Friday, March 02, 2012

ಆಯುಕ್ತರಿಗೊಂದು ಬಹಿರಂಗ ಪತ್ರ-ನಿಮ್ಮಂತಹಾ ಐ ಎ ಎಸ್ಅಧಿಕಾರಿಗಳು ಪದವಿ ಪೂರ್ವ ಶಿಕ್ಷಣ ಇಲಾಕೆಗೆ ಹಾಗು ಕೆ.ಇ.ಎಬೇಕು......


ಮಾನ್ಯರೇ,
ಫೆಬ್ರವರಿ ೨ನೇ ವಾರದಲ್ಲಿ ತಮ್ಮ ವರ್ಗಾವಣೆಗೆ ನಡೆದಿದೆ ಎನ್ನಲಾದ ಪಿತೂರಿಯ ಹಿಂದೆ ಇಷ್ಟೊಂದು ಕಾಣದ ಕೈಗಳು ಕೆಲಸ ಮಾಡಿವೆ ಅಂದು ನನಗೆ ಅನಿಸಿದ್ದು ವಿಜಯಕರ್ನಾಟಕ ಪರ್ತಿಕೆ ನೋಡಿದಾಗಲೇ ...... ನಿಮ್ಮಂತಹಾ ಖಡಕ್ ಅಧಿಕಾರಿ ಕೆ.ಇ.ಎಗೆ ಬೇಕು...ನಿಮ್ಮ ಕೈಕೆಳಗಿನ ಅಧಿಕಾರಿಗಳು ನಿಮ್ಮನ್ನು ಮೆಚ್ಚದಿರಬಹುದು...ಆದರೆ ವಿದ್ಯಾರ್ಥಿಗಳು, ಅದರಲ್ಲೂ ಬಡವಿದ್ಯಾರ್ಥಿಗಳು ಖಂಡಿತ ತಮ್ಮ ಈ ಕಾರ್ಯದಿಂದ ನಿಜವಾಗಿ ನ್ಯಾಯಪಡೆಯುತ್ತಾರೆ..
ನನ್ನ ಲಾ ಸ್ಕೂಲ್ ನ ಸಿನಿಯರ್ ಒಬ್ಬರು ಆಕ್ಸೆಸ್ ಟು ಪ್ರೊಫೆಶನಲ್ ಎಜುಕೇಶನ್ ಎಂಬ ವಿಚಾರದ ಬಗ್ಗೆ ಥೀಸಿಸ್ ಬರೆಯುವ ಉದ್ದೇಶದಿಂದ ಮಾಹಿತಿ ಕೇಳಲು ಬಂದಿದ್ದಕ್ಕೆ ಕೆ.ಇ.ಎನ ಅಧಿಕಾರಿ (ಕುಲಕರ್ಣಿ) ಮಾಹಿತಿ ನೀಡಲು ಇಪ್ಪತ್ತೈದು ಸಾವಿರ ನೀಡಿ ಅಂತಾ ನಾಚಿಕೆ ಬಿಟ್ಟು ಕೇಳಿದರೂ ಅಂತಾ ಬಹಳ ನೊಂದುಕೊಂಡು ಹೇಳಿದರು. ಅಂತಹವರ ಮೇಲೆ ತಾವು ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲವೇ? ನಿಮ್ಮ ಕೆ.ಇ.ಎನ ಕೆಲವು ಅಧಿಕಾರಿಗಳು ಆ ಪ್ರಾಧಿಕಾರ ಬಿಟ್ಟು ಹೊರನಡೆದರೆ ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೀವು ನಿಜವಾಗಿ ನೆರವಾದಂತಾಗುತ್ತದೆ.
ವಿಜಯಕರ್ನಾಟಕ ಪತ್ರಿಕೆಯನ್ನು ತಾವು ನೋಡಿರುತ್ತೀರಿ. ಆದರೂ ನನ್ನ ಬ್ಲಾಗ್ನಲ್ಲಿ ಈ ವರದಿಯ ಪ್ರತಿ ಇರಲಿ ಎಂಬ ಆಶಯ ನನ್ನದು...ಅದಕ್ಕೆಈ ಬ್ಲಾಗ ಪೊಸ್ಟ್ ...



No comments:

Post a Comment