ಶಿರಸಿ: `ವೇತನ ತಾರತಮ್ಯ ನಿವಾರಿಸುವಂತೆ ಒತ್ತಾಯಿಸಿ ತರಗತಿ ಬಹಿಷ್ಕರಿಸಿರುವ ಪದವಿಪೂರ್ವ ಕಾಲೇಜು ಅಧ್ಯಾಪಕರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದೇ 12ರಿಂದ (ಸೋಮವಾರ) ತರಗತಿಗೆ ಹಾಜರಾಗಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಕೊಳ್ಳಲಿದೆ` ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಇಲ್ಲಿ ಎಚ್ಚರಿಸಿದರು.
ಬೆಂಗಳೂರಿನಲ್ಲಿ ಪದವಿಪೂರ್ವ ಕಾಲೇಜು ಅಧ್ಯಾಪಕರ ಸಂಘದ ಪ್ರಮುಖರ ಜೊತೆ ಶುಕ್ರವಾರ ನಡೆಸಿದ ಸಭೆಯಲ್ಲೂ ಈ ವಿಷಯವನ್ನು ಸ್ಪಷ್ಟಪಡಿಸಲಾಗಿದೆ. ಸಂಘಟನೆಯ ಪದಾಧಿಕಾರಿಗಳು ಮಾತುಕತೆ ನಡೆಸಿ ಸೋಮವಾರದೊಳಗೆ ತರಗತಿ ನಡೆಯುವ ವಾತಾವರಣ ನಿರ್ಮಿಸಲಿ. ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಪರೀಕ್ಷೆ ನಡೆಯುವುದರಿಂದ ಪಾಲಕರಿಗೆ ಮಕ್ಕಳ ಭವಿಷ್ಯದ ಆತಂಕ ಎದುರಾಗಿದೆ. ಶಿಕ್ಷಕರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂಬುದು ಸರ್ಕಾರ ಹಾಗೂ ಪಾಲಕರ ಅಪೇಕ್ಷೆಯಾಗಿದೆ` ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ.ಪೂ. ಕಾಲೇಜು ಅಧ್ಯಾಪಕರು ಮತ್ತು ಪದವಿ ಕಾಲೇಜು ಅಧ್ಯಾಪಕರ ವೇತನಕ್ಕೆ ಹೋಲಿಸಿದರೆ ಭಾರಿ ತಾರತಮ್ಯ ಇದೆ ಎಂದು ಪಿಯು ಅಧ್ಯಾಪಕರು ಮೂರು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ಸಮಸ್ಯೆ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಮುಂದುವರಿದಿದೆ. ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಿ ಸಮಿತಿ ವರದಿಯನ್ನು ವೇತನ ಸಮಿತಿಗೆ ಈಗಾಗಲೇ ಸಲ್ಲಿಸಿದೆ. ವೇತನ ಸಮಿತಿ ಮಾರ್ಚ್ ಒಳಗಾಗಿ ಪರಿಷ್ಕೃತ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದೆ. ವರದಿಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತದೆ. ಶಿಕ್ಷಕರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಮುಖ್ಯಮಂತ್ರಿ ಸದಾನಂದ ಗೌಡ ಸಹ ವಿಧಾನ ಪರಿಷತ್ನಲ್ಲಿ ಹೇಳಿದ್ದಾರೆ. ಪದವಿಪೂರ್ವ ಅಧ್ಯಾಪಕರಿಗೆ ಮಾತ್ರವಲ್ಲ, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗೂ ವೇತನದಲ್ಲಿ ತಾರತಮ್ಯ ಆಗಿದೆ. ಹೀಗಾಗಿ ಆತುರದ ನಿರ್ಣಯ ಕೈಕೊಳ್ಳುವ ಸಂದರ್ಭ ಇದಲ್ಲ ಎಂದು ಅವರು ತಿಳಿಸಿದರು.
`ವಿಧಾನಸಭೆ ಅಧಿವೇಶನದ ವೇಳೆಯಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಅನೇಕರು ಹೇಳುತ್ತಿದ್ದಾರೆ. ನಾನು ಅದನ್ನು ಒಪ್ಪಿಲ್ಲ. ಆದರೆ ಅಧ್ಯಾಪಕರು ಇದೇ ಪ್ರವೃತ್ತಿ ಮುಂದುವರಿಸಿದರೆ ಸಮಾಜದಲ್ಲಿ ರಾಜಕೀಯ ಪ್ರೇರಿತ ಎಂಬ ಭಾವನೆ ಬರುತ್ತದೆ` ಎಂದು ಕಾಗೇರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರಿನಲ್ಲಿ ಪದವಿಪೂರ್ವ ಕಾಲೇಜು ಅಧ್ಯಾಪಕರ ಸಂಘದ ಪ್ರಮುಖರ ಜೊತೆ ಶುಕ್ರವಾರ ನಡೆಸಿದ ಸಭೆಯಲ್ಲೂ ಈ ವಿಷಯವನ್ನು ಸ್ಪಷ್ಟಪಡಿಸಲಾಗಿದೆ. ಸಂಘಟನೆಯ ಪದಾಧಿಕಾರಿಗಳು ಮಾತುಕತೆ ನಡೆಸಿ ಸೋಮವಾರದೊಳಗೆ ತರಗತಿ ನಡೆಯುವ ವಾತಾವರಣ ನಿರ್ಮಿಸಲಿ. ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಪರೀಕ್ಷೆ ನಡೆಯುವುದರಿಂದ ಪಾಲಕರಿಗೆ ಮಕ್ಕಳ ಭವಿಷ್ಯದ ಆತಂಕ ಎದುರಾಗಿದೆ. ಶಿಕ್ಷಕರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂಬುದು ಸರ್ಕಾರ ಹಾಗೂ ಪಾಲಕರ ಅಪೇಕ್ಷೆಯಾಗಿದೆ` ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ.ಪೂ. ಕಾಲೇಜು ಅಧ್ಯಾಪಕರು ಮತ್ತು ಪದವಿ ಕಾಲೇಜು ಅಧ್ಯಾಪಕರ ವೇತನಕ್ಕೆ ಹೋಲಿಸಿದರೆ ಭಾರಿ ತಾರತಮ್ಯ ಇದೆ ಎಂದು ಪಿಯು ಅಧ್ಯಾಪಕರು ಮೂರು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ಸಮಸ್ಯೆ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಮುಂದುವರಿದಿದೆ. ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಿ ಸಮಿತಿ ವರದಿಯನ್ನು ವೇತನ ಸಮಿತಿಗೆ ಈಗಾಗಲೇ ಸಲ್ಲಿಸಿದೆ. ವೇತನ ಸಮಿತಿ ಮಾರ್ಚ್ ಒಳಗಾಗಿ ಪರಿಷ್ಕೃತ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದೆ. ವರದಿಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತದೆ. ಶಿಕ್ಷಕರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಮುಖ್ಯಮಂತ್ರಿ ಸದಾನಂದ ಗೌಡ ಸಹ ವಿಧಾನ ಪರಿಷತ್ನಲ್ಲಿ ಹೇಳಿದ್ದಾರೆ. ಪದವಿಪೂರ್ವ ಅಧ್ಯಾಪಕರಿಗೆ ಮಾತ್ರವಲ್ಲ, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗೂ ವೇತನದಲ್ಲಿ ತಾರತಮ್ಯ ಆಗಿದೆ. ಹೀಗಾಗಿ ಆತುರದ ನಿರ್ಣಯ ಕೈಕೊಳ್ಳುವ ಸಂದರ್ಭ ಇದಲ್ಲ ಎಂದು ಅವರು ತಿಳಿಸಿದರು.
`ವಿಧಾನಸಭೆ ಅಧಿವೇಶನದ ವೇಳೆಯಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಅನೇಕರು ಹೇಳುತ್ತಿದ್ದಾರೆ. ನಾನು ಅದನ್ನು ಒಪ್ಪಿಲ್ಲ. ಆದರೆ ಅಧ್ಯಾಪಕರು ಇದೇ ಪ್ರವೃತ್ತಿ ಮುಂದುವರಿಸಿದರೆ ಸಮಾಜದಲ್ಲಿ ರಾಜಕೀಯ ಪ್ರೇರಿತ ಎಂಬ ಭಾವನೆ ಬರುತ್ತದೆ` ಎಂದು ಕಾಗೇರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Prajavani Dialy dated 11.12.2011
No comments:
Post a Comment