ಯಲ್ಲಾಪುರ: ಪದವಿ ಪೂರ್ವ ಶಿಕ್ಷಣ ಮಂಡಳಿಯ ಕಾರ್ಯ ವೈಖರಿಯಿಂದಾಗಿ ವಿದ್ಯಾರ್ಥಿನಿಯೊಬ್ಬರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಪರೀಕ್ಷೆಗೆ ಹಾಜರಾಗಿದ್ದರೂ ಒಂದು ವಿಷಯದಲ್ಲಿ ಗೈರುಹಾಜರಿ ಎಂದು ಅಂಕಪಟ್ಟಿಯಲ್ಲಿ ನಮೂದಿಸಿರುವುದು ವಿದ್ಯಾರ್ಥಿನಿಯನ್ನು ಆತಂಕಕ್ಕೆ ಈಡುಮಾಡಿದೆ.
ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ವೈಟಿಎಸ್ಎಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಕೃತಿಕಾ ಬಾಂದೇಕರ್ ಅವರಿಗೆ ಎಲ್ಲ ವಿಷಯಗಳಲ್ಲಿಯೂ ಸರಾಸರಿ 80ಕ್ಕೂ ಹೆಚ್ಚಿನ ಅಂಕ ಬಂದಿದ್ದು, `ಬಿಜಿನೆಸ್ ಸ್ಟಡೀಸ್` ವಿಷಯದಲ್ಲಿ ಗೈರು ಎಂದು ನಮೂದಿಸಿ, ಫಲಿತಾಂಶ ನಪಾಸು ಎಂದು ಬರೆಯಲಾಗಿದೆ.
ಕೃತಿಕಾಳ ಪರೀಕ್ಷಾ ಪ್ರವೇಶ ಪತ್ರದ ಸಂಖ್ಯೆ 725454 ಆಗಿದ್ದು ಮಾರ್ಚ್ 28 ರಂದು ನಡೆದ `ಬಿಸನೆಸ್ ಸ್ಟಡೀಸ್` ಪರೀಕ್ಷೆಗೆ ಹಾಜರಾದ ಮತ್ತು ಪರೀಕ್ಷೆ ಬರೆದ ಎಲ್ಲ ದಾಖಲೆ ಇದೆ.
ವಿದ್ಯಾರ್ಥಿನಿ ಸಮಸ್ಯೆಗೆ ಸ್ಪಂದಿಸಿರುವ ಕಾಲೇಜಿನ ಪ್ರಾಚಾರ್ಯರು ಸಂಬಂಧಪಟ್ಟ ಎಲ್ಲ ದಾಖಲಾತಿಗಳನ್ನು ಪರೀಕ್ಷಾ ಮಂಡಳಿಗೆ ಕಳುಹಿಸಿದ್ದಾರೆ ಎಂದು ಕೃತಿಕಾಳ ಪಾಲಕರು ತಿಳಿಸಿದ್ದಾರೆ. ಇಂಗ್ಲಿಷ್- 66, ಸಂಸ್ಕೃತ -83, ಇತಿಹಾಸ -90, ಅರ್ಥಶಾಸ್ತ್ರ -78, ಲೆಕ್ಕಶಾಸ್ತ್ರ -83 ಒಟ್ಟೂ 400 ಅಂಕ ಪಡೆದಿದ್ದಾರೆ. ಮಂಡಳಿ ನ್ಯೂನತೆಯನ್ನು ಸರಿಪಡಿಸಿಕೊಂಡು ಮಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಪಾಲಕರ ಆಗ್ರಹ.
ಪರೀಕ್ಷೆಗೆ ಹಾಜರಾಗಿದ್ದರೂ ಒಂದು ವಿಷಯದಲ್ಲಿ ಗೈರುಹಾಜರಿ ಎಂದು ಅಂಕಪಟ್ಟಿಯಲ್ಲಿ ನಮೂದಿಸಿರುವುದು ವಿದ್ಯಾರ್ಥಿನಿಯನ್ನು ಆತಂಕಕ್ಕೆ ಈಡುಮಾಡಿದೆ.
ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ವೈಟಿಎಸ್ಎಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಕೃತಿಕಾ ಬಾಂದೇಕರ್ ಅವರಿಗೆ ಎಲ್ಲ ವಿಷಯಗಳಲ್ಲಿಯೂ ಸರಾಸರಿ 80ಕ್ಕೂ ಹೆಚ್ಚಿನ ಅಂಕ ಬಂದಿದ್ದು, `ಬಿಜಿನೆಸ್ ಸ್ಟಡೀಸ್` ವಿಷಯದಲ್ಲಿ ಗೈರು ಎಂದು ನಮೂದಿಸಿ, ಫಲಿತಾಂಶ ನಪಾಸು ಎಂದು ಬರೆಯಲಾಗಿದೆ.
ಕೃತಿಕಾಳ ಪರೀಕ್ಷಾ ಪ್ರವೇಶ ಪತ್ರದ ಸಂಖ್ಯೆ 725454 ಆಗಿದ್ದು ಮಾರ್ಚ್ 28 ರಂದು ನಡೆದ `ಬಿಸನೆಸ್ ಸ್ಟಡೀಸ್` ಪರೀಕ್ಷೆಗೆ ಹಾಜರಾದ ಮತ್ತು ಪರೀಕ್ಷೆ ಬರೆದ ಎಲ್ಲ ದಾಖಲೆ ಇದೆ.
ವಿದ್ಯಾರ್ಥಿನಿ ಸಮಸ್ಯೆಗೆ ಸ್ಪಂದಿಸಿರುವ ಕಾಲೇಜಿನ ಪ್ರಾಚಾರ್ಯರು ಸಂಬಂಧಪಟ್ಟ ಎಲ್ಲ ದಾಖಲಾತಿಗಳನ್ನು ಪರೀಕ್ಷಾ ಮಂಡಳಿಗೆ ಕಳುಹಿಸಿದ್ದಾರೆ ಎಂದು ಕೃತಿಕಾಳ ಪಾಲಕರು ತಿಳಿಸಿದ್ದಾರೆ. ಇಂಗ್ಲಿಷ್- 66, ಸಂಸ್ಕೃತ -83, ಇತಿಹಾಸ -90, ಅರ್ಥಶಾಸ್ತ್ರ -78, ಲೆಕ್ಕಶಾಸ್ತ್ರ -83 ಒಟ್ಟೂ 400 ಅಂಕ ಪಡೆದಿದ್ದಾರೆ. ಮಂಡಳಿ ನ್ಯೂನತೆಯನ್ನು ಸರಿಪಡಿಸಿಕೊಂಡು ಮಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಪಾಲಕರ ಆಗ್ರಹ.
No comments:
Post a Comment