ಉದಯಭಾರತಿ ಪದವಿ ಪೂರ್ವ ಕಾಲೇಜು ತಿಪಟೂರು ಈ ಕಾಲೇಜು ಸರ್ಕಾರಕ್ಕೆ ವಂಚನೆ ಮಾಡಿದೆ ಎಂಬುದು ತನಿಕೆ ತಪಾಸಣೆಯಲ್ಲಿ ಸಾಬಿತಾಗಿ ವರದಿ ಸಲ್ಲಿಸಿದ ನಂತರ ಮಾನ್ಯ ಶಿಕ್ಷಣ ಸಚಿವರು ಸದರಿ ಕಾಲೇಜಿನ ಮಂಜೂರಾತಿ/ಮಾನ್ಯತೆ ರದ್ದು ಮಾಡಲು ಆದೇಶಿಸಿ ಇಲ್ಲಿಗೆ ಸುಮಾರು ಒಂದು ವರ್ಷದ ಮೇಲೆ ಆಗಿರುತ್ತದೆ. ಅದಕ್ಕೆ ಪೂರಕವಾಗಿ ಶಿಕ್ಷಣ ಇಲಾಕೆಯು ಪದವಿ ಪೂರ್ವ ಶಿಕ್ಷಣ ಆಯುಕ್ತಾಲಯಕ್ಕೆ ಪತ್ರ ಬರೆದು ಕೆಲವು ವಿಚಾರಗಳ ಬಗ್ಗೆ ಸ್ಪಷ್ಟೀಕರಣವನ್ನು ದಿನಾಂಕ 12.12.2011ರ ಪತ್ರದಲ್ಲಿ ಕೇಳಿ ಇಲ್ಲಿಗೆ ಸುಮಾರು ಎಂಟು ತಿಂಗಳಾಯಿತು. ಆದರೆ ಇಲಾಕೆಯಿ0ದ ಸ್ಪಷ್ಟೀಕರಣ ಬರಲೇ ಇಲ್ಲ.
ಬೇಸತ್ತ ಸರ್ಕಾರವು ಇದುವರೆಗೂ ಸುಮಾರು ಏಳು ಅರೆಸರಕಾರಿ ಪತ್ರ ಬರೆದು ಸ್ಪಷ್ಟೀಕರಣ ನೀಡಲು ಸೂಚಿಸಿದರು ಸಹಾ ಇದುವರೆವಿಗೂ ಯಾವ ಕ್ರಮವನ್ನು ತೆಗೆದುಕೊಂಡಿಲ್ಲವೆಂಬ ವಿಚಾರವನ್ನು ಸುಮಾರು ಬಾರಿ ಆಯುಕ್ತರ ಗಮನಕ್ಕೆ ತಂದಿದ್ದೆನು. ಆಯುಕ್ತರು ಸದರಿ ಕಡತವನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿ, ವರದಿ ಸಿದ್ದಪಡಿಸಿದ ನಂತರ ಅದಕ್ಕೆ ಸಹಿಯನ್ನು ಹಾಕಿದ್ದಾರೆ. (ದಿನಾಂಕ 13.07.2012)
ಆದರೆ ಆ ವರದಿಯು ಸರ್ಕಾರಕ್ಕೆ ತಕ್ಷಣದಲ್ಲಿ ತಲಪುವ ವ್ಯವಸ್ಥೆ ಆಗಬೇಕಾಗಿದೆ. ಇಲ್ಲದಿದ್ದಲ್ಲಿ ಸದರಿ ಕಾಲೇಜು ಮತ್ತಷ್ಟು ಅವ್ಯವಹಾರಗಳನ್ನು ಎಸಗುವ ಸಂಭವ ಹೆಚ್ಚಾಗಿದೆ. ಮುಂದುವರೆದು ಕ್ರಮವನ್ನು ಸರ್ಕಾರವು ಈ ತಿಂಗಳ ಅಂತ್ಯದೊಳಗೆ ಮುಗಿಸಿದಲ್ಲಿ ವಿದ್ಯಾರ್ಥಿಗಳಿಗೆ ಹಾಗು ಸಿಬ್ಬಂದಿಗೆ ಅನುಕೂಲವಾಗುವುದು.
ಆದ್ದರಿಂದ ಆಯುಕ್ತರು ಸಹಿ ಹಾಕಿರುವ ಸ್ಪಷ್ಟೀಕರಣ ವರದಿಯು ಸರ್ಕಾರವನ್ನು ಬೇಗ ತಲಪುವಂತೆ ಕ್ರಮ ವಹಿಸಲು ಸೂಕ್ತ ನಿರ್ದೇಶನ ನೀಡುವಂತೆ ತಮ್ಮನ್ನು ಕೋರುತ್ತೇನೆ.
yes.................
ReplyDelete