Monday, March 05, 2012

ಎರಡು ಕಡೆ ವೇತನ ಪಡೆದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗು ಅದಕ್ಕೆ ಸಹಕರಿಸಿದ ಶ್ರೀ ಕೆಂಪ ತಿಮ್ಮಯ್ಯನ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ?


ಮಾನ್ಯರೇ,
ಕನ್ನಡಪ್ರಭದಲ್ಲಿ ವರದಿ ಪ್ರಕಟವಾಗಿದ್ದರೂ, ಅಂದಿನ ಡಿ ಡಿ ಕ್ರಮ ತೆಗೆದುಕೊಳ್ಳದೆ ಇರುವುದು ಸ್ಪಷ್ಟವಾಗಿ ಕಾಣುತ್ತಿದ್ದರೂ, ಸದರಿ ವಿಚಾರದ ಬಗ್ಗೆ ವರದಿ ನೀಡಿ ಎಂಬುದಾಗಿ ನೀವುಗಳು ಉಪನಿರ್ದೆಷಕರಿಗೆ ಸೂಚಿಸಿದ್ದರೂ ಇದುವರೆವಿಗೂ ವರದಿ ಸಲ್ಲಿಸದಿರುವ ಬಗ್ಗೆ ಕಾರಣ ನನಗೆ ತಿಳಿದುಬರುತ್ತಿಲ್ಲ. ಇದು ಪ್ರಕರಣ ಮುಚ್ಚಿಹಾಕಲು ನಿಮ್ಮ ಕೈಕೆಳಗಿನ ಅಧಿಕಾರಿಗಳು ನಡೆಸುತ್ತಿರುವ ವ್ಯವಸ್ಥಿತ ಸಂಚೆ? ಇದರ ಬಗ್ಗೆ ನೀವೇ ಕ್ರಮ ತೆಗೆದುಕೊಳ್ಳಬೇಕಾಗಿದೆ. ತಮ್ಮ ಅವಗಾಹನೆಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಬ್ಲಾಗ್ ನಲ್ಲಿ ಪ್ರಕಟಿಸಿದ್ದೇನೆ.

No comments:

Post a Comment