the office where additional/duplicate copies would be available of the said record.

13. Please let me know if it is possible to retrieve the said record from computers.

14. Please provide me a sworn affidavit to this effect in accordance with CIC decision dated 06-11-2009 in Appeal No.CIC/SM/A/2008/00135 & SM/A/2009/001075].

I request your good self to provide the above information with in seven days from the receipt of this letter, the failure of which may compel me to request the Hon’ble Karnataka Information Commission to take suitable action against your JD & PIO for not fixing responsibility on any person for loss of valuable public records.

The acknowledgement of the same letter will be placed before Hon’ble Commission for further action

Thank You

Date: 08/12/2011 Yours Truly

ತುಮಕೂರಿನ ಉಪನಿರ್ದೇಶಕರ ಕಚೇರಿಯಲ್ಲಿ ದಾಕಲೆ ಹೇಗೆ ಹಾಳಾಗುತ್ತಿದೆ ನೋಡಿ. ಇದು ಇಲಾಕೆ ದಾಕಲೆಗಳನ್ನು ರಕ್ಷಿಸುವ ಪರಿ







ತುಮಕೂರಿನ ಉಪನಿರ್ದೇಶಕರ ಕಚೇರಿಯಲ್ಲಿನ ದಾಕಲೆ ನಿರ್ವಹಣೆ ಹೇಗಿದೆ ಎಂದು ನಿರ್ದೇಶಕರು ಈ ಫೋಟೋಗಳನ್ನೂ ನೋಡಿ ಸೂಕ್ತ ಕ್ರಮ ಕೈಗೊಳ್ಳಲಿ.

ದ್ವಿತೀಯ ಪಿಯು ಉತ್ತರ ಪತ್ರಿಕೆ ಮಾಹಿತಿ ಹಕ್ಕಿನ ಅಡಿ ಲಭ್ಯ ಎಂದ ಮಾಹಿತಿ ಆಯೋಗ: ಇಲಾಕೆಯ ಜಂಟಿ ನಿರ್ದೇಶಕರಿಗೆ ದಂಡ ವಿಧಿಸಲು ಕಾರಣ ಕೇಳಿ ನೋಟಿಸ್ ಜಾರಿ

ಘನವೆತ್ತ ಕರ್ನಾಟಕ ರಾಜ್ಯ ಮಾಹಿತಿ ಆಯೋಗವು ಪ್ರಕರಣ ಸಂಖ್ಯೆ KIC9349PTN2011 ರಲ್ಲಿ ದ್ವಿತೀಯ ಪಿಯು ಉತ್ತರ ಪತ್ರಿಕೆ ಮಾಹಿತಿ ಹಕ್ಕಿನ ಅಡಿ ಲಭ್ಯ ಎಂದು ನಿರ್ದೇಶನ ನಿಡಿರುವುದಷ್ಟೇ ಅಲ್ಲದೇ ಆಯೋಗದ ವಿಚಾರಣಾ ದಿನಾಂಕದ (೨೭.೦೧.೨೦೧೨) ಒಳಗೆ ಮಾಹಿತಿ ಒದಗಿಸದಿದ್ದಕ್ಕಾಗಿ ಇಲಾಕೆಯ ಜಂಟಿ ನಿರ್ದೇಶಕರಿಗೆ ದಂಡ ಏಕೆ ವಿಧಿಸಬಾರದೆಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಈ ವಿಚಾರವು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ.
ಓದಲು ಇಲ್ಲಿ ಕ್ಲಿಕ್ ಮಾಡಿ

Thursday, February 02, 2012

ಅನುದಾನಕ್ಕೆ ಒಳಪಡದೇ ಇಲಾಕೆ ಯಿಂದ ಸುಮಾರು ೨೫ಕ್ಕಿತಲೂ ಹೆಚ್ಚು ವರ್ಷಗಳಿಂದಲೂ ವೇತನ ಪಡೆಯುತ್ತಿರುವ ಉದಯ ಭಾರತಿ ಉಪನ್ಯಾಸಕರು: ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟ

ಮಾನ್ಯ ನಿರ್ದೇಶಕರಲ್ಲಿ ನನ್ನ ಮತ್ತೊಂದು ಮನವಿ ಎಂದರೆ,
ಅನುದಾನಿತ ಕಾಲೇಜುಗಳ ನವ್ಕರರ ಪರವಾಗಿ ನಾನು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಕಲಿಸಿ ಅನುದಾನ ರಹಿತ ಅವಧಿಯ ಸೇವೆಯನ್ನು ವೇತನ ನಿಗಧಿ, ಪಿಂಚಣಿ, ಭಡ್ತಿ, ಸೇವಾ ಜೇಷ್ಟತೆ ಹಾಗು ಇತರೆ ಸವಲಭ್ಯಗಳನ್ನೂ ಕೋರಿದ್ದು , ಘನ ನ್ಯಾಯಾಲಯವು ಅದನ್ನು ಪುರಸ್ಕರಿಸಿ ಆದೇಶಿಸಿರುವುದು ತಮಗೆ ತಿಳಿದ ಸಂಗತಿ.
ಮತ್ತೆ ಅದಕ್ಕೆ ಪ್ರತಿಯಾಗಿ ಸರ್ಕಾರ ಹಾಗು ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗುವುದನ್ನು ತಪ್ಪಿಸಲು ತಮ್ಮ ಇಲಾಕೆ ರಿಟ್ ಮೇಲ್ಮನವಿ ಸಲ್ಲಿಸಿರುವುದು ತಮಗೆ ತಿಳಿದ ವಿಚಾರವಾಗಿದೆ.
ಆದರೆ
ಈಗ ನಾನು ಬ್ಲಾಗ್ ಬರಹದಲ್ಲಿ ಬರೆಯುತ್ತಿರುವ ವಿಚಾರ ತುಂಬಾ ಗಂಭಿರವಾದುದು. ಕಾರಣ ನಾನು ಅನುದಾನಕ್ಕೆ ಒಳಪಟ್ಟ ಸಿಬ್ಬಂದಿ ಯವರ ಅನುದಾನ ರಹಿತ ಅವಧಿಯ ಸೇವೆಯನ್ನು ವೇತನ ನಿಗಧಿ, ಪಿಂಚಣಿ, ಭಡ್ತಿ, ಸೇವಾ ಜೇಷ್ಟತೆ ಹಾಗು ಇತರೆ ಸವಲಭ್ಯಗಳನ್ನೂ ಕೋರಿದ್ದಕ್ಕೆ ನೀಡಲು ಬರುವುದಿಲ್ಲ, ಅದು ಸರ್ಕಾರದ ನಿಯಮಗಳಿಗೆ ಪಾಲಿಸಿಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯದಲ್ಲಿ ತಿಳಿಯಪಡಿಸಿರುತ್ತಿರಿ.
ಆದರೆ
ಉದಯಭಾರತಿ ಪದವಿ ಪೂರ್ವ ಕಾಲೇಜಿನ ಕೆಳಗೆ ಕಾಣಿಸಲ್ಪಟ್ಟ ಸಿಬ್ಬಂದಿಗಳು ಅನುದಾನಕ್ಕೆ ಇದುವರೆವಿಗೂ ಒಳಪಟ್ಟಿಲ್ಲ. ಆದರೆ ಇಲಾಕೆ ಅವರಿಗೆ ೨೬ ವರ್ಷಗಳಿಂದ ನಿರಂತರವಾಗಿ ವೇತನ ಬಿಡುಗಡೆ ಮಾಡುತ್ತಿದೆ.!!!!!!!!!!!!!!!!!!!!!!!!!!!!!!!
ಅವರೆಂದರೆ
ಶ್ರೀ ಏನ್.ಕೆ.ಜಯಪ್ರಕಾಶ್ , ಹಿಂದಿ ಉಪನ್ಯಾಸಕ, ಉದಯಭಾರತಿ ಪದವಿ ಪೂರ್ವ ಕಾಲೇಜು ತಿಪಟೂರು
ಶ್ರೀ ಎಂ ಬಸವರಾಜಪ್ಪ, ಸಮಾಜಶಾಸ್ತ್ರ ಉಪನ್ಯಾಸಕರು, ಉದಯಭಾರತಿ ಪದವಿ ಪೂರ್ವ ಕಾಲೇಜು ತಿಪಟೂರು
ಶ್ರೀ ಆನಂದ, ಅಟೆಂಡರ್ , ಉದಯಭಾರತಿ ಪದವಿ ಪೂರ್ವ ಕಾಲೇಜು ತಿಪಟೂರು
ಶ್ರೀ ಶಿವಬಸವಯ್ಯ, ಸೇವಕ, ಉದಯಭಾರತಿ ಪದವಿ ಪೂರ್ವ ಕಾಲೇಜು ತುರುವೇಕೆರೆ

ಹಾಗೆಯೇ
ಶ್ರೀಬಿ.ಹೆಚ್.ರಾಮಯ್ಯ, ಸಮಾಜಶಾಸ್ತ್ರಉಪನ್ಯಾಸಕ, .ಎಂ.ಎಸ್. ಪದವಿಪೂರ್ವಕಾಲೇಜು, ಬೆಂಗಳೂರು
ಶ್ರೀಎಂ. ಆರ್ ಶೇಕರ್, ವಾಣಿಜ್ಯಶಾಸ್ತ್ರಉಪನ್ಯಾಸಕ, ಬಾಪೂಜಿಸಂಯುಕ್ತಪದವಿಪೂರ್ವಕಾಲೇಜು, ಭರಮಸಾಗರ, ಚಿತ್ರದುರ್ಗಜಿಲ್ಲೆ.
ಇವುನನಗೆತಿಳಿದಿರುವಂತಹಾನಿದರ್ಶನಗಳು.
ಇಂತಹಾ ಇನ್ನೆಷ್ಟು ಹಗರಣಗಳನ್ನು ಇಲಾಕೆಯ ಅಧಿಕಾರಿಗಳು ಮಾಡಿರುವರೋ ನನಗೆ ತಿಳಿಯದು.

ಆಶ್ಚರ್ಯ ಆಯ್ತಾ ಮೇಡಂ, ಇದು ಸತ್ಯ. ಪದವಿ ಪೂರ್ವ ಶಿಕ್ಷಣ ಇಲಾಕೆಯಲ್ಲಿ "ಹೀಗೂ ಉಂಟು!".

ನನ್ನ ಮನವಿ ತಮ್ಮಲ್ಲಿ ಇಷ್ಟೇ.
ಅನುದಾನಕ್ಕೆ ಒಳಪಡದ ಸಿಬ್ಬಂದಿಗಳಿಗೆ ಅನುದಾನ ರಹಿತ ಅವಧಿಯ ಸೇವೆಯನ್ನು ವೇತನ ನಿಗಧಿ, ಪಿಂಚಣಿ, ಭಡ್ತಿ, ಸೇವಾ ಜೇಷ್ಟತೆ ಹಾಗು ಇತರೆ ಸವಲಭ್ಯಗಳನ್ನೂ ನೀಡಿರುವ ಇಲಾಕೆಯು ಅನುದಾನಕ್ಕೆ ಒಳಪಟ್ಟ ಸಿಬ್ಬಂದಿಗಳಿಗೆ ಅನುದಾನ ರಹಿತ ಅವಧಿಯ ಸೇವೆಯನ್ನು ವೇತನ ನಿಗಧಿ, ಪಿಂಚಣಿ, ಭಡ್ತಿ, ಸೇವಾ ಜೇಷ್ಟತೆ ಹಾಗು ಇತರೆ ಸವಲಭ್ಯಗಳನ್ನೂ ಪರಿಗಣಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಹೇಳುವುದು ತೀರಾ ಹಾಸ್ಯಾಸ್ಪದ.

ಆದಕಾರಣ ತಾವುಗಳು ಕೃಪೆ ಮಾಡಿ ಎಲ್ಲಾ ಅನುದಾನಿತ ಸಿಬ್ಬಂದಿಗಳ ಅನುದಾನ ರಹಿತ ಅವಧಿಯ ಸೇವೆಯನ್ನು ವೇತನ ನಿಗಧಿ, ಪಿಂಚಣಿ, ಭಡ್ತಿ, ಸೇವಾ ಜೇಷ್ಟತೆ ಹಾಗು ಇತರೆ ಸವಲಭ್ಯಗಳನ್ನೂ ಪಡೆಯಲು ಪರಿಗಣಿಸುವಂತೆ ಕೋರಿದ್ದೇನೆ. ಇಲ್ಲದಿದ್ದಲ್ಲಿ ಅನುದಾನಕ್ಕೆ ಒಳಪಡದ ಸಿಬ್ಬಂದಿಗಳಿಗೆ ಬಿಡುಗಡೆ ಮಾಡುತ್ತಿರುವ ಅನುದಾನವನ್ನು ತಕ್ಷಣವೆ ತಡೆಹಿಡಿದು ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಕೋರಿದ್ದೇನೆ. ಸಾರ್ವಜನಿಕ ಹಣ ಪೋಲಾಗುವುದನ್ನು ತಪ್ಪಿಸಲು ಹಾಗು ಸರ್ಕಾರದ ನೀತಿ ನಿಯಮಗಳಿಗೆ ವ್ಯತಿರಿಕ್ತವಾಗಿ ವೇತನ ಪಡೆಯುತ್ತಿರುದನ್ನು ತಪ್ಪಿಸಲು ನಿಮ್ಮ ಧೃಡ ನಿರ್ಧಾರ ಅವಶ್ಯವಾಗಿದೆ.
ತಮಗೆ ಈ ಬಗ್ಗೆ ದಾಕಲೆಗಳು ಬೇಕಾದಲ್ಲಿ ಬ್ಲಾಗ್ ನಲ್ಲಿ ಪ್ರಕಟಿಸಲು ಸಿದ್ಧನಿದ್ದೇನೆ.

ನಿಮ್ಮ ಒಂದು ಆದೇಶದಿಂದ ಸರ್ಕಾರದ ಕೋಟ್ಯಾಂತರ ರೂಪಾಯಿಗಳು ಪೋಲಾಗುವುದನ್ನು ಹಾಗು ಸರ್ಕಾರಿ ನಿಯಮ ಉಲ್ಲಂಗನೆಯಾಗುವುದನ್ನು ತಪ್ಪಿಸಬಹುದಾದರೆ ನಿಮ್ಮ ಆದೇಶವು ಸಾರ್ವಜನಿಕ ಉಪಯೋಗಿ ಹಾಗು ದಿಟ್ಟ ನಿರ್ಧಾರ ಎನಿಸಿಕೊಳ್ಳುತ್ತದೆ. ಅಂತಹಾ ದಿಟ್ಟ ನಿರ್ಧಾರಕ್ಕಾಗಿ ನಾನು ಸಾರ್ವಜನಿಕ ಹಿತಾಸಕ್ತಿಯಿಂದ ಕಾಯುತ್ತಿದ್ದೇನೆ.