ಸಾರ್ವಜನಿಕ ಸೇವೆಯಲ್ಲಿರುವ ಭ್ರಷ್ಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಾಲ್ಕು ತಿಂಗಳಲ್ಲಿ ಅನುಮತಿ ನೀಡದಿದ್ದರೆ, ಅದು ಅನುಮತಿ ನೀಡಿದಂತೆಯೇ ಎಂದು ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್ ನ ಇಬ್ಬರು ನ್ಯಾಯಮೂರ್ತಿಗಳ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಭ್ರಷ್ಟಾಚಾರದ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಕೇಂದ್ರದ ಮಾಜಿ ಸಚಿವ ಎ ರಾಜಾ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು, ಅವರನ್ನು ಬಂಧಿಸಲು ಪ್ರಧಾನಿ ಅವರು ಅನುಮತಿ ನೀಡಬೇಕೆಂದು ಕೋರಿ ಜನತಾ ಪಕ್ಷದ ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟಿನ ದ್ವೀಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರು ಈ ನಿಲುವು ವ್ಯಕ್ತಪಡಿಸಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರ ವಾದವನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳು, ಕೇಂದ್ರ ದೂರ ಸಂಪರ್ಕ ಖಾತೆಯ ಮಾಜಿ ಸಚಿವ ರಾಜಾ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು,ಸ್ವಾಮಿ ಅವರು ಅನುಮತಿ ಪಡೆಯುವ ಹಕ್ಕು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
Prajavani News
Read the news by clicking on this
ಬ್ಲಾಗ್ ಬರಹಗಾರನ ಟಿಪ್ಪಣಿ: ಈ ಹಿನ್ನೆಲೆಯಲ್ಲಿ ಶ್ರೀ ಕೆಂಪತಿಮ್ಮಯ್ಯ ಹಾಗು ಶ್ರೀ ನಾರಾಯಣಸ್ವಾಮಿ ಇವರ ಮೇಲೆ ಪ್ರಕರಣ ದಾಕಲಿಸಲು ನಿರ್ಧರಿಸುವುದು ಸೂಕ್ತ ಎಂದು ಭಾವಿಸಿದ್ದು, ನಿರ್ದೇಶಕರ ಪತ್ರವನ್ನು ನಿರೀಕ್ಷಿಸಲಾಗಿದೆ ...
No comments:
Post a Comment