ಶಿರಾ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕಿನ ಬರಗೂರು ಆಂಜನೇಯ ಸ್ವಾಮಿ ಗ್ರಾಮಾಂತರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಶಿಕ್ಷಕರು, ಉಪನ್ಯಾಸಕರು ಅನಿರ್ದಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಸೋಮವಾರ ಆರಂಭಿಸಿದರು.
ಕಾಲೇಜು ಮುಂಭಾಗದ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಿಬ್ಬಂದಿ ಪರವಾಗಿ ಮಾತನಾಡಿದ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಎನ್.ಜಯರಾಮಯ್ಯ ಮಾತನಾಡಿ, ಸದರಿ ಸಂಸ್ಥೆ 1994-95ನೇ ಸಾಲಿನಲ್ಲಿ ಆರಂಭವಾಗಿದ್ದು, ಸರ್ಕಾರ ಅನುದಾನ ನೀಡಲು ಒಪ್ಪಿದೆ. ಆದರೆ ಸಂಸ್ಥೆ ಕಾರ್ಯದರ್ಶಿ ಬಿ.ಆರ್.ಕರೇಗೌಡ ತನ್ನ ವೈಯಕ್ತಿಕ ಹಿತಾಸಕ್ತಿಯಿಂದ ಅನುದಾನ ಬಿಡುಗಡೆಯಾಗದಂತೆ ತಡೆ ಒಡ್ಡಿದ್ದಾರೆ ಎಂದು ಆರೋಪಿಸಿದರು.
ತಾಲ್ಲೂಕು ಶಿಕ್ಷಣಾಧಿಕಾರಿ ಕಚೇರಿ ಪರವಾಗಿ ಆಗಮಿಸಿದ್ದ ಸಿಬ್ಬಂದಿ ಡಿ.ಕೆ.ತಿಪ್ಪೇಸ್ವಾಮಿ ಮನವಿ ಸ್ವೀಕರಿಸಿದರು. ಸತ್ಯಾಗ್ರಹದಲ್ಲಿ ಉಪನ್ಯಾಸಕ ಎಂ.ಗೋವಿಂದರಾಯ, ಓಂಕಾರ್, ಎಂ.ಜಯಲಕ್ಷ್ಮಿ, ಆರ್.ಜಯಲಕ್ಷ್ಮಿ, ಎಚ್.ಎಲ್.ಪಂಕಜ, ಲೋಕೇಶ್, ಬಲವಂತರಾಯ, ಜಯಪ್ರಕಾಶ್, ಗುರುಸಿದ್ದಪ್ಪ, ಎಸ್.ಆರ್.ರಾಜು ಮತ್ತಿತರರು ಪಾಲ್ಗೊಂಡಿದ್ದರು.
ಕಾಲೇಜು ಮುಂಭಾಗದ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಿಬ್ಬಂದಿ ಪರವಾಗಿ ಮಾತನಾಡಿದ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಎನ್.ಜಯರಾಮಯ್ಯ ಮಾತನಾಡಿ, ಸದರಿ ಸಂಸ್ಥೆ 1994-95ನೇ ಸಾಲಿನಲ್ಲಿ ಆರಂಭವಾಗಿದ್ದು, ಸರ್ಕಾರ ಅನುದಾನ ನೀಡಲು ಒಪ್ಪಿದೆ. ಆದರೆ ಸಂಸ್ಥೆ ಕಾರ್ಯದರ್ಶಿ ಬಿ.ಆರ್.ಕರೇಗೌಡ ತನ್ನ ವೈಯಕ್ತಿಕ ಹಿತಾಸಕ್ತಿಯಿಂದ ಅನುದಾನ ಬಿಡುಗಡೆಯಾಗದಂತೆ ತಡೆ ಒಡ್ಡಿದ್ದಾರೆ ಎಂದು ಆರೋಪಿಸಿದರು.
ತಾಲ್ಲೂಕು ಶಿಕ್ಷಣಾಧಿಕಾರಿ ಕಚೇರಿ ಪರವಾಗಿ ಆಗಮಿಸಿದ್ದ ಸಿಬ್ಬಂದಿ ಡಿ.ಕೆ.ತಿಪ್ಪೇಸ್ವಾಮಿ ಮನವಿ ಸ್ವೀಕರಿಸಿದರು. ಸತ್ಯಾಗ್ರಹದಲ್ಲಿ ಉಪನ್ಯಾಸಕ ಎಂ.ಗೋವಿಂದರಾಯ, ಓಂಕಾರ್, ಎಂ.ಜಯಲಕ್ಷ್ಮಿ, ಆರ್.ಜಯಲಕ್ಷ್ಮಿ, ಎಚ್.ಎಲ್.ಪಂಕಜ, ಲೋಕೇಶ್, ಬಲವಂತರಾಯ, ಜಯಪ್ರಕಾಶ್, ಗುರುಸಿದ್ದಪ್ಪ, ಎಸ್.ಆರ್.ರಾಜು ಮತ್ತಿತರರು ಪಾಲ್ಗೊಂಡಿದ್ದರು.
To read this thread click on Prajavani 07.12.2011
No comments:
Post a Comment