Thursday, March 22, 2012

ಪಿ.ಸಿ.ಎಂ.ಬಿ ಪ್ರಶ್ನೆ ಪತ್ರಿಕೆ ಬಯಲು-ಕೀ ಉತ್ತರಗಳೊಂದಿಗೆ: ಯಾರ ಕೈವಾಡ?

ಮಾನ್ಯರೇ,

ಇದೀಗ ಜೀವಶಾಸ್ತ್ರ ಹಾಗು ಗಣಿತಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಬಯಲಾಗಿರುವ ಬೆನ್ನಲ್ಲೇ ಬೌತ ಶಾಸ್ತ್ರ ಪ್ರಶ್ನೆ ಪತ್ರಿಕೆ ಗಳು ಬಯಲಾಗಿರುವ ಸುದ್ಧಿ ಅಚ್ಚರಿಯೇನಲ್ಲ . ಕಾರಣ ನಾನು ಆಯುಕ್ತರನ್ನು ಭೇಟಿಯಾದಾಗ (ದಿನಾಂಕ ೨೦.೦೩.೨೦೧೨) ಜೀವಶಾಸ್ತ್ರ ಹಾಗು ಗಣಿತಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಬಯಲಾಗಿರುವ ಬಗ್ಗೆ ಪ್ರಸ್ತಾಪಿಸಿದ್ದು, ಆಯುಕ್ತರ ಕಚೇರಿಯಿಂದ ಹೊರಬಂದ ತಕ್ಷಣವೇ ಶ್ರೀ ಪೂಣಚ್ಚ ಇವರನ್ನು ಕಂಡು ಕೋಲಾರದಲ್ಲಿ ಬೌತ ಶಾಸ್ತ್ರ ಹಾಗು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಬಿಕರಿಯಾಗುತ್ತವೆ ಎಂದು ನಿಮ್ಮ ಆಯುಕ್ತಾಲಯಕ್ಕೆ ಬಂದಿದ್ದ ಉಪನ್ಯಾಸಕ ವೃಂದದಲ್ಲಿಯೇ ಗುಸುಗುಸು ಮಾತನಾಡುತ್ತಿದ್ದಾರೆ ಇದರ ಬಗ್ಗೆ ಆಯುಕ್ತರ ಗಮನಕ್ಕೆ ತನ್ನಿ ಎಂದು ಕೊರಿದ್ದೇನು. ತದನಂತರ ಏನಾಯಿತೋ ತಿಳಿಯೆ. ನನ್ನ ಕೆಲಸದಲ್ಲಿ ನಾನು ಮುಳುಗಿದೆ. ದಿನ ನನ್ನ ಅನುಮಾನಕ್ಕೆ ಪುಷ್ಟಿ ದೊರೆಯಿತು. ಇದರಲ್ಲಿ ಆಯುಕ್ತಾಲಯದ ಅಧಿಕಾರಿಗಳ ಕೈವಾಡ ಇರುವ ಬಗ್ಗೆ ತನಿಖೆ ನಡೆಸಬೇಕಾಗಿದೆ. ನಿಮ್ಮಂತಹಾ ದಕ್ಷ ಅಧಿಕಾರಿಗಳಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆ ತಂದಿರುವ ಇಲಾಖಾ ದ್ರೋಹಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆ ಈಗ ಇಲಾಖೆಗಿದೆ.





No comments:

Post a Comment