Thursday, April 12, 2012

ರಿಟ್ ಅಪಿಲ್ ಸಲ್ಲಿಸಲು ಉದ್ದೇಶ ಪೂರ್ವಕವಾಗಿ ಮಾಡಿದ ವಿಳಂಬ-ಕೆಂಪ ತಿಮ್ಮಯ್ಯ ನಿಂದ ಮತ್ತೊಂದು ಅವಾಂತರ : ಶ್ರೀನಿವಾಸನ್ ತಲೆ ಮೇಲೆ ತೂಗು ಕತ್ತಿ

ಮಾನ್ಯರೇ,
ಕೆಮ್ಪತಿಮ್ಮಯ್ಯನವರು ಸಾಮಾನ್ಯ ವ್ಯಕ್ತಿಯಲ್ಲ. ಇಲಾಕೆಯನ್ನು ಯಾವರೀತಿ ದಿವಾಳಿ ಮಾಡಬೇಕು ಅಂತಾ ಚೆನ್ನಾಗಿ ತಿಳಿದಿರುವ ವ್ಯಕ್ತಿ ಅವರು. ಏನಾಗುತ್ತೆ ಸಿವಾ ? ಅಂತಲೇ ಬಾಯಿಗೆ ಬಂದಿದ್ದನ್ನು ಇಲಾಕಾ ಕಡತಗಳಲ್ಲಿ ಬರೆದು ನೌಕರರ ಜೀವನಗಳನ್ನು ಹಾಳೂ ಮಾಡಿರುವುದು ಅಲ್ಲದೆ ಇಲಾಖೆಯ ಕಿವಿಗೂ ಹೂವು ಇಡುವುದರಲ್ಲಿ ನಿಸ್ಸೀಮ.

ಈತ ಚಿತ್ರದುರ್ಗ ಜಿಲ್ಲೆಯ ಅಧಿಕ್ಷಕನಾಗಿದ್ದಾಗ ಬರೆದಿರುವ ಕಡತಗಳನ್ನು ನೋಡಿದರೆ ಮೇಲಧಿಕಾರಿಗಳು ನಾಚಿಕೆ ಪಡುತ್ತಾರೆ. ವಿಷಯ ಅದಲ್ಲ.
ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ಮುಂದೆ ಇದ್ದ ರಿಟ್ ಅರ್ಜಿಯನ್ನು (ರಿಟ್ ಅರ್ಜಿ ಸಂಕ್ಯೆ ೧೧೪೪೮/೨೦೦೫) ಸರಿಯಾಗಿ ನಿರ್ವಹಿಸದೇ ಇಲಾಕೆಗೆ ಪ್ರತಿಕೂಲ ತೀರ್ಪು ಬಂದಾಗಲೂ ನಿಗದಿತ ಸಮಯದಲ್ಲಿ ರಿಟ್ ಅಪೀಲು ಸಲ್ಲಿಸಲು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿರುತ್ತಾರೆ.
ತದನಂತರ ಶ್ರೀನಿವಾಸನ್ ಇವರು ಸದರಿ ಜಿಲ್ಲೆಯ ಜವಾಬ್ದಾರಿ ತೆಗೆದುಕೊಂಡ ನಂತರ ಅಪೀಲು ಸಲ್ಲಿಸಲಾಗಿದೆ. ಸದರಿ ರಿಟ್ ಅರ್ಜಿ ೩೧/೦೫/೨೦೧೧ರಲ್ಲಿ ತಿರ್ಮಾನವಾದರು ರಿಟ್ ಮೇಲ್ಮನವಿ (ರಿಟ್ ಮೇಲ್ಮನವಿ ಸಂಖ್ಯೆ ೮೩೬)ಯನ್ನು ೨೨/೦೨/೨೦೧೨ರ ವರೆಗೆ ಸಲ್ಲಿಸದಿರುವುದು ಉದ್ದೇಶ ಪುರ್ವಕವೇ ಸರಿ... ಇದರಿಂದ ಇಲಾಕೆಗೆ ಎಷ್ಟು ಆರ್ಥಿಕ ನಷ್ಟ ಗೊತ್ತೇ? ಕೆಂಪತಿಮ್ಮಯ್ಯನೆ ಹೇಳಬೇಕು..
ಇಂತಹವರ ಮೇಲೆ ಆಯುಕ್ತರು ಏನು ಕ್ರಮ ತೆಗೆದುಕೊಳ್ಳುತ್ತಾರೆ?
ಒಂದೆರಡು ತಪ್ಪುಗಳನ್ನು ಮಾಡಿದರೆ ಕ್ಷಮೆಗೆ ಅರ್ಹ . ಆದರೆ ತಪ್ಪು ಮಾಡುವುದನ್ನೇ ಕಾಯಕ ಮಾಡಿಕೊಂಡರೆ ? ಏನೋಪ್ಪ ಈ ಇಲಾಖೆಯ ನೌಕರರ ರಹಸ್ಯವನ್ನು ಆಯುಕ್ತರೇ ಪತ್ತೆಹಚ್ಚಬೇಕು.....ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆ ಮಾಡುವವರು ಯಾರು ಎಂಬ ಪ್ರಶ್ನೆಗೆ ಆಯುಕ್ತೆ ರಶ್ಮಿ ಎಂಬ ಉತ್ತರ ಈಗಾಗಲೇ ಸಾರ್ವಜನಿಕರಿಗೆ ಸಿಕ್ಕಿದೆ. ಅದು ನಿಜವಾಗಬೇಕಾದರೆ ಇಂತಹಾ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಾಗಿದೆ.....

No comments:

Post a Comment