Sunday, March 25, 2012

ಆಯುಕ್ತೆ ರಶ್ಮಿಯವರ ಪರವಾಗಿ ವಿದ್ಯಾರ್ಥಿಗಳ ಎಸ್ ಎಂ ಎಸ್ ಅಭಿಯಾನ :ಉದಯವಾಣಿ ವರದಿ


  • ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು

    • Udayavani | Mar 24, 2012

      ಬೆಂಗಳೂರು: ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಪಿಯು ಕಾಲೇಜಿನ ಆರು ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ.

      ಪ್ರಶ್ನೆ ಪತ್ರಿಕೆ ಬಯಲು ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರ ವರದಿ ಆಧಾರದ ಮೇಲೆ ಆರು ಉಪನ್ಯಾಸಕರನ್ನು ಅಮಾನತು ಮಾಡಿ ಪದವಿಪೂರ್ವ ಶಿಕ್ಷಣ ಇಲಾಖೆ ಆಯುಕ್ತರಾದ ವಿ. ರಶ್ಮಿ ಆದೇಶ ಹೊರಡಿಸಿದ್ದಾರೆ. ಕೋಲಾರ ಜಿಲ್ಲೆಯ ಉಪ ನಿರ್ದೇಶಕರಿಗೆ ಈ ಸಂಬಂಧ ಪತ್ರ ರವಾನಿಸಿದ್ದಾರೆ.

      ಗುರುವಾರವಷ್ಟೇ 14 ಉಪನ್ಯಾಸಕರನ್ನು ಅಮಾನತು ಮಾಡಿ ನಾಲ್ಕು ಕಾಲೇಜುಗಳ ಮಾನ್ಯತೆ ರದ್ದುಪಡಿಸಲಾಗಿತ್ತು. ಮುಂದುವರಿದ ಭಾಗವಾಗಿ ಮತ್ತೆ ಆರು ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ.

      ಈ ಮಧ್ಯೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತರಾದ ರಶ್ಮಿ ಮಹೇಶ್‌ ಅವರನ್ನು ಬೆಂಬಲಿಸಿ ರಾಜ್ಯಾದ್ಯಂತ ವಿದ್ಯಾರ್ಥಿಗಳು ಎಸ್‌ಎಂಎಸ್‌ ಅಭಿಯಾನ ಹಮ್ಮಿಕೊಂಡಿದ್ದಾರೆ.

      ಮೊಬೈಲ್‌ ಫೋನ್‌ಗಳಲ್ಲಿ ರಶ್ಮಿ ಮಹೇಶ್‌ ಅವರನ್ನು ಬೆಂಬಲಿಸಿರುವ ಎಸ್‌ಎಂಎಸ್‌ಗಳು ಹರಿದಾಡುತ್ತಿದ್ದು, 'ರಶ್ಮಿ ಅವರು ದಕ್ಷ, ಪ್ರಾಮಾಣಿಕ ಅಧಿಕಾರಿ. ಅವರ ಅಧಿಕಾರವಧಿಯಲ್ಲಿ ಮಂಡಳಿ ಉತ್ತಮ ಕೆಲಸ ಮಾಡುತ್ತಿದೆ. ಪ್ರಶ್ನೆ ಪತ್ರಿಕೆ ಬಯಲು ಪ್ರಕರಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ಅವರನ್ನು ಬಲಿಪಶು ಮಾಡುತ್ತಿದೆ. ಅವರ ಒತ್ತಡಕ್ಕೆ ಮಣಿದು ರಶ್ಮಿ ಆವರನ್ನು ವರ್ಗಾವಣೆ ಮಾಡಿದರೆ ಹೋರಾಟ ನಡೆಸಲಾಗುವುದು' ಎಂಬ ಎಚ್ಚರಿಕೆಯನ್ನೂ ಎಸ್‌ಎಂಎಸ್‌ ಸಂದೇಶದ ಮೂಲಕ ನೀಡುತ್ತಿದ್ದಾರೆ.

No comments:

Post a Comment