ಪಾಟಿಲ್ ರಿಂದ ಹತ್ತುವರ್ಷಗಳ ಪಿತ್ರಾರ್ಜಿತ ಸ್ವತ್ತು ಕಿತ್ತುಕೊ0ಡಿದ್ದಕ್ಕಾಗಿ ಮತ್ತು ನನ್ನ ಮನವಿಯನ್ನು ಪರಿಗಣಿಸಿದ್ದಕ್ಕಾಗಿ ಮಾನ್ಯ ಆಯುಕ್ತರಿಗೆ ಸಾರ್ವಜನಿಕರ ಪರವಾಗಿ ಅನಂತಾನಂತ ವಂದನೆಗಳು. ನಿಮ್ಮಿಂದ ಇಲಾಕೆಯು ಸುಧಾರಣೆ ಕಾಣುತ್ತಿದ್ದು, ಎಲ್ಲಾ ಸಾರ್ವಜನಿಕರ ಪರವಾಗಿ ತಮಗೆ ನಾನು ಅಭಾರಿ............
Improper maintenance of records and incomplete computerisation contributed to the delay in disposal of cases in the Pre-University Department
Click on this to visit Department of Technical EducationPublic Instruction
Wednesday, June 27, 2012
Sunday, June 24, 2012
ಜೆ.ಡಿ ಮಟ್ಟುರರೊಂದಿಗಿನ ಹೋಪ್-ಲೆಸ್ ಭೇಟಿ-ಇಂದಿರಾ ಕಾಲೇಜಿನ ಸಿಬ್ಬಂದಿಯೊಂದಿಗೆ-ಕನಿಷ್ಠ ಸಾಮಾನ್ಯ ಜ್ಞಾನವು ಇಲ್ಲದ ಜೆಡಿ.
ಮಾನ್ಯರೇ,
ಹೇಳಲು ನಾಚಿಕೆ. ಆದರು ಹೇಳಲೇ ಬೇಕಾದ ಅನಿವಾರ್ಯತೆ......
ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್ ಅಂತಾ ಗೊತ್ತೀಲ್ಲದೆ ಇರೋ ವ್ಯಕ್ತಿ ಜೆಡಿ ಆಗಿರೋದು (ಅದು ಇಂತಹಾ ಆಯುಕ್ತರ ಅವಧಿಯಲ್ಲಿ ) ಬೇಸರದ ಸಂಗತಿ ...
ನಿನ್ನೆ ಇಂದಿರಾ ಕಾಲೇಜಿನ ಸಿಬ್ಬಂದಿಯೊಂದಿಗೆ ನಾನು ಜೆ.ಡಿ ಯವರನ್ನು ಭೇಟಿಯಾಗಲು ಹೋಗಿದ್ದೆ . ನಾನು 2003ರಿಂದ ಇಲ್ಲಿಯವರೆಗಿನ ಎಲ್ಲಾ ಜೆ.ಡಿ ಗಳ ಜೊತೆ ಮಾತಾಡಿದ್ದೇನೆ ಕಾನೂನು ಚರ್ಚಿಸಿದ್ದೇನೆ. ಆದರೆ ಇಂತಹಾ ಪೂರ್ ನಾಲೆಜ್ ಇರೋ ಜೆ.ಡಿ ನೋಡಿದ್ದು ಇದೆ ಮೊದಲು.......
ನಮ್ಮ ಸಂಬಳವನ್ನು ಆಡಳಿತ ಮಂಡಳಿ ನಿಡುತ್ತಿಲ್ಲಾ ಅಂತಾ ಅನುದಾನಿತ ಸಿಬ್ಬಂದಿ ದೂರು ಸಲ್ಲಿಸಿದರೆ ಅದು ನನಗೆ ಸಂಬಂಧಿಸಿದಲ್ಲ ಅಂತಾರೆ ಜೆ.ಡಿ . ನೀವು ಮ್ಯಾನೆಜ್ ಮೆಂಟ್ ಜೊತೆಗೆ ಮಾತನಾಡಬೇಕು ಸಂಬಳ ನಿಡೋದಷ್ಟೇ ನಮ್ಮ ಕೆಲಸ ಅಂತಾರೆ ಜೆ.ದಿ ಮಹಾಶಯ ......
ಅನುದಾನ ನೀಡೋದಷ್ಟೇ ನಿಮ್ಮ ಕೆಲಸ ಅಲ್ಲ ಅದು ಸರಿಯಾಗಿ ಬಳಕೆಯಾಗುತ್ತಾ ಇದೆಯಾ ಅಂತಾ ನೋಡಬೇಕಾದ್ದು ನಿಮ್ಮ ಕೆಲಸ ಅಂತಾ ನ್ಯಾಯಾಲಯಗಳು ಹೇಳಿವೆ ಅಂದಿದ್ದಕ್ಕೆ ತಬ್ಬಿಬ್ಬಾದ ಜೆ.ಡಿ ನೀವು ಮನವಿ ಕೊಡಿ ನನ್ನ ಬಳಿ ಬಂದಾಗ ನೋಡ್ತೀನಿ ಅಂದು ಯಾವುದೋ ಪೇಪರ್ ನಲ್ಲಿ ತಲೆ ಹುದುಗಿಸಿದರು.......
ಆದರೆ ಆಯುಕ್ತರು ಇಂದಿರಾ ಕಾಲೇಜಿನ ಸಿಬ್ಬಂದಿಯನ್ನು ಗುರುತು ಹಿಡಿದು ಏನು ಸಮಸ್ಯೆ ಅಂತಾ ವಿಚಾರಿಸಿ ಡಿ .ಡಿ ರ0ಗನಾಥ್ ಬಳಿ ಮಾತನಾಡುತ್ತೇನೆ ಅಂತಾ ಹೇಳಿದರು ಎಂಬುದಾಗಿ ನವ್ಕರರು ಹೇಳುವಾಗ ಆಯುಕ್ತರ ಮೇಲಿನ ವಿಸ್ವಾಸ-ಜಿಡಿ ಮೇಲಿನ ತಿರಸ್ಕಾರ ಎರಡು ಅವರ ಕಣ್ಣಲ್ಲಿ ಕಂಡವು...
ಆಯುಕ್ತರಲ್ಲಿ ನನ್ನ ಕೋರಿಕೆ ಇಷ್ಟೇ ...ಯಾರು ಪರಿಪೂರ್ಣರಲ್ಲ , ನಾನು ಸಹಾ ನಿಮ್ಮ ಜೆ.ಡಿ ಯು ಸಹಾ .. ಹಾಗಾಗಿ ಕಡೆಯ ಪಕ್ಷ ನಿಮ್ಮ ಜೆಡಿ ಗೆ ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್ ಅಂದರೆ ಏನು ? ಕಾಸಗಿ ಕಾಲೇಜುಗಳಿಗೂ ಇಲಾಕೆಗು ಏನು ಸಂಬಂಧ, ಕಾಸಗಿ ಕಾಲೇಜುಗಳ ಸಿಬ್ಬಂದಿ ಇಲಾಕೆಗೆ ಯಾಕೆ ಬರುತ್ತಾರೆ ಅಂತಾ ತಿಳುವಳಿಕೆ ಕೊಡಿಸಿ , ಬುದ್ದಿ ಹೇಳಿ..ಜೆ.ಡಿ ಪದವಿ ಶಾಶ್ವತವಲ್ಲ .. ಇರೋ ದಿನಗಳಷ್ಟು ಸರ್ಕಾರಿ/ಸಾರ್ವಜನಿಕ ನವ್ಕರನಾಗಿ ಸೇವೆ ಸಲ್ಲಿಸಲಿ. ತನ್ನ ತಪ್ಪು ಸರಿಪಡಿಸಿಕೊಂಡು ಈ ಕೆಳಗಿನ ತೀರ್ಪನ್ನು ಓದಲು ತಿಳಿಸಿ ...ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್ ಅಂದರೆ ಏನು ಅಂತಾ ಮತ್ತು ಇಲಾಕೆಯ ಪಾತ್ರ ಏನು ಅಂತಾ ಜಸ್ಟಿಸ್ ಶೈಲೇಂದ್ರ ಕುಮಾರ್ ಬಹಳ ಸೊಗಸಾಗಿ ತಿಳಿಸಿದ್ದಾರೆ.
ಹೇಳಲು ನಾಚಿಕೆ. ಆದರು ಹೇಳಲೇ ಬೇಕಾದ ಅನಿವಾರ್ಯತೆ......
ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್ ಅಂತಾ ಗೊತ್ತೀಲ್ಲದೆ ಇರೋ ವ್ಯಕ್ತಿ ಜೆಡಿ ಆಗಿರೋದು (ಅದು ಇಂತಹಾ ಆಯುಕ್ತರ ಅವಧಿಯಲ್ಲಿ ) ಬೇಸರದ ಸಂಗತಿ ...
ನಿನ್ನೆ ಇಂದಿರಾ ಕಾಲೇಜಿನ ಸಿಬ್ಬಂದಿಯೊಂದಿಗೆ ನಾನು ಜೆ.ಡಿ ಯವರನ್ನು ಭೇಟಿಯಾಗಲು ಹೋಗಿದ್ದೆ . ನಾನು 2003ರಿಂದ ಇಲ್ಲಿಯವರೆಗಿನ ಎಲ್ಲಾ ಜೆ.ಡಿ ಗಳ ಜೊತೆ ಮಾತಾಡಿದ್ದೇನೆ ಕಾನೂನು ಚರ್ಚಿಸಿದ್ದೇನೆ. ಆದರೆ ಇಂತಹಾ ಪೂರ್ ನಾಲೆಜ್ ಇರೋ ಜೆ.ಡಿ ನೋಡಿದ್ದು ಇದೆ ಮೊದಲು.......
ನಮ್ಮ ಸಂಬಳವನ್ನು ಆಡಳಿತ ಮಂಡಳಿ ನಿಡುತ್ತಿಲ್ಲಾ ಅಂತಾ ಅನುದಾನಿತ ಸಿಬ್ಬಂದಿ ದೂರು ಸಲ್ಲಿಸಿದರೆ ಅದು ನನಗೆ ಸಂಬಂಧಿಸಿದಲ್ಲ ಅಂತಾರೆ ಜೆ.ಡಿ . ನೀವು ಮ್ಯಾನೆಜ್ ಮೆಂಟ್ ಜೊತೆಗೆ ಮಾತನಾಡಬೇಕು ಸಂಬಳ ನಿಡೋದಷ್ಟೇ ನಮ್ಮ ಕೆಲಸ ಅಂತಾರೆ ಜೆ.ದಿ ಮಹಾಶಯ ......
ಅನುದಾನ ನೀಡೋದಷ್ಟೇ ನಿಮ್ಮ ಕೆಲಸ ಅಲ್ಲ ಅದು ಸರಿಯಾಗಿ ಬಳಕೆಯಾಗುತ್ತಾ ಇದೆಯಾ ಅಂತಾ ನೋಡಬೇಕಾದ್ದು ನಿಮ್ಮ ಕೆಲಸ ಅಂತಾ ನ್ಯಾಯಾಲಯಗಳು ಹೇಳಿವೆ ಅಂದಿದ್ದಕ್ಕೆ ತಬ್ಬಿಬ್ಬಾದ ಜೆ.ಡಿ ನೀವು ಮನವಿ ಕೊಡಿ ನನ್ನ ಬಳಿ ಬಂದಾಗ ನೋಡ್ತೀನಿ ಅಂದು ಯಾವುದೋ ಪೇಪರ್ ನಲ್ಲಿ ತಲೆ ಹುದುಗಿಸಿದರು.......
ಆದರೆ ಆಯುಕ್ತರು ಇಂದಿರಾ ಕಾಲೇಜಿನ ಸಿಬ್ಬಂದಿಯನ್ನು ಗುರುತು ಹಿಡಿದು ಏನು ಸಮಸ್ಯೆ ಅಂತಾ ವಿಚಾರಿಸಿ ಡಿ .ಡಿ ರ0ಗನಾಥ್ ಬಳಿ ಮಾತನಾಡುತ್ತೇನೆ ಅಂತಾ ಹೇಳಿದರು ಎಂಬುದಾಗಿ ನವ್ಕರರು ಹೇಳುವಾಗ ಆಯುಕ್ತರ ಮೇಲಿನ ವಿಸ್ವಾಸ-ಜಿಡಿ ಮೇಲಿನ ತಿರಸ್ಕಾರ ಎರಡು ಅವರ ಕಣ್ಣಲ್ಲಿ ಕಂಡವು...
ಆಯುಕ್ತರಲ್ಲಿ ನನ್ನ ಕೋರಿಕೆ ಇಷ್ಟೇ ...ಯಾರು ಪರಿಪೂರ್ಣರಲ್ಲ , ನಾನು ಸಹಾ ನಿಮ್ಮ ಜೆ.ಡಿ ಯು ಸಹಾ .. ಹಾಗಾಗಿ ಕಡೆಯ ಪಕ್ಷ ನಿಮ್ಮ ಜೆಡಿ ಗೆ ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್ ಅಂದರೆ ಏನು ? ಕಾಸಗಿ ಕಾಲೇಜುಗಳಿಗೂ ಇಲಾಕೆಗು ಏನು ಸಂಬಂಧ, ಕಾಸಗಿ ಕಾಲೇಜುಗಳ ಸಿಬ್ಬಂದಿ ಇಲಾಕೆಗೆ ಯಾಕೆ ಬರುತ್ತಾರೆ ಅಂತಾ ತಿಳುವಳಿಕೆ ಕೊಡಿಸಿ , ಬುದ್ದಿ ಹೇಳಿ..ಜೆ.ಡಿ ಪದವಿ ಶಾಶ್ವತವಲ್ಲ .. ಇರೋ ದಿನಗಳಷ್ಟು ಸರ್ಕಾರಿ/ಸಾರ್ವಜನಿಕ ನವ್ಕರನಾಗಿ ಸೇವೆ ಸಲ್ಲಿಸಲಿ. ತನ್ನ ತಪ್ಪು ಸರಿಪಡಿಸಿಕೊಂಡು ಈ ಕೆಳಗಿನ ತೀರ್ಪನ್ನು ಓದಲು ತಿಳಿಸಿ ...ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್ ಅಂದರೆ ಏನು ಅಂತಾ ಮತ್ತು ಇಲಾಕೆಯ ಪಾತ್ರ ಏನು ಅಂತಾ ಜಸ್ಟಿಸ್ ಶೈಲೇಂದ್ರ ಕುಮಾರ್ ಬಹಳ ಸೊಗಸಾಗಿ ತಿಳಿಸಿದ್ದಾರೆ.
Karnataka High CourtB. Usha W/O Vishwanath S.V. And ... vs State Of Karnataka By Its ... on 13 November, 2007 D.V. Shylendra Kumar, J.{2008 (2) KarLJ 565}
ಈ ಪತ್ರ ಸಾರ್ವಜನಿಕ ಹಿತದೃಷ್ಟಿ ಯಿಂದ ಆಯುಕ್ತರಿಗೆ ಬರೆಯಲ್ಪಟ್ಟಿದೆ ............
Friday, June 22, 2012
ಇಲಾಕೆಯಲ್ಲಿನ ಆಂತರಿಕ ಸುಧಾರಣೆ-ನನಗನ್ನಿಸಿದ್ದು-ಒಂದು ಮನವಿ
1. ಪದವಿ ಪೂರ್ವ ಶಿಕ್ಷಣ ಇಲಾಕೆಯಲ್ಲಿ ಕೆಲವು ಜನರು ಹತ್ತು ವರ್ಶ ಗಳಿಂದಲೂ ಅವೇ
ಜಿಲ್ಲೆಗಳ ಉಸ್ತುವಾರಿ ವಹಿಸಿ ಕೊಂಡಿದ್ದಾರಲ್ಲ ಯಾಕೆ? ಇಂಟರ್ನಲ್ ಚೇ0ಜಸ್ ಅವರಿಗೆ
ಅನ್ವಯವಾಗುವುದಿಲ್ಲವೇ? ಅವರು ರಿಟೈರ್ ಆಗೋ ವರೆಗೂ ಆ ಜಿಲ್ಲೆಗಳನ್ನು ಸರ್ಕಾರ ಅವರಿಗೇ
ಬಿಟ್ಟುಕೊತ್ತಿದೆಯಾ ? ಇಲಾಕೆಯ ಆಂತರಿಕ ಸುಧಾರಣೆ ಮಾಡೋ ನಿರ್ದೇಶಕರಿಗೆ/ ಇದೆಲ್ಲವೂ
ಕಾಣೋದಿಲ್ಲವೇ?
ಉದಾಹರಣೆಗೆ : ಶ್ರೀ ಪಾಟೀಲರು 2003ರಿಂದ ಇಲ್ಲಿಯವರೆಗೆ ವಿಜಾಪುರ, ಧಾರವಾಡ ಮತ್ತು ಹಾವೇರಿ ಜಿಲ್ಲೆಯಲ್ಲಿ ಇದ್ದಾರಲ್ಲಾ
2. ಪದವಿ ಕಾಲೇಜಿನಿಂದ ವಿಭಜಿತ ಪದವಿ ಪೂರ್ವ ಕಾಲೇಜುಗಳಿಗೆ ಪ್ರಾಂಶುಪಾಲರ ಹುದ್ದೆಯನ್ನೇ ಸರ್ಕಾರ ಮ0ಜುರು ಮಾಡದಿರುವಾಗ ಅಂಥಹಾ ಪದವಿ ಪೂರ್ವ ಕಾಲೇಜಿಗೆ ಪ್ರಭಾರಿ ಪ್ರಾಂಶುಪಾಲರನ್ನು ಸರ್ಕಾರದ ನೀತಿಗೆ ವಿರುದ್ಧವಾಗಿ ಮಾಡುವುದು ಇಲಾಕೆಯ ತಪ್ಪಲ್ಲವೇ? ಇಂತಹಾ ತಪ್ಪನ್ನು ಮಾಡಿಸಿರುವ ವ್ಯಕ್ತಿಯನ್ನು ನೀವು ಇನ್ನೆಷ್ಟು ಕಾಲ ಇಲಾಕೆಯಲ್ಲಿ ಇರಬೇಕು?
3. ಕಾಲ್ಪನಿಕ ವೇತನ ನಿಗದಿ ಆಗಿರುವ ಪ್ರಕರಣಗಳಿಗೆ ಮನಸೋ ಇಚ್ಚೆ ಸೌಲಭ್ಯ ಗಳನ್ನು ನೀಡಿ ಇಲಾಕೆಯ ನಿಯಮಗಳನ್ನೇ ಗಾಳಿಗೆ ತೂರಿರುವ ಅಧಿಕಾರಿಗಳು ಇನ್ನೆಷ್ಟು ಕಾಲ ಅಂತಹಾ ಸ್ಥಳಗಳಲ್ಲಿ ಇರಬೇಕು?
4. ಇಂತಹಾ ನಿಯಮಬಾಹಿರ ಕೆಲಸಗಳನ್ನು ಮಾಡಿಯೂ, ಪ್ರಾಮಾಣಿಕ ರಂತೆ ಸೋಗು ಹಾಕುವ ವ್ಯಕ್ತಿಗಳಿಗೆ ಆಂತರಿಕ ಸುಧಾರಣೆ ಅನ್ವಯವಾಗುವುದಿಲ್ಲವೇ?
ಇಲ್ಲಿ ಉದಾಹರಣೆಯಾಗಿ ಶ್ರೀ ಪಾಟೀಲ ರನ್ನು ನೀಡ ಲಾಗಿದೆಯೇ ಹೊರತು ಅವರೊಬ್ಬರೇ ಇ ಎಲ್ಲಾ ಕೃತ್ಯ ಎಸಗಿದ್ದಾರೆಂದು ಆರೋಪಿಸಿಲ್ಲ . ಇ ತರಹದ ಅಧಿಕಾರಿಗಳು ನಿಮ್ಮ ಇಲಾಕೆಯಲ್ಲಿ ಬಹಳ ಮಂದಿ ಇದ್ದಾರೆ. ತಾವು ಗಮನ ಹರಿಸಬೇಕಷ್ಥೆ ....
ಇಂತಹಾ ಬದಲಾವಣೆಗಳನ್ನು ಮಾಡಿದರೆ ನೀವು ಆಂತರಿಕ ಸುಧಾರಣೆ ಮಾದುತ್ತಿರುವುದು ಸಾರ್ಥಕ ಎನಿಸುತ್ತದೆ. ಇದು ತಮ್ಮಲ್ಲಿ ನನ್ನ ಮನವಿ ಅಷ್ಟೇ...ಅದು ಸಾರ್ವಜನಿಕ ಹಿತದೃಷ್ಟಿಯಿಂದ ....ನೀವು ಕ್ರಮ ತೆಗೆದುಕೊಳ್ಳುವಿರಿ ಎಂಬ ನಂಬಿಕೆಯಿಂದ ....
ಉದಾಹರಣೆಗೆ : ಶ್ರೀ ಪಾಟೀಲರು 2003ರಿಂದ ಇಲ್ಲಿಯವರೆಗೆ ವಿಜಾಪುರ, ಧಾರವಾಡ ಮತ್ತು ಹಾವೇರಿ ಜಿಲ್ಲೆಯಲ್ಲಿ ಇದ್ದಾರಲ್ಲಾ
2. ಪದವಿ ಕಾಲೇಜಿನಿಂದ ವಿಭಜಿತ ಪದವಿ ಪೂರ್ವ ಕಾಲೇಜುಗಳಿಗೆ ಪ್ರಾಂಶುಪಾಲರ ಹುದ್ದೆಯನ್ನೇ ಸರ್ಕಾರ ಮ0ಜುರು ಮಾಡದಿರುವಾಗ ಅಂಥಹಾ ಪದವಿ ಪೂರ್ವ ಕಾಲೇಜಿಗೆ ಪ್ರಭಾರಿ ಪ್ರಾಂಶುಪಾಲರನ್ನು ಸರ್ಕಾರದ ನೀತಿಗೆ ವಿರುದ್ಧವಾಗಿ ಮಾಡುವುದು ಇಲಾಕೆಯ ತಪ್ಪಲ್ಲವೇ? ಇಂತಹಾ ತಪ್ಪನ್ನು ಮಾಡಿಸಿರುವ ವ್ಯಕ್ತಿಯನ್ನು ನೀವು ಇನ್ನೆಷ್ಟು ಕಾಲ ಇಲಾಕೆಯಲ್ಲಿ ಇರಬೇಕು?
3. ಕಾಲ್ಪನಿಕ ವೇತನ ನಿಗದಿ ಆಗಿರುವ ಪ್ರಕರಣಗಳಿಗೆ ಮನಸೋ ಇಚ್ಚೆ ಸೌಲಭ್ಯ ಗಳನ್ನು ನೀಡಿ ಇಲಾಕೆಯ ನಿಯಮಗಳನ್ನೇ ಗಾಳಿಗೆ ತೂರಿರುವ ಅಧಿಕಾರಿಗಳು ಇನ್ನೆಷ್ಟು ಕಾಲ ಅಂತಹಾ ಸ್ಥಳಗಳಲ್ಲಿ ಇರಬೇಕು?
4. ಇಂತಹಾ ನಿಯಮಬಾಹಿರ ಕೆಲಸಗಳನ್ನು ಮಾಡಿಯೂ, ಪ್ರಾಮಾಣಿಕ ರಂತೆ ಸೋಗು ಹಾಕುವ ವ್ಯಕ್ತಿಗಳಿಗೆ ಆಂತರಿಕ ಸುಧಾರಣೆ ಅನ್ವಯವಾಗುವುದಿಲ್ಲವೇ?
ಇಲ್ಲಿ ಉದಾಹರಣೆಯಾಗಿ ಶ್ರೀ ಪಾಟೀಲ ರನ್ನು ನೀಡ ಲಾಗಿದೆಯೇ ಹೊರತು ಅವರೊಬ್ಬರೇ ಇ ಎಲ್ಲಾ ಕೃತ್ಯ ಎಸಗಿದ್ದಾರೆಂದು ಆರೋಪಿಸಿಲ್ಲ . ಇ ತರಹದ ಅಧಿಕಾರಿಗಳು ನಿಮ್ಮ ಇಲಾಕೆಯಲ್ಲಿ ಬಹಳ ಮಂದಿ ಇದ್ದಾರೆ. ತಾವು ಗಮನ ಹರಿಸಬೇಕಷ್ಥೆ ....
ಇಂತಹಾ ಬದಲಾವಣೆಗಳನ್ನು ಮಾಡಿದರೆ ನೀವು ಆಂತರಿಕ ಸುಧಾರಣೆ ಮಾದುತ್ತಿರುವುದು ಸಾರ್ಥಕ ಎನಿಸುತ್ತದೆ. ಇದು ತಮ್ಮಲ್ಲಿ ನನ್ನ ಮನವಿ ಅಷ್ಟೇ...ಅದು ಸಾರ್ವಜನಿಕ ಹಿತದೃಷ್ಟಿಯಿಂದ ....ನೀವು ಕ್ರಮ ತೆಗೆದುಕೊಳ್ಳುವಿರಿ ಎಂಬ ನಂಬಿಕೆಯಿಂದ ....
Monday, June 18, 2012
Reminder-to take action against Udaya bharathi Pre University College, Tiptur and Turuvekere-2
- ¸ÀPÁðgÀ ªÀÄAdÆgÁw ¤ÃrzÀ ¸ÀA¸ÉܬÄAzÀ læ¸ïÖUÉ ¤AiÀĪÀĨÁ»gÀªÁV C£ÀÄzÁ¤vÀ PÁ¯ÉÃdÄUÀ¼À£ÀÄß ªÀUÁðªÀuÉ ªÀiÁrzÀ;
- ¸ÀĪÀiÁgÀÄ d£À £ËPÀgÀgÀ£ÀÄß ¤AiÀĪÀĨÁ»gÀªÁV PÉ®¸À¢AzÀ vÉUÉzÀĺÁQzÀ ¥ÀjuÁªÀĪÁV £ÁåAiÀiÁ®AiÀÄzÀ°è E¯ÁSÉAiÀÄ£ÀÄß ªÀÄÄdÄUÀgÀPÉÌ FqÀĪÀiÁrzÀ;
- PÁAiÀÄðzÀ²ðAiÀÄ PÀÈvÀå¢AzÁV ¥ÀzÀ« ¥ÀǪÀð ²PÀët E¯ÁSÉAiÀÄ£ÀÄß ¸ÀĪÀiÁgÀÄ 50QÌAvÀ®Æ ºÉZÀÄÑ ¥ÀæPÀgÀtUÀ¼À°è ¥ÀæwªÁ¢AiÀÄ£ÁßV ªÀiÁrzÀ;
- £ÁåAiÀiÁ®AiÀÄzÀ°è ¥ÀæPÀgÀtUÀ¼ÀÄ ¨ÁQ EzÀÄÝ, £ÉêÀÄPÁwUÉ vÀqÉAiÀiÁeÉÕ EzÁÝUÀ £ÉêÀÄPÁw ªÀiÁrPÉÆAqÀÄ £ÁåAiÀiÁ®AiÀÄzÀ DzÉñÀ G®èAX¹gÀĪÀ;
- vÀ£Àß PÀÈvÀå¢AzÁV E¯ÁSÉAiÀÄ DAiÀÄÄPÀÛjUÉ CgɸïÖ ªÁgÉAmï eÁjAiÀiÁUÀĪÀAvÉ ªÀiÁrzÀ;
- E¯ÁSÉAiÀÄ ¸ÀàµÀÖ ¤zÉðñÀ£ÀUÀ¼À£ÀÄß G®èAX¹, £ËPÀgÀ «gÉÆÃ¢ü zsÉÆÃgÀuÉ C£ÀĸÀj¸ÀÄwÛgÀĪÀ;
- C£ÀÄzÁ£ÀPÉÌ M¼À¥ÀqÀzÉà EzÀÝgÀÆ E¯ÁSɬÄAzÀ ¸ÀĪÀiÁgÀÄ £Á®ÄÌ d£À £ËPÀgÀgÀÄ ªÉÃvÀ£À ¥ÀqÉAiÀÄĪÀAvÉ ªÀiÁr E¯ÁSÉAiÀÄ£ÀÄß ªÀAa¹gÀĪÀ;
- «zÁåyðUÀ¼À zÁR¯Áw PÀqɪÀÄ EgÀĪÀ;
- ±ÉÃPÀqÁ 50gÀµÀÄÖ ¥Àj²µÀÖ eÁw/ªÀUÀðzÀ «zÁåyðUÀ¼À£ÀÄß ºÉÆAzÀ®Ä C¸ÀªÀÄxÀðªÁVgÀĪÀ;
- C£ÀÄzÁ£ÀPÉÌ M¼À¥ÀlÄÖ ¸ÀĪÀiÁgÀÄ 27 ªÀµÀðUÀ¼ÁVzÀÝgÀÆ ¸ÀéAvÀ PÀlÖqÀ/ªÉÄÊzÁ£À ºÉÆAzÀ¢gÀĪÀ;
- PÀ¤µÀÖ ªÀÄÆ®¨sÀÆvÀ ¸ËPÀAiÀÄðUÀ¼À£ÀÆß ºÉÆA¢gÀzÀ;
- M§â£À zÁR¯É ºÉ¸Àj£À°è ªÀÄvÉÆÛ§â PÉ®¸À ªÀiÁqÀ®Ä CªÀPÁ±À ªÀiÁrPÉÆlÄÖ E¯ÁSÉAiÀÄ£ÀÄß ªÀAa¹gÀĪÀ;
- ªÀÄAdÆgÁzÀ PÉêÀ® MAzÉà ºÀÄzÉÝUÉ E©â§âgÀ£ÀÄß £ÉëĹPÉÆAqÀÄ E¯ÁSÉAiÀÄ£ÀÄß ¸ÀAPÀµÀÖPÉÌ FqÀÄ ªÀiÁrgÀĪÀ;
- E¯ÁSÉ C£ÉÃPÀ CªÀPÁ±ÀUÀ¼À£ÀÄß ¤ÃrzÀgÀÆ vÀ£Àß ªÀvÀð£É/ªÀÄÆ®¨sÀÆvÀ ¸ËPÀAiÀÄðUÀ¼À£ÀÄß GvÀÛªÀÄ¥Àr¹PÉÆ¼ÀîzÀ;
- ¸ÀPÁðgÀPÉÌ/E¯ÁSÉUÉ ¸ÁPÀµÀÄÖ DyðPÀ £ÀµÀÖ GAlĪÀiÁrgÀĪÀ;
- vÀ£Àß ZÀlĪÀnPÉUÀ½AzÁV E¯ÁSÉAiÀÄ C¢üPÁjUÀ½UÉ vÀ¯É£ÉÆÃªÁV ¥Àjt«Ä¹gÀĪÀ ªÀÄvÀÄÛ
- ¸ÀPÁðgÀ¢AzÀ DAiÀÄÄPÀÛjUÉ 7 CgÉ ¸ÀPÁðj ¥ÀvÀæ §gÀĪÀAvÉ ªÀiÁrgÀĪÀ
GzÀAiÀĨsÁgÀw
¥ÀzÀ« ¥ÀǪÀð PÁ¯ÉÃdÄ, w¥ÀlÆgÀÄ ªÀÄvÀÄÛ vÀÄgÀĪÉÃPÉgÉ F PÁ¯ÉÃdÄUÀ¼À ªÀiÁ£ÀåvÉ/ ªÀÄAdÆgÁw
gÀzÀÄÝ ªÀiÁr ªÉÃvÀ£Á£ÀÄzÁ£À ¤°è¸À®Ä E¯ÁSɬÄAzÀ DUÀĪÀÅ¢®èªÉÃ?
Sunday, June 17, 2012
ವಿದ್ಯಾರ್ಥಿಗಳಿಗೆ ಜೆರಾಕ್ಸ್ ಪ್ರತಿಯೇ ಪಠ್ಯಪುಸ್ತಕ!- ಪ್ರಜಾವಾಣಿ ವಾರ್ತೆ
ಚಾಮರಾಜನಗರ: ಪಠ್ಯಪುಸ್ತಕ ಹಾಗೂ ಶಿಕ್ಷಕರ ಕೊರತೆಯಿಂದ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ
ತಮಿಳುನಾಡಿನ ತಾಳವಾಡಿ ಫಿರ್ಕಾದ ಕನ್ನಡ ಮಾಧ್ಯಮ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು
ಸಂಕಷ್ಟ ಅನುಭವಿಸುವಂತಾಗಿದೆ.
ತಾಳವಾಡಿ ಫಿರ್ಕಾದಲ್ಲಿ ಕನ್ನಡ ಭಾಷಿಕರು ಹೆಚ್ಚಿದ್ದಾರೆ. ಈ ಪ್ರದೇಶದಲ್ಲಿ ಕನ್ನಡ ಮಾಧ್ಯಮದ 28 ಸರ್ಕಾರಿ ಪ್ರಾಥಮಿಕ ಶಾಲೆ, 9 ಮಾಧ್ಯಮಿಕ ಶಾಲೆ, 3 ಪ್ರೌಢಶಾಲೆ ಹಾಗೂ 2 ಪದವಿಪೂರ್ವ ಕಾಲೇಜು ಇವೆ. ಸುಮಾರು 1,700ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಡಿ ಇಲ್ಲಿಯವರೆಗೂ ಪಠ್ಯಪುಸ್ತಕ ಪೂರೈಕೆಯಾಗಿಲ್ಲ.
ತಮಿಳುನಾಡು ಸರ್ಕಾರವೇ ಕನ್ನಡ ಮಾಧ್ಯಮ ಶಾಲೆ, ಕಾಲೇಜುಗಳಿಗೆ ಪಠ್ಯಪುಸ್ತಕ ಪೂರೈಸಬೇಕಿದೆ. ಆದರೆ, ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೆ ಮಾತ್ರ ಪುಸ್ತಕ ಸರಬರಾಜು ಮಾಡಲಾಗಿದೆ.
`2011-12ನೇ ಶೈಕ್ಷಣಿಕ ಸಾಲಿನಡಿಯೂ 1ರಿಂದ 10ನೇ ತರಗತಿ ಮಕ್ಕಳಿಗೆ ನಿಗದಿತ ಅವಧಿಯಲ್ಲಿ ಪಠ್ಯಪುಸ್ತಕ ಪೂರೈಕೆಯಾಗಿರಲಿಲ್ಲ. ಅರ್ಧದಷ್ಟು ಮಕ್ಕಳಿಗೆ ಮಾತ್ರ ಪಠ್ಯಪುಸ್ತಕ ನೀಡಲಾಗಿತ್ತು. ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವೇ ಸರಬರಾಜಾಗಿಲ್ಲ.
ತಮಿಳು ಭಾಷೆಯಲ್ಲಿರುವ ಪಾಠಗಳನ್ನು ಉಪನ್ಯಾಸಕರು ಕನ್ನಡಕ್ಕೆ ಭಾಷಾಂತರಿಸಿದ್ದರು. ವಿದ್ಯಾರ್ಥಿಗಳಿಗೆ ಭಾಷಾಂತರಿಸಿದ ಜೆರಾಕ್ಸ್ ಪ್ರತಿ ನೀಡಿದ್ದರು. ಈ ಬಾರಿಯೂ ಪಠ್ಯಪುಸ್ತಕ ಪೂರೈಕೆಯಾಗಿಲ್ಲ. ಹೀಗಾಗಿ, ಹಳೆಯ ಜೆರಾಕ್ಸ್ ಪ್ರತಿಗಳನ್ನೇ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ` ಎಂದು ತಮಿಳುನಾಡು ಪ್ರಾಥಮಿಕ ಶಿಕ್ಷಕರ ಸಂಘದ ತಾಳವಾಡಿ ಘಟಕದ ಕಾರ್ಯದರ್ಶಿ ಚನ್ನಂಜಮೂರ್ತಿ `ಪ್ರಜಾವಾಣಿ`ಗೆ ತಿಳಿಸಿದರು.
ಶಿಕ್ಷಕರ ಕೊರತೆ: ತಾಳವಾಡಿ ಫಿರ್ಕಾದ ಎಲ್ಲ ಮಾಧ್ಯಮಿಕ ಶಾಲೆಗಳು ಉನ್ನತೀಕರಣಗೊಂಡ ಶಾಲೆಗಳಾಗಿವೆ. ಸರ್ವಶಿಕ್ಷಣ ಅಭಿಯಾನದ ಮಾನದಂಡದ ಅನ್ವಯ ಈ ಶಾಲೆಗಳಿಗೆ ಪದವೀಧರ ಸಹ ಶಿಕ್ಷಕರನ್ನು ನೇಮಿಸಬೇಕು. ಆದರೆ, 9 ವರ್ಷದಿಂದಲೂ ಮಾಧ್ಯಮಿಕ ಹಾಗೂ ಪ್ರೌಢಶಾಲೆಯಲ್ಲಿ ಖಾಲಿ ಇರುವ 17 ಸಹ ಶಿಕ್ಷಕರ ಹುದ್ದೆಗಳ ಭರ್ತಿಗೆ ತಮಿಳುನಾಡು ಸರ್ಕಾರ ಮುಂದಾಗಿಲ್ಲ. ಶಾಲೆಗಳಿಗೆ ಭೇಟಿ ನೀಡುವ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಪೋಷಕರು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
2011-12ನೇ ಸಾಲಿನಡಿ ತಿಗಣಾರೆ ಗ್ರಾಮದಲ್ಲಿದ್ದ ಕನ್ನಡ ಮಾಧ್ಯಮಿಕ ಶಾಲೆಯನ್ನು ಪ್ರೌಢಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಒಂದು ವರ್ಷ ಉರುಳಿದರೂ ಅಗತ್ಯ ಶಿಕ್ಷಕರನ್ನು ನೇಮಿಸಿಲ್ಲ.
ಚಿಕ್ಕಹಳ್ಳಿ, ತಾಳವಾಡಿಯ ಪ್ರೌಢಶಾಲೆಯಲ್ಲೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ. ಹಾಲಿ ಕರ್ತವ್ಯದಲ್ಲಿರುವ ಶಿಕ್ಷಕರನ್ನೇ ನಿಯೋಜನೆ ಮೇರೆಗೆ ನೇಮಿಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಾರೆ.
`ತಾಳವಾಡಿಯಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಪದವಿಪೂರ್ವ ಕಾಲೇಜು ಇದೆ. ಆದರೆ, ಏಳು ವರ್ಷದಿಂದಲೂ ಕನ್ನಡ ಭಾಷಾ ಉಪನ್ಯಾಸಕರ ಹುದ್ದೆ ಖಾಲಿ ಇದೆ. ಈ ಭಾಗದಲ್ಲಿ ಪ್ರಥಮ ದರ್ಜೆ ಕಾಲೇಜು ತೆರೆದಿಲ್ಲ. ಹೀಗಾಗಿ, ಕನ್ನಡ ಮಾಧ್ಯಮದ ಮಕ್ಕಳ ಶೈಕ್ಷಣಿಕ ಬದುಕು ಪದವಿಪೂರ್ವ ಶಿಕ್ಷಣಕ್ಕೆ ಮೊಟಕುಗೊಳ್ಳುತ್ತಿದೆ.
ಈ ಸಂಕಷ್ಟ ಅರಿತಿರುವ ಪೋಷಕರು ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ತಮಿಳು ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
ಇದರ ಪರಿಣಾಮ ಭವಿಷ್ಯದಲ್ಲಿ ಕನ್ನಡ ಶಾಲೆಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಲಿವೆ` ಎಂದು ಚನ್ನಂಜಮೂರ್ತಿ ಆತಂಕ ವ್ಯಕ್ತಪಡಿಸಿದರು.
ತಾಳವಾಡಿ ಫಿರ್ಕಾದಲ್ಲಿ ಕನ್ನಡ ಭಾಷಿಕರು ಹೆಚ್ಚಿದ್ದಾರೆ. ಈ ಪ್ರದೇಶದಲ್ಲಿ ಕನ್ನಡ ಮಾಧ್ಯಮದ 28 ಸರ್ಕಾರಿ ಪ್ರಾಥಮಿಕ ಶಾಲೆ, 9 ಮಾಧ್ಯಮಿಕ ಶಾಲೆ, 3 ಪ್ರೌಢಶಾಲೆ ಹಾಗೂ 2 ಪದವಿಪೂರ್ವ ಕಾಲೇಜು ಇವೆ. ಸುಮಾರು 1,700ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಡಿ ಇಲ್ಲಿಯವರೆಗೂ ಪಠ್ಯಪುಸ್ತಕ ಪೂರೈಕೆಯಾಗಿಲ್ಲ.
ತಮಿಳುನಾಡು ಸರ್ಕಾರವೇ ಕನ್ನಡ ಮಾಧ್ಯಮ ಶಾಲೆ, ಕಾಲೇಜುಗಳಿಗೆ ಪಠ್ಯಪುಸ್ತಕ ಪೂರೈಸಬೇಕಿದೆ. ಆದರೆ, ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೆ ಮಾತ್ರ ಪುಸ್ತಕ ಸರಬರಾಜು ಮಾಡಲಾಗಿದೆ.
`2011-12ನೇ ಶೈಕ್ಷಣಿಕ ಸಾಲಿನಡಿಯೂ 1ರಿಂದ 10ನೇ ತರಗತಿ ಮಕ್ಕಳಿಗೆ ನಿಗದಿತ ಅವಧಿಯಲ್ಲಿ ಪಠ್ಯಪುಸ್ತಕ ಪೂರೈಕೆಯಾಗಿರಲಿಲ್ಲ. ಅರ್ಧದಷ್ಟು ಮಕ್ಕಳಿಗೆ ಮಾತ್ರ ಪಠ್ಯಪುಸ್ತಕ ನೀಡಲಾಗಿತ್ತು. ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವೇ ಸರಬರಾಜಾಗಿಲ್ಲ.
ತಮಿಳು ಭಾಷೆಯಲ್ಲಿರುವ ಪಾಠಗಳನ್ನು ಉಪನ್ಯಾಸಕರು ಕನ್ನಡಕ್ಕೆ ಭಾಷಾಂತರಿಸಿದ್ದರು. ವಿದ್ಯಾರ್ಥಿಗಳಿಗೆ ಭಾಷಾಂತರಿಸಿದ ಜೆರಾಕ್ಸ್ ಪ್ರತಿ ನೀಡಿದ್ದರು. ಈ ಬಾರಿಯೂ ಪಠ್ಯಪುಸ್ತಕ ಪೂರೈಕೆಯಾಗಿಲ್ಲ. ಹೀಗಾಗಿ, ಹಳೆಯ ಜೆರಾಕ್ಸ್ ಪ್ರತಿಗಳನ್ನೇ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ` ಎಂದು ತಮಿಳುನಾಡು ಪ್ರಾಥಮಿಕ ಶಿಕ್ಷಕರ ಸಂಘದ ತಾಳವಾಡಿ ಘಟಕದ ಕಾರ್ಯದರ್ಶಿ ಚನ್ನಂಜಮೂರ್ತಿ `ಪ್ರಜಾವಾಣಿ`ಗೆ ತಿಳಿಸಿದರು.
ಶಿಕ್ಷಕರ ಕೊರತೆ: ತಾಳವಾಡಿ ಫಿರ್ಕಾದ ಎಲ್ಲ ಮಾಧ್ಯಮಿಕ ಶಾಲೆಗಳು ಉನ್ನತೀಕರಣಗೊಂಡ ಶಾಲೆಗಳಾಗಿವೆ. ಸರ್ವಶಿಕ್ಷಣ ಅಭಿಯಾನದ ಮಾನದಂಡದ ಅನ್ವಯ ಈ ಶಾಲೆಗಳಿಗೆ ಪದವೀಧರ ಸಹ ಶಿಕ್ಷಕರನ್ನು ನೇಮಿಸಬೇಕು. ಆದರೆ, 9 ವರ್ಷದಿಂದಲೂ ಮಾಧ್ಯಮಿಕ ಹಾಗೂ ಪ್ರೌಢಶಾಲೆಯಲ್ಲಿ ಖಾಲಿ ಇರುವ 17 ಸಹ ಶಿಕ್ಷಕರ ಹುದ್ದೆಗಳ ಭರ್ತಿಗೆ ತಮಿಳುನಾಡು ಸರ್ಕಾರ ಮುಂದಾಗಿಲ್ಲ. ಶಾಲೆಗಳಿಗೆ ಭೇಟಿ ನೀಡುವ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಪೋಷಕರು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
2011-12ನೇ ಸಾಲಿನಡಿ ತಿಗಣಾರೆ ಗ್ರಾಮದಲ್ಲಿದ್ದ ಕನ್ನಡ ಮಾಧ್ಯಮಿಕ ಶಾಲೆಯನ್ನು ಪ್ರೌಢಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಒಂದು ವರ್ಷ ಉರುಳಿದರೂ ಅಗತ್ಯ ಶಿಕ್ಷಕರನ್ನು ನೇಮಿಸಿಲ್ಲ.
ಚಿಕ್ಕಹಳ್ಳಿ, ತಾಳವಾಡಿಯ ಪ್ರೌಢಶಾಲೆಯಲ್ಲೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ. ಹಾಲಿ ಕರ್ತವ್ಯದಲ್ಲಿರುವ ಶಿಕ್ಷಕರನ್ನೇ ನಿಯೋಜನೆ ಮೇರೆಗೆ ನೇಮಿಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಾರೆ.
`ತಾಳವಾಡಿಯಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಪದವಿಪೂರ್ವ ಕಾಲೇಜು ಇದೆ. ಆದರೆ, ಏಳು ವರ್ಷದಿಂದಲೂ ಕನ್ನಡ ಭಾಷಾ ಉಪನ್ಯಾಸಕರ ಹುದ್ದೆ ಖಾಲಿ ಇದೆ. ಈ ಭಾಗದಲ್ಲಿ ಪ್ರಥಮ ದರ್ಜೆ ಕಾಲೇಜು ತೆರೆದಿಲ್ಲ. ಹೀಗಾಗಿ, ಕನ್ನಡ ಮಾಧ್ಯಮದ ಮಕ್ಕಳ ಶೈಕ್ಷಣಿಕ ಬದುಕು ಪದವಿಪೂರ್ವ ಶಿಕ್ಷಣಕ್ಕೆ ಮೊಟಕುಗೊಳ್ಳುತ್ತಿದೆ.
ಈ ಸಂಕಷ್ಟ ಅರಿತಿರುವ ಪೋಷಕರು ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ತಮಿಳು ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
ಇದರ ಪರಿಣಾಮ ಭವಿಷ್ಯದಲ್ಲಿ ಕನ್ನಡ ಶಾಲೆಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಲಿವೆ` ಎಂದು ಚನ್ನಂಜಮೂರ್ತಿ ಆತಂಕ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಜೆರಾಕ್ಸ್ ಪ್ರತಿಯೇ ಪಠ್ಯಪುಸ್ತಕ!- ಪ್ರಜಾವಾಣಿ ವಾರ್ತೆ
ಉಪನ್ಯಾಸಕರು, ಪ್ರಯೋಗಾಲಯ ಕೊಡಿ ಪ್ರಜಾವಾಣಿ ವಾರ್ತೆ
ತುಮಕೂರು: ಜಿಲ್ಲಾ ಕೇಂದ್ರದಲ್ಲಿರುವ ಎರಡು ಪ್ರಮುಖ ಸರ್ಕಾರಿ ಪಿಯುಸಿ ಕಾಲೇಜುಗಳು ಮೂಲ
ಸೌಕರ್ಯಗಳ ಕೊರತೆಯಿಂದ ನರಳುತ್ತಿವೆ. ಗ್ರಾಮೀಣ ಭಾಗದಿಂದ ಬರುವ ಬಡ ಮತ್ತು ಮಧ್ಯಮ ವರ್ಗದ
ವಿದ್ಯಾರ್ಥಿಗಳೇ ಹೆಚ್ಚಾಗಿರುವ ಈ ಕಾಲೇಜುಗಳ ಫಲಿತಾಂಶ ಗಮನಾರ್ಹ ಪ್ರಮಾಣ ದಲ್ಲಿ
ಸುಧಾರಿಸಿದೆ. ಆದರೆ ಕಲಿಕೆಯ ವಾತಾವರಣ ನಿರ್ಮಿಸಲು ಸಾಧ್ಯವಾಗಿಲ್ಲ.
ಪ್ರಯೋಗಾಲಯವೇ ಇಲ್ಲ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯೊಬ್ಬನಿಗೆ ಈ ಬಾರಿ ಸಿಇಟಿಯಲ್ಲಿ ಅತ್ಯುತ್ತಮ ಅಂಕ ಸಿಕ್ಕಿತ್ತು. ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಅಧ್ಯಯನಕ್ಕೆ ಸೀಟು ದಕ್ಕಿಸಿ ಕೊಂಡ ಬಡ ವಿದ್ಯಾರ್ಥಿಗೆ ಆಸರೆಯಾಗಿ ಉಪನ್ಯಾಸಕ ರೇ ನಿಂತುಕೊಂಡರು.
ಗೆಲುವಿನ ನಗೆ ಬೀರಿದ ಪ್ರತಿಭಾವಂತನ ಮನದಲ್ಲಿ ಇದ್ದುದು ಒಂದೇ ಕೊರಗು. `ನಾನು ಓದಿದ ಕಾಲೇಜಲ್ಲಿ ಸುಸಜ್ಜಿತ ಪ್ರಯೋಗಾಲಯ ಇದ್ದಿದ್ದರೆ, ನನ್ನ ಸಾಧನೆ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಖಾಸಗಿ ಕಾಲೇಜುಗಳಿಗಿಂತ ಪಾಠ ಪ್ರವಚನದಲ್ಲಿ ಕಾಲೇಜು ಕಡಿಮೆಯಿಲ್ಲ. ಆದರೆ ಕನಿಷ್ಠ ಒಂದು ಪ್ರಯೋಗಾಲಯ ನಿರ್ಮಿಸಿಕೊಡಲು ಸರ್ಕಾರಕ್ಕೆ ಸಾಧ್ಯವಿಲ್ಲವೇ?` ಈ ಪ್ರಶ್ನೆಗೆ ಉತ್ತರ ಹೇಳುವಷ್ಟು ಛಾತಿ ಉಪನ್ಯಾಸಕರಿಗೆ ಇರಲಿಲ್ಲ.
ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿ ಗಳು ಓದುತ್ತಾರೆ. 10ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆದವರು ಹಾಗೂ ವಿಜ್ಞಾನ ವಿಭಾಗಕ್ಕೆ ಸೇರಲು ಉತ್ಸುಕರಾಗಿರುವ ವಿದ್ಯಾರ್ಥಿಗಳನ್ನು ಉಪನ್ಯಾಸಕರೇ ಸಂದರ್ಶಿಸಿ ದಾಖಲಿಸಿಕೊಳ್ಳುತ್ತಾರೆ.
ತಿಂಗಳಿಗೊಂದು ತರಗತಿ ಮಟ್ಟದ ಪರೀಕ್ಷೆ, ಅಗತ್ಯವಿರುವಾಗ ಪೋಷಕರ ಸಭೆ ನಡೆಸುತ್ತಾರೆ. ಮಠದಲ್ಲಿ ಆಶ್ರಯ ಪಡೆದಿರುವ ವಿದ್ಯಾರ್ಥಿಗಳನ್ನು ಗಮನಿಸಲು ಪ್ರತ್ಯೇಕ ಉಪನ್ಯಾಸಕರ ತಂಡ ಮಾಡಲಾಗಿದೆ. ಹೆಣ್ಣು ಮಕ್ಕಳ ಪ್ರಗತಿ ಪರಿಶೀಲಿಸಲು ಮಹಿಳಾ ಉಪನ್ಯಾಸಕಿಯರ ತಂಡ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಉಪನ್ಯಾಸಕರ ವಲಯದಿಂದ ಇಷ್ಟೆಲ್ಲಾ ಉತ್ಸಾಹವಿದ್ದರೂ ಸರ್ಕಾರದಿಂದ ಸೂಕ್ತ ಸ್ಪಂದನೆ, ಜತೆಗೆ ಸೌಲಭ್ಯ ದೊರೆತಿಲ್ಲ.
ಪ್ರೌಢಶಾಲೆಯ ಪ್ರಯೋಗಾಲಯದಲ್ಲೇ ಪಿಯುಸಿ ವಿದ್ಯಾರ್ಥಿಗಳೂ ಪ್ರಯೋಗ ನಡೆಸುತ್ತಾರೆ. ಸಲಕರಣೆಗಳ ಕೊರತೆ ಮತ್ತು ಕಳಪೆ ಸಾಮಗ್ರಿ ಯಿಂದಾಗಿ ಆಧುನಿಕ ಪಠ್ಯಕ್ರಮದ ಪ್ರಯೋಗ ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಪ್ರಯೋಗಾಲಯದಲ್ಲಿ ಮಾಡಿದ ಪ್ರಯೋಗಗಳ ಥಿಯರಿ ಬರೆಯುವ ಕೆಲವು ಪ್ರಶ್ನೆಗಳೂ ಪರೀಕ್ಷೆಯಲ್ಲಿರುತ್ತವೆ. ಸೂಕ್ತ ಪ್ರಯೋಗಾಲಯ ಇಲ್ಲದೆ ಮುಖ್ಯ ಪರೀಕ್ಷೆಯಲ್ಲಿ ಈ ಅಂಕಗಳನ್ನೂ ವಿದ್ಯಾರ್ಥಿ ಕಳೆದುಕೊಳ್ಳಬೇಕಾಗುತ್ತದೆ.
ಒಂದೇ ಕೊಠಡಿಯಲ್ಲಿ ಮೂವರು ಉಪನ್ಯಾಸಕರು ಏಕಕಾಲಕ್ಕೆ ಪ್ರಯೋಗಾಲಯ ತರಗತಿ ತೆಗೆದು ಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಯಾರು ಯಾವ ಪಾಠ ಹೇಳುತ್ತಿದ್ದಾರೆ ಎಂಬುದೇ ತಿಳಿಯದೆ, ಕಬ್ಬಿಣದ ಕಡಲೆಯಾಗಿರುವ ವಿಜ್ಞಾನ ಇನ್ನಷ್ಟು ಕಠಿಣ ಎನಿಸುತ್ತದೆ.
ವಾಣಿಜ್ಯ ವಿಭಾಗದಲ್ಲಿ ಇಬ್ಬರು ಉಪನ್ಯಾಸಕರು ಇದ್ದಾರೆ. ಸುಮಾರು 250 ವಿದ್ಯಾರ್ಥಿಗಳಿದ್ದಾರೆ. `ಉಪನ್ಯಾಸಕರಿಗೆ ಹಾಜರಾತಿ ಹಾಕಲು ಅರ್ಧಗಂಟೆ ಬೇಕು. ಇನ್ನು ಪಾಠ ಮಾಡುವುದು, ವಿದ್ಯಾರ್ಥಿ ಗಳನ್ನು ಗಮನಿಸಿಕೊಳ್ಳುವುದು ಹೇಗೆ? ಕೊನೆಯ ಸಾಲಿನಲ್ಲಿ ಕುಳಿತ ವಿದ್ಯಾರ್ಥಿಗೆ ಉಪನ್ಯಾಸಕರು ಹೇಳುವ ಪಾಠವೇ ಕೇಳುವುದಿಲ್ಲ. ತರಗತಿಗಳಿಗೆ ಮೈಕ್ ಅಳವಡಿಸಬೇಕು` ಎನ್ನುತ್ತಾರೆ ಪೋಷಕ ಕೃಷ್ಣಪ್ಪ.
ನಗರ ಕ್ಷೇತ್ರದ ಶಾಸಕ ಎಸ್.ಶಿವಣ್ಣ, ಸಿದ್ದಗಂಗಾ ಮಠದ ಶಿವಕುಮಾರಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಇದೇ ಕಾಲೇಜಿನಲ್ಲಿ ಕಲಿತವರು. ಈ ಕಾಲೇಜಿ ನಲ್ಲಿ ಓದಿದ ಎಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಆದರೆ ಯಾರೂ ಕಾಲೇಜಿನ ಪ್ರಸ್ತುತ ದುಸ್ಥಿತಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಜನ ಪ್ರತಿನಿಧಿಗಳು, ಪಿಯುಸಿ ಮಂಡಳಿಯ ಅಧಿಕಾರಿ ಗಳನ್ನು ಭೇಟಿ ಮಾಡಿರುವ ಕಾಲೇಜು ಸಿಬ್ಬಂದಿ ಸಮಸ್ಯೆ ಮನಗಾಣಿಸಲು ಯತ್ನಿಸಿದ್ದಾರೆ. ಬೆಂಗಳೂ ರಿನ ಹಿರಿಯ ಅಧಿಕಾರಿಗಳನ್ನು ಮುಖತಃ ಕಂಡು ಮನವರಿಕೆ ಮಾಡಿಕೊಟ್ಟರೂ ಸಮಸ್ಯೆ ಪರಿಹಾರ ವಾಗಿಲ್ಲ ಎಂದು ಖೇದ ವ್ಯಕ್ತಪಡಿಸುತ್ತಾರೆ.
ಒಂದೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುವ ಕಾಲೇಜಿನಲ್ಲಿ ಕೊಠಡಿಗಳ ಕೊರತೆಯೂ ಇದೆ. ಕನಿಷ್ಠ 6 ಕೊಠಡಿಗಳನ್ನು ಅಗತ್ಯವಿದೆ. ಇದರ ಜೊತೆಗೆ ಕಾಂಪೌಂಡ್ ಸಮಸ್ಯೆಯಿಂದಲೂ ಕಾಲೇಜು ಹೈರಾಣಾಗಿದೆ.
ಕಾಲೇಜು ಆವರಣದಲ್ಲಿ ಹೊಸದಾಗಿ ಕಾರು ಕಲಿಯುವವರ ಪಾಲಿಗೆ `ಪ್ರಾಕ್ಟೀಸ್ ಗ್ರೌಂಡ್`. ಕಾಂಪೌಂಡ್, ಗೇಟ್ ಇಲ್ಲದಿರುವುದರಿಂದ ಕಳ್ಳ ಕಾಕರಿಗೆ ಕಾಲೇಜು ಮುಕ್ತ ಪ್ರವೇಶ ಕಲ್ಪಿಸಿದೆ. ಒಂದೇ ವರ್ಷದಲ್ಲಿ ಕಾಲೇಜಿನ ಹಿಂದಿನಿಂದ ಪ್ರವೇಶಿಸಿದ ದುಷ್ಕರ್ಮಿಗಳು ಡೆಸ್ಕ್ ಸೇರಿದಂತೆ ಹಲವು ಬೋಧನೋಪಕರಣಗಳನ್ನು ಹೊತ್ತೊಯ್ದಿದ್ದಾರೆ.
ರೈಲ್ವೆ ನಿಲ್ದಾಣ ಸಮೀಪ ಕಾಲೇಜು ಮೈದಾನ ಅತಿಕ್ರಮಿಸುವ ಯತ್ನವನ್ನು ನಗರದ ಪ್ರತಿಷ್ಠಿತ ವ್ಯಕ್ತಿ ಯೊಬ್ಬರು ನಡೆಸಿದ್ದಾರೆ. ಅಲೆಮಾರಿಗಳ ಗುಡಿಸಲು ಗಳೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಹಾಡಹಗಲೇ ಕಾಲೇಜು ಆವರಣದಲ್ಲಿ ಸಾರ್ವಜನಿಕರು ಕ್ರಿಕೆಟ್ ಆಡುತ್ತಾರೆ. ಕೇಳುವ ಉಪನ್ಯಾಸಕರೊಂದಿಗೆ ವಾಗ್ವಾದ ನಡೆಸುತ್ತಾರೆ.
ಪ್ರಯೋಗಾಲಯ ಸಹಾಯಕರು, ಭದ್ರತಾ ಸಿಬ್ಬಂದಿ ಮತ್ತು `ಡಿ` ಗ್ರೂಪ್ ನೌಕರರನ್ನು ಕೇಳು ವಂತೆಯೇ ಇಲ್ಲ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿ ರುವ ವಾಣಿಜ್ಯ ವಿಭಾಗಕ್ಕೆ ಇಬ್ಬರು ಉಪನ್ಯಾಸಕರು ತುರ್ತಾಗಿ ನೇಮಕವಾಗಬೇಕಿದೆ. ಸಿಬ್ಬಂದಿ ಕೊರತೆ ತುಂಬಿಕೊಳ್ಳಲು ಕೆಲವರನ್ನು ಹಂಗಾಮಿಯಾಗಿ ನೇಮಿಸಿಕೊಳ್ಳಲಾಗಿದೆ.
ಕುಡಿಯುವ ನೀರೂ ಇಲ್ಲಿಲ್ಲ: ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇರುವ ಪ್ರತಿಷ್ಠಿತ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಕಟ್ಟಡ ಕೊರತೆ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದೆ.
ಪಿಯುಸಿಯಲ್ಲಿ ದಿನಕ್ಕೆ ಒಂದು 1 ಗಂಟೆಯ 6 ಪಿರಿಯಡ್ ನಡೆಯಬೇಕು. ಆದರೆ ಇಲ್ಲಿ 50 ನಿಮಿಷದ 5 ಪಿರಿಯಡ್ ನಡೆಯುತ್ತವೆ. ಮುಂಜಾನೆ 8ರಿಂದ 11.20ರ ವರೆಗೆ ಪದವಿ ಪೂರ್ವ ಕಾಲೇಜು ನಡೆಯುವ ಕೊಠಡಿಗಳಲ್ಲೇ ನಂತರ ಪ್ರೌಢಶಾಲೆಯ ತರಗತಿಗಳು ನಡೆಯಬೇಕು. ಹೀಗಾಗಿ ಹೆಚ್ಚುವರಿ ತರಗತಿಗಳನ್ನು ನಡೆಸುವ ಉತ್ಸಾಹ ಇದ್ದರೂ ಉಪನ್ಯಾಸಕರು ಅಸಹಾಯಕರಾಗಿ ಮಕ್ಕಳನ್ನು ಮನೆಗೆ ಕಳುಹಿಸಬೇಕು. ಇಲ್ಲವೇ ಹೊರಗೆ ಮರದ ಕೆಳಗೆ ತರಗತಿ ನಡೆಸಬೇಕಾಗಿದೆ.
ಕಾಲೇಜಿನ ಸನಿಹದಲ್ಲಿಯೇ ನಗರಸಭೆ ಇದೆ. ನಗರಸಭೆ ಆವರಣದಲ್ಲಿಯೇ ಅತಿದೊಡ್ಡ ನೆಲಮಟ್ಟದ ನೀರಿನ ತೊಟ್ಟಿ ಇದ್ದರೂ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಕಾಲೇಜಿನ ಹೆಣ್ಣು ಮಕ್ಕಳು ಕುಡಿಯಲು ಹಾಗೂ ಶೌಚಾಲಯಕ್ಕೆ ನೀರಿಲ್ಲದೆ ಪರದಾಡುತ್ತಾರೆ. ಕಾರಣ ಕೇಳಿದರೆ `ಬಿ.ಎಚ್.ರಸ್ತೆ ಅಗೆದು ಪೈಪ್ಲೈನ್ ಹಾಕಲು ಸಾಧ್ಯವಿಲ್ಲ. ಹೆದ್ದಾರಿ ಪ್ರಾಧಿಕಾರ ಅಡ್ಡಿಯುಂಟು ಮಾಡುತ್ತದೆ` ಎಂದು ನಗರಸಭೆ ಸಿಬ್ಬಂದಿ ನೆಪ ಹೇಳುತ್ತಾರೆ.
ಜಿಲ್ಲಾಧಿಕಾರಿ ಮುತುವರ್ಜಿಯಿಂದ ಕಾಲೇಜಿನಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಯಲ್ಲಿ ನೀರು ಸಂಪೂರ್ಣ ಕಡಿಮೆಯಾಗಿದೆ. 2000 ಹೆಣ್ಣು ಮಕ್ಕಳ ಅಗತ್ಯ ಪೂರೈಸುವಷ್ಟೂ ನೀರು ಶೌಚಾಲಯದಲ್ಲಿಲ್ಲ. ಇನ್ನೊಬ್ಬರಿಗೆ ಹೇಳಲೂ ಸಾಧ್ಯವಿಲ್ಲದ ತಮ್ಮ ಸಂಕಟವನ್ನು ಹೆಣ್ಣು ಮಕ್ಕಳು ಅವುಡುಕಚ್ಚಿ ಸಹಿಸಬೇಕಾದ ದುಃಸ್ಥಿತಿ ಎದುರಿಸುತ್ತಿದ್ದಾರೆ.
`ಖಾಸಗಿ ಕಾಲೇಜುಗಳ ಲಾಬಿಗೆ ಮಣಿದಿರುವ ಜನ ಪ್ರತಿನಿಧಿಗಳು ಉದ್ದೇಶಪೂರ್ವಕವಾಗಿಯೇ ಸರ್ಕಾರಿ ಕಾಲೇಜುಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿಯೇ ಈ ಕಾಲೇಜಿನ ಬಗ್ಗೆ ಒಮ್ಮೆಯಾದರೂ ನಗರಸಭೆ, ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಚರ್ಚೆಯಾಗುವು ದಿಲ್ಲ` ಎಂದು ಪೋಷಕ ರಾಮಚಂದ್ರ ದೂರುತ್ತಾರೆ
ಪ್ರಯೋಗಾಲಯವೇ ಇಲ್ಲ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯೊಬ್ಬನಿಗೆ ಈ ಬಾರಿ ಸಿಇಟಿಯಲ್ಲಿ ಅತ್ಯುತ್ತಮ ಅಂಕ ಸಿಕ್ಕಿತ್ತು. ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಅಧ್ಯಯನಕ್ಕೆ ಸೀಟು ದಕ್ಕಿಸಿ ಕೊಂಡ ಬಡ ವಿದ್ಯಾರ್ಥಿಗೆ ಆಸರೆಯಾಗಿ ಉಪನ್ಯಾಸಕ ರೇ ನಿಂತುಕೊಂಡರು.
ಗೆಲುವಿನ ನಗೆ ಬೀರಿದ ಪ್ರತಿಭಾವಂತನ ಮನದಲ್ಲಿ ಇದ್ದುದು ಒಂದೇ ಕೊರಗು. `ನಾನು ಓದಿದ ಕಾಲೇಜಲ್ಲಿ ಸುಸಜ್ಜಿತ ಪ್ರಯೋಗಾಲಯ ಇದ್ದಿದ್ದರೆ, ನನ್ನ ಸಾಧನೆ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಖಾಸಗಿ ಕಾಲೇಜುಗಳಿಗಿಂತ ಪಾಠ ಪ್ರವಚನದಲ್ಲಿ ಕಾಲೇಜು ಕಡಿಮೆಯಿಲ್ಲ. ಆದರೆ ಕನಿಷ್ಠ ಒಂದು ಪ್ರಯೋಗಾಲಯ ನಿರ್ಮಿಸಿಕೊಡಲು ಸರ್ಕಾರಕ್ಕೆ ಸಾಧ್ಯವಿಲ್ಲವೇ?` ಈ ಪ್ರಶ್ನೆಗೆ ಉತ್ತರ ಹೇಳುವಷ್ಟು ಛಾತಿ ಉಪನ್ಯಾಸಕರಿಗೆ ಇರಲಿಲ್ಲ.
ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿ ಗಳು ಓದುತ್ತಾರೆ. 10ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆದವರು ಹಾಗೂ ವಿಜ್ಞಾನ ವಿಭಾಗಕ್ಕೆ ಸೇರಲು ಉತ್ಸುಕರಾಗಿರುವ ವಿದ್ಯಾರ್ಥಿಗಳನ್ನು ಉಪನ್ಯಾಸಕರೇ ಸಂದರ್ಶಿಸಿ ದಾಖಲಿಸಿಕೊಳ್ಳುತ್ತಾರೆ.
ತಿಂಗಳಿಗೊಂದು ತರಗತಿ ಮಟ್ಟದ ಪರೀಕ್ಷೆ, ಅಗತ್ಯವಿರುವಾಗ ಪೋಷಕರ ಸಭೆ ನಡೆಸುತ್ತಾರೆ. ಮಠದಲ್ಲಿ ಆಶ್ರಯ ಪಡೆದಿರುವ ವಿದ್ಯಾರ್ಥಿಗಳನ್ನು ಗಮನಿಸಲು ಪ್ರತ್ಯೇಕ ಉಪನ್ಯಾಸಕರ ತಂಡ ಮಾಡಲಾಗಿದೆ. ಹೆಣ್ಣು ಮಕ್ಕಳ ಪ್ರಗತಿ ಪರಿಶೀಲಿಸಲು ಮಹಿಳಾ ಉಪನ್ಯಾಸಕಿಯರ ತಂಡ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಉಪನ್ಯಾಸಕರ ವಲಯದಿಂದ ಇಷ್ಟೆಲ್ಲಾ ಉತ್ಸಾಹವಿದ್ದರೂ ಸರ್ಕಾರದಿಂದ ಸೂಕ್ತ ಸ್ಪಂದನೆ, ಜತೆಗೆ ಸೌಲಭ್ಯ ದೊರೆತಿಲ್ಲ.
ಪ್ರೌಢಶಾಲೆಯ ಪ್ರಯೋಗಾಲಯದಲ್ಲೇ ಪಿಯುಸಿ ವಿದ್ಯಾರ್ಥಿಗಳೂ ಪ್ರಯೋಗ ನಡೆಸುತ್ತಾರೆ. ಸಲಕರಣೆಗಳ ಕೊರತೆ ಮತ್ತು ಕಳಪೆ ಸಾಮಗ್ರಿ ಯಿಂದಾಗಿ ಆಧುನಿಕ ಪಠ್ಯಕ್ರಮದ ಪ್ರಯೋಗ ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಪ್ರಯೋಗಾಲಯದಲ್ಲಿ ಮಾಡಿದ ಪ್ರಯೋಗಗಳ ಥಿಯರಿ ಬರೆಯುವ ಕೆಲವು ಪ್ರಶ್ನೆಗಳೂ ಪರೀಕ್ಷೆಯಲ್ಲಿರುತ್ತವೆ. ಸೂಕ್ತ ಪ್ರಯೋಗಾಲಯ ಇಲ್ಲದೆ ಮುಖ್ಯ ಪರೀಕ್ಷೆಯಲ್ಲಿ ಈ ಅಂಕಗಳನ್ನೂ ವಿದ್ಯಾರ್ಥಿ ಕಳೆದುಕೊಳ್ಳಬೇಕಾಗುತ್ತದೆ.
ಒಂದೇ ಕೊಠಡಿಯಲ್ಲಿ ಮೂವರು ಉಪನ್ಯಾಸಕರು ಏಕಕಾಲಕ್ಕೆ ಪ್ರಯೋಗಾಲಯ ತರಗತಿ ತೆಗೆದು ಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಯಾರು ಯಾವ ಪಾಠ ಹೇಳುತ್ತಿದ್ದಾರೆ ಎಂಬುದೇ ತಿಳಿಯದೆ, ಕಬ್ಬಿಣದ ಕಡಲೆಯಾಗಿರುವ ವಿಜ್ಞಾನ ಇನ್ನಷ್ಟು ಕಠಿಣ ಎನಿಸುತ್ತದೆ.
ವಾಣಿಜ್ಯ ವಿಭಾಗದಲ್ಲಿ ಇಬ್ಬರು ಉಪನ್ಯಾಸಕರು ಇದ್ದಾರೆ. ಸುಮಾರು 250 ವಿದ್ಯಾರ್ಥಿಗಳಿದ್ದಾರೆ. `ಉಪನ್ಯಾಸಕರಿಗೆ ಹಾಜರಾತಿ ಹಾಕಲು ಅರ್ಧಗಂಟೆ ಬೇಕು. ಇನ್ನು ಪಾಠ ಮಾಡುವುದು, ವಿದ್ಯಾರ್ಥಿ ಗಳನ್ನು ಗಮನಿಸಿಕೊಳ್ಳುವುದು ಹೇಗೆ? ಕೊನೆಯ ಸಾಲಿನಲ್ಲಿ ಕುಳಿತ ವಿದ್ಯಾರ್ಥಿಗೆ ಉಪನ್ಯಾಸಕರು ಹೇಳುವ ಪಾಠವೇ ಕೇಳುವುದಿಲ್ಲ. ತರಗತಿಗಳಿಗೆ ಮೈಕ್ ಅಳವಡಿಸಬೇಕು` ಎನ್ನುತ್ತಾರೆ ಪೋಷಕ ಕೃಷ್ಣಪ್ಪ.
ನಗರ ಕ್ಷೇತ್ರದ ಶಾಸಕ ಎಸ್.ಶಿವಣ್ಣ, ಸಿದ್ದಗಂಗಾ ಮಠದ ಶಿವಕುಮಾರಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಇದೇ ಕಾಲೇಜಿನಲ್ಲಿ ಕಲಿತವರು. ಈ ಕಾಲೇಜಿ ನಲ್ಲಿ ಓದಿದ ಎಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಆದರೆ ಯಾರೂ ಕಾಲೇಜಿನ ಪ್ರಸ್ತುತ ದುಸ್ಥಿತಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಜನ ಪ್ರತಿನಿಧಿಗಳು, ಪಿಯುಸಿ ಮಂಡಳಿಯ ಅಧಿಕಾರಿ ಗಳನ್ನು ಭೇಟಿ ಮಾಡಿರುವ ಕಾಲೇಜು ಸಿಬ್ಬಂದಿ ಸಮಸ್ಯೆ ಮನಗಾಣಿಸಲು ಯತ್ನಿಸಿದ್ದಾರೆ. ಬೆಂಗಳೂ ರಿನ ಹಿರಿಯ ಅಧಿಕಾರಿಗಳನ್ನು ಮುಖತಃ ಕಂಡು ಮನವರಿಕೆ ಮಾಡಿಕೊಟ್ಟರೂ ಸಮಸ್ಯೆ ಪರಿಹಾರ ವಾಗಿಲ್ಲ ಎಂದು ಖೇದ ವ್ಯಕ್ತಪಡಿಸುತ್ತಾರೆ.
ಒಂದೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುವ ಕಾಲೇಜಿನಲ್ಲಿ ಕೊಠಡಿಗಳ ಕೊರತೆಯೂ ಇದೆ. ಕನಿಷ್ಠ 6 ಕೊಠಡಿಗಳನ್ನು ಅಗತ್ಯವಿದೆ. ಇದರ ಜೊತೆಗೆ ಕಾಂಪೌಂಡ್ ಸಮಸ್ಯೆಯಿಂದಲೂ ಕಾಲೇಜು ಹೈರಾಣಾಗಿದೆ.
ಕಾಲೇಜು ಆವರಣದಲ್ಲಿ ಹೊಸದಾಗಿ ಕಾರು ಕಲಿಯುವವರ ಪಾಲಿಗೆ `ಪ್ರಾಕ್ಟೀಸ್ ಗ್ರೌಂಡ್`. ಕಾಂಪೌಂಡ್, ಗೇಟ್ ಇಲ್ಲದಿರುವುದರಿಂದ ಕಳ್ಳ ಕಾಕರಿಗೆ ಕಾಲೇಜು ಮುಕ್ತ ಪ್ರವೇಶ ಕಲ್ಪಿಸಿದೆ. ಒಂದೇ ವರ್ಷದಲ್ಲಿ ಕಾಲೇಜಿನ ಹಿಂದಿನಿಂದ ಪ್ರವೇಶಿಸಿದ ದುಷ್ಕರ್ಮಿಗಳು ಡೆಸ್ಕ್ ಸೇರಿದಂತೆ ಹಲವು ಬೋಧನೋಪಕರಣಗಳನ್ನು ಹೊತ್ತೊಯ್ದಿದ್ದಾರೆ.
ರೈಲ್ವೆ ನಿಲ್ದಾಣ ಸಮೀಪ ಕಾಲೇಜು ಮೈದಾನ ಅತಿಕ್ರಮಿಸುವ ಯತ್ನವನ್ನು ನಗರದ ಪ್ರತಿಷ್ಠಿತ ವ್ಯಕ್ತಿ ಯೊಬ್ಬರು ನಡೆಸಿದ್ದಾರೆ. ಅಲೆಮಾರಿಗಳ ಗುಡಿಸಲು ಗಳೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಹಾಡಹಗಲೇ ಕಾಲೇಜು ಆವರಣದಲ್ಲಿ ಸಾರ್ವಜನಿಕರು ಕ್ರಿಕೆಟ್ ಆಡುತ್ತಾರೆ. ಕೇಳುವ ಉಪನ್ಯಾಸಕರೊಂದಿಗೆ ವಾಗ್ವಾದ ನಡೆಸುತ್ತಾರೆ.
ಪ್ರಯೋಗಾಲಯ ಸಹಾಯಕರು, ಭದ್ರತಾ ಸಿಬ್ಬಂದಿ ಮತ್ತು `ಡಿ` ಗ್ರೂಪ್ ನೌಕರರನ್ನು ಕೇಳು ವಂತೆಯೇ ಇಲ್ಲ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿ ರುವ ವಾಣಿಜ್ಯ ವಿಭಾಗಕ್ಕೆ ಇಬ್ಬರು ಉಪನ್ಯಾಸಕರು ತುರ್ತಾಗಿ ನೇಮಕವಾಗಬೇಕಿದೆ. ಸಿಬ್ಬಂದಿ ಕೊರತೆ ತುಂಬಿಕೊಳ್ಳಲು ಕೆಲವರನ್ನು ಹಂಗಾಮಿಯಾಗಿ ನೇಮಿಸಿಕೊಳ್ಳಲಾಗಿದೆ.
ಕುಡಿಯುವ ನೀರೂ ಇಲ್ಲಿಲ್ಲ: ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇರುವ ಪ್ರತಿಷ್ಠಿತ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಕಟ್ಟಡ ಕೊರತೆ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದೆ.
ಪಿಯುಸಿಯಲ್ಲಿ ದಿನಕ್ಕೆ ಒಂದು 1 ಗಂಟೆಯ 6 ಪಿರಿಯಡ್ ನಡೆಯಬೇಕು. ಆದರೆ ಇಲ್ಲಿ 50 ನಿಮಿಷದ 5 ಪಿರಿಯಡ್ ನಡೆಯುತ್ತವೆ. ಮುಂಜಾನೆ 8ರಿಂದ 11.20ರ ವರೆಗೆ ಪದವಿ ಪೂರ್ವ ಕಾಲೇಜು ನಡೆಯುವ ಕೊಠಡಿಗಳಲ್ಲೇ ನಂತರ ಪ್ರೌಢಶಾಲೆಯ ತರಗತಿಗಳು ನಡೆಯಬೇಕು. ಹೀಗಾಗಿ ಹೆಚ್ಚುವರಿ ತರಗತಿಗಳನ್ನು ನಡೆಸುವ ಉತ್ಸಾಹ ಇದ್ದರೂ ಉಪನ್ಯಾಸಕರು ಅಸಹಾಯಕರಾಗಿ ಮಕ್ಕಳನ್ನು ಮನೆಗೆ ಕಳುಹಿಸಬೇಕು. ಇಲ್ಲವೇ ಹೊರಗೆ ಮರದ ಕೆಳಗೆ ತರಗತಿ ನಡೆಸಬೇಕಾಗಿದೆ.
ಕಾಲೇಜಿನ ಸನಿಹದಲ್ಲಿಯೇ ನಗರಸಭೆ ಇದೆ. ನಗರಸಭೆ ಆವರಣದಲ್ಲಿಯೇ ಅತಿದೊಡ್ಡ ನೆಲಮಟ್ಟದ ನೀರಿನ ತೊಟ್ಟಿ ಇದ್ದರೂ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಕಾಲೇಜಿನ ಹೆಣ್ಣು ಮಕ್ಕಳು ಕುಡಿಯಲು ಹಾಗೂ ಶೌಚಾಲಯಕ್ಕೆ ನೀರಿಲ್ಲದೆ ಪರದಾಡುತ್ತಾರೆ. ಕಾರಣ ಕೇಳಿದರೆ `ಬಿ.ಎಚ್.ರಸ್ತೆ ಅಗೆದು ಪೈಪ್ಲೈನ್ ಹಾಕಲು ಸಾಧ್ಯವಿಲ್ಲ. ಹೆದ್ದಾರಿ ಪ್ರಾಧಿಕಾರ ಅಡ್ಡಿಯುಂಟು ಮಾಡುತ್ತದೆ` ಎಂದು ನಗರಸಭೆ ಸಿಬ್ಬಂದಿ ನೆಪ ಹೇಳುತ್ತಾರೆ.
ಜಿಲ್ಲಾಧಿಕಾರಿ ಮುತುವರ್ಜಿಯಿಂದ ಕಾಲೇಜಿನಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಯಲ್ಲಿ ನೀರು ಸಂಪೂರ್ಣ ಕಡಿಮೆಯಾಗಿದೆ. 2000 ಹೆಣ್ಣು ಮಕ್ಕಳ ಅಗತ್ಯ ಪೂರೈಸುವಷ್ಟೂ ನೀರು ಶೌಚಾಲಯದಲ್ಲಿಲ್ಲ. ಇನ್ನೊಬ್ಬರಿಗೆ ಹೇಳಲೂ ಸಾಧ್ಯವಿಲ್ಲದ ತಮ್ಮ ಸಂಕಟವನ್ನು ಹೆಣ್ಣು ಮಕ್ಕಳು ಅವುಡುಕಚ್ಚಿ ಸಹಿಸಬೇಕಾದ ದುಃಸ್ಥಿತಿ ಎದುರಿಸುತ್ತಿದ್ದಾರೆ.
`ಖಾಸಗಿ ಕಾಲೇಜುಗಳ ಲಾಬಿಗೆ ಮಣಿದಿರುವ ಜನ ಪ್ರತಿನಿಧಿಗಳು ಉದ್ದೇಶಪೂರ್ವಕವಾಗಿಯೇ ಸರ್ಕಾರಿ ಕಾಲೇಜುಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿಯೇ ಈ ಕಾಲೇಜಿನ ಬಗ್ಗೆ ಒಮ್ಮೆಯಾದರೂ ನಗರಸಭೆ, ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಚರ್ಚೆಯಾಗುವು ದಿಲ್ಲ` ಎಂದು ಪೋಷಕ ರಾಮಚಂದ್ರ ದೂರುತ್ತಾರೆ
ಉಪನ್ಯಾಸಕರು, ಪ್ರಯೋಗಾಲಯ ಕೊಡಿ ಪ್ರಜಾವಾಣಿ ವಾರ್ತೆ
Saturday, June 16, 2012
ಯಾದಗಿರಿ: ಉಪನ್ಯಾಸಕರ ಕೊರತೆ: ಪ್ರಜಾವಾಣಿ ವಾರ್ತೆ
ಯಾದಗಿರಿ: ಜಿಲ್ಲೆಯಾಗಿ ಎರಡೂವರೆ ವರ್ಷಗಳು ಗತಿಸಿದರೂ, ಶಿಕ್ಷಣ ಇಲಾಖೆಯಲ್ಲಿ ಕೊರತೆ ಎಂಬ ಶಬ್ದ ಇನ್ನೂ ಹೋಗಿಲ್ಲ. ಶಾಲೆಗಳು ಶಿಕ್ಷಕರಿಲ್ಲದೇ ಬಿಕೋ ಎನ್ನುತ್ತಿದ್ದರೆ, ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ.
ರಾಜ್ಯದ 30ನೇ ಜಿಲ್ಲೆಯಾಗಿರುವ ಯಾದಗಿರಿ, ಪ್ರತಿವರ್ಷ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆಯುತ್ತಿದೆ. ಮೂರು ವರ್ಷಗಳಲ್ಲಿ ಜಿಲ್ಲೆಯ ಸ್ಥಿತಿ ಸುಧಾರಣೆ ಆಗಿಲ್ಲ. ಜಿಲ್ಲೆಯಲ್ಲಿರುವ ಪಾಲಕರು ಮಕ್ಕಳನ್ನು ಬೇರೆ ಜಿಲ್ಲೆಗಳಿಗೆ ಕಳುಹಿಸುವ ಚಿಂತನೆ ಮಾಡುವಂತಾಗಿದೆ.
ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 4,543 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, 14 ಮುಖ್ಯೋಪಾಧ್ಯಾಯರ ಹುದ್ದೆಗಳೂ ಸೇರಿದಂತೆ 534 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಇದರಲ್ಲಿ ಕನ್ನಡ ವಿಷಯದ 331, ಇಂಗ್ಲಿಷ್- 59, ವಿಜ್ಞಾನ ವಿಷಯದ 42, ಹಿಂದಿ ವಿಷಯದ 32, ದೈಹಿಕ ಶಿಕ್ಷಣದ 34 ಶಿಕ್ಷಕರ ಹುದ್ದೆಗಳು ಸೇರಿವೆ.
ಪ್ರೌಢಶಾಲೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 1,211 ಹುದ್ದೆಗಳು ಮಂಜೂರಾಗಿದ್ದು, 217 ಶಿಕ್ಷಕರ ಕೊರತೆಯಿದೆ. ಸಮಾಜ ವಿಜ್ಞಾನದ 14, ಗಣಿತ- 45, ವಿಜ್ಞಾನ- 22, ಕನ್ನಡ- 12, ಹಿಂದಿ- 8, ಇಂಗ್ಲಿಷ್ನ 11 ಶಿಕ್ಷಕರ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಅಚ್ಚರಿಯ ಸಂಗತಿ ಎಂದರೆ, 74 ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆಗಳೇ ಮಂಜೂರಾಗಿಲ್ಲ!
ಪಿಯು ಕಾಲೇಜು: ಜಿಲ್ಲೆಯಲ್ಲಿ ಒಟ್ಟು 23 ಸರ್ಕಾರಿ ಪದವಿಪೂರ್ವ ಕಾಲೇಜುಗಳಿದ್ದು, 59 ಉಪನ್ಯಾಸಕರ ಹುದ್ದೆಗಳ ಭರ್ತಿಯಾಗಿಲ್ಲ. ಗ್ರಾಮೀಣ ಪ್ರದೇಶಗಳ ಪದವಿಪೂರ್ವ ಕಾಲೇಜುಗಳಿಗೆ ಹೋಗಲು ಉಪನ್ಯಾಸಕರು ಹಿಂದೇಟು ಹಾಕುತ್ತಿದ್ದು, ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ. ಕನ್ನಡ ವಿಷಯದ 7, ಇಂಗ್ಲಿಷ್- 7, ಹಿಂದಿ 3, ಉರ್ದು 2, ಇತಿಹಾಸ 5, ಅರ್ಥಶಾಸ್ತ್ರ 5, ವಾಣಿಜ್ಯಶಾಸ್ತ್ರ 3, ಸಮಾಜಶಾಸ್ತ್ರ 3, ರಾಜ್ಯಶಾಸ್ತ್ರ 3, ಭೌತಶಾಸ್ತ್ರ 6, ರಸಾಯನಶಾಸ್ತ್ರ 6, ಗಣಿತ 4, ಜೀವಶಾಸ್ತ್ರ ವಿಷಯದ 5 ಉಪನ್ಯಾಸಕರ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಆರು ಪದವಿ ಪೂರ್ವ ಕಾಲೇಜುಗಳು ಪ್ರಾಚಾರ್ಯರಿಲ್ಲದೇ ನಡೆಯುತ್ತಿವೆ.
ಕಾಳಜಿ ಇಲ್ಲದ ಸರ್ಕಾರ: ಜಿಲ್ಲೆಯಾಗಿ ಮೂರನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿದ್ದರೂ, ಶೈಕ್ಷಣಿಕ ಅಭಿವೃದ್ಧಿಯತ್ತ ಸರ್ಕಾರ ಚಿಂತಿಸುತ್ತಿಲ್ಲ. ಫಲಿತಾಂಶ ಕುಸಿದಾಗ ಮಾತ್ರ ಬೆಂಗಳೂರಿನಲ್ಲಿ ಕುಳಿತು ಪತ್ರಿಕಾಗೋಷ್ಠಿ ನಡೆಸುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು, ಇದುವರೆಗೂ ಜಿಲ್ಲೆಗೆ ಬಂದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯನ್ನು ಒಮ್ಮೆಯೂ ನಡೆಸಿಲ್ಲ.
ಇದು ಬಿಜೆಪಿ ಸರ್ಕಾರ ಹೊಸ ಜಿಲ್ಲೆಯ ಬಗ್ಗೆ ಇಟ್ಟಿರುವ ಕಾಳಜಿಗೆ ಸ್ಪಷ್ಟ ನಿದರ್ಶನ ಎನ್ನುತ್ತಾರೆ ಹಿರಿಯರಾದ ಶಂಕ್ರಣ್ಣ ವಣಿಕ್ಯಾಳ. ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸುವವರೇ ಇಲ್ಲದಿದ್ದರೆ ಶಿಕ್ಷಣದ ಗುಣಮಟ್ಟ ಸುಧಾರಣೆ ಕಾಣುವುದಾದರೂ ಹೇಗೆ? ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಜಿಲ್ಲೆಯಲ್ಲಿ ಕೇವಲ 288 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಜಿಲ್ಲೆಯಲ್ಲಿರುವ 26 ಪದವಿ ಕಾಲೇಜುಗಳಿಗೆ ವಿದ್ಯಾರ್ಥಿಗಳೇ ಇಲ್ಲದಂತಾಗಿದೆ. ಈ ಬಗ್ಗೆ ಜಿಲ್ಲೆಯ ಜನರು ಹಲವಾರು ಬಾರಿ ಮನವಿ ಮಾಡಿದರೂ, ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮೂರು ವರ್ಷಗಳಿಂದ ಶಿಕ್ಷಕರ ನೇಮಕಾತಿ ಆಗಿಲ್ಲ. ಈ ಬಾರಿ ನೇಮಕಾತಿಗಾಗಿ ಸಿಇಟಿ ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಜಿಲ್ಲೆಗೆ 113 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಅವು ಮಾದರಿ ಶಾಲೆಗಳು ಹಾಗೂ ಹೊಸದಾಗಿ ಆರಂಭವಾಗುತ್ತಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ನೇಮಕಾತಿ ಆಗುವ ಲಕ್ಷಣಗಳಿವೆ. ಇದರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ಮುಂದುವರಿಯಲಿದೆ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್ ಆತಂಕ ವ್ಯಕ್ತಪಡಿಸುತ್ತಾರೆ
ಯಾದಗಿರಿ: ಉಪನ್ಯಾಸಕರ ಕೊರತೆ
ರಾಜ್ಯದ 30ನೇ ಜಿಲ್ಲೆಯಾಗಿರುವ ಯಾದಗಿರಿ, ಪ್ರತಿವರ್ಷ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆಯುತ್ತಿದೆ. ಮೂರು ವರ್ಷಗಳಲ್ಲಿ ಜಿಲ್ಲೆಯ ಸ್ಥಿತಿ ಸುಧಾರಣೆ ಆಗಿಲ್ಲ. ಜಿಲ್ಲೆಯಲ್ಲಿರುವ ಪಾಲಕರು ಮಕ್ಕಳನ್ನು ಬೇರೆ ಜಿಲ್ಲೆಗಳಿಗೆ ಕಳುಹಿಸುವ ಚಿಂತನೆ ಮಾಡುವಂತಾಗಿದೆ.
ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 4,543 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, 14 ಮುಖ್ಯೋಪಾಧ್ಯಾಯರ ಹುದ್ದೆಗಳೂ ಸೇರಿದಂತೆ 534 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಇದರಲ್ಲಿ ಕನ್ನಡ ವಿಷಯದ 331, ಇಂಗ್ಲಿಷ್- 59, ವಿಜ್ಞಾನ ವಿಷಯದ 42, ಹಿಂದಿ ವಿಷಯದ 32, ದೈಹಿಕ ಶಿಕ್ಷಣದ 34 ಶಿಕ್ಷಕರ ಹುದ್ದೆಗಳು ಸೇರಿವೆ.
ಪ್ರೌಢಶಾಲೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 1,211 ಹುದ್ದೆಗಳು ಮಂಜೂರಾಗಿದ್ದು, 217 ಶಿಕ್ಷಕರ ಕೊರತೆಯಿದೆ. ಸಮಾಜ ವಿಜ್ಞಾನದ 14, ಗಣಿತ- 45, ವಿಜ್ಞಾನ- 22, ಕನ್ನಡ- 12, ಹಿಂದಿ- 8, ಇಂಗ್ಲಿಷ್ನ 11 ಶಿಕ್ಷಕರ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಅಚ್ಚರಿಯ ಸಂಗತಿ ಎಂದರೆ, 74 ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆಗಳೇ ಮಂಜೂರಾಗಿಲ್ಲ!
ಪಿಯು ಕಾಲೇಜು: ಜಿಲ್ಲೆಯಲ್ಲಿ ಒಟ್ಟು 23 ಸರ್ಕಾರಿ ಪದವಿಪೂರ್ವ ಕಾಲೇಜುಗಳಿದ್ದು, 59 ಉಪನ್ಯಾಸಕರ ಹುದ್ದೆಗಳ ಭರ್ತಿಯಾಗಿಲ್ಲ. ಗ್ರಾಮೀಣ ಪ್ರದೇಶಗಳ ಪದವಿಪೂರ್ವ ಕಾಲೇಜುಗಳಿಗೆ ಹೋಗಲು ಉಪನ್ಯಾಸಕರು ಹಿಂದೇಟು ಹಾಕುತ್ತಿದ್ದು, ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ. ಕನ್ನಡ ವಿಷಯದ 7, ಇಂಗ್ಲಿಷ್- 7, ಹಿಂದಿ 3, ಉರ್ದು 2, ಇತಿಹಾಸ 5, ಅರ್ಥಶಾಸ್ತ್ರ 5, ವಾಣಿಜ್ಯಶಾಸ್ತ್ರ 3, ಸಮಾಜಶಾಸ್ತ್ರ 3, ರಾಜ್ಯಶಾಸ್ತ್ರ 3, ಭೌತಶಾಸ್ತ್ರ 6, ರಸಾಯನಶಾಸ್ತ್ರ 6, ಗಣಿತ 4, ಜೀವಶಾಸ್ತ್ರ ವಿಷಯದ 5 ಉಪನ್ಯಾಸಕರ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಆರು ಪದವಿ ಪೂರ್ವ ಕಾಲೇಜುಗಳು ಪ್ರಾಚಾರ್ಯರಿಲ್ಲದೇ ನಡೆಯುತ್ತಿವೆ.
ಕಾಳಜಿ ಇಲ್ಲದ ಸರ್ಕಾರ: ಜಿಲ್ಲೆಯಾಗಿ ಮೂರನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿದ್ದರೂ, ಶೈಕ್ಷಣಿಕ ಅಭಿವೃದ್ಧಿಯತ್ತ ಸರ್ಕಾರ ಚಿಂತಿಸುತ್ತಿಲ್ಲ. ಫಲಿತಾಂಶ ಕುಸಿದಾಗ ಮಾತ್ರ ಬೆಂಗಳೂರಿನಲ್ಲಿ ಕುಳಿತು ಪತ್ರಿಕಾಗೋಷ್ಠಿ ನಡೆಸುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು, ಇದುವರೆಗೂ ಜಿಲ್ಲೆಗೆ ಬಂದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯನ್ನು ಒಮ್ಮೆಯೂ ನಡೆಸಿಲ್ಲ.
ಇದು ಬಿಜೆಪಿ ಸರ್ಕಾರ ಹೊಸ ಜಿಲ್ಲೆಯ ಬಗ್ಗೆ ಇಟ್ಟಿರುವ ಕಾಳಜಿಗೆ ಸ್ಪಷ್ಟ ನಿದರ್ಶನ ಎನ್ನುತ್ತಾರೆ ಹಿರಿಯರಾದ ಶಂಕ್ರಣ್ಣ ವಣಿಕ್ಯಾಳ. ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸುವವರೇ ಇಲ್ಲದಿದ್ದರೆ ಶಿಕ್ಷಣದ ಗುಣಮಟ್ಟ ಸುಧಾರಣೆ ಕಾಣುವುದಾದರೂ ಹೇಗೆ? ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಜಿಲ್ಲೆಯಲ್ಲಿ ಕೇವಲ 288 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಜಿಲ್ಲೆಯಲ್ಲಿರುವ 26 ಪದವಿ ಕಾಲೇಜುಗಳಿಗೆ ವಿದ್ಯಾರ್ಥಿಗಳೇ ಇಲ್ಲದಂತಾಗಿದೆ. ಈ ಬಗ್ಗೆ ಜಿಲ್ಲೆಯ ಜನರು ಹಲವಾರು ಬಾರಿ ಮನವಿ ಮಾಡಿದರೂ, ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮೂರು ವರ್ಷಗಳಿಂದ ಶಿಕ್ಷಕರ ನೇಮಕಾತಿ ಆಗಿಲ್ಲ. ಈ ಬಾರಿ ನೇಮಕಾತಿಗಾಗಿ ಸಿಇಟಿ ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಜಿಲ್ಲೆಗೆ 113 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಅವು ಮಾದರಿ ಶಾಲೆಗಳು ಹಾಗೂ ಹೊಸದಾಗಿ ಆರಂಭವಾಗುತ್ತಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ನೇಮಕಾತಿ ಆಗುವ ಲಕ್ಷಣಗಳಿವೆ. ಇದರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ಮುಂದುವರಿಯಲಿದೆ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್ ಆತಂಕ ವ್ಯಕ್ತಪಡಿಸುತ್ತಾರೆ
ಯಾದಗಿರಿ: ಉಪನ್ಯಾಸಕರ ಕೊರತೆ
Friday, June 08, 2012
ಪದವಿಪೂರ್ವ ಕಾಲೇಜುಗಳ ಸೇರ್ಪಡೆ: ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರೂ ಸೀಟಿಲ್ಲ!
ಬೆಂಗಳೂರು: ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿ (ಡಿಸ್ಟಿಂಕ್ಷನ್)ಯಲ್ಲಿ ಉತ್ತೀರ್ಣರಾಗಿ ನಗರದ ಪ್ರತಿಷ್ಠಿತ ಪದವಿಪೂರ್ವ ಕಾಲೇಜುಗಳಲ್ಲಿ ಈ ಬಾರಿ ಪಿಯುಸಿಯಲ್ಲಿ ಸೀಟು ಖಚಿತ ಎಂದು ಆಸೆ ಕಂಗಳಿಂದ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. ಪ್ರತಿಷ್ಠಿತ ಕಾಲೇಜುಗಳು ಪ್ರಥಮ ಪಿಯುಸಿಗೆ ಸೇರ್ಪಡೆ ಸಂಬಂಧ ಪ್ರಕಟಿಸಿರುವ ವಿಜ್ಞಾನ ವಿಭಾಗದ ಮೊದಲ ಪಟ್ಟಿಯಲ್ಲಿ ಶೇ 90ಕ್ಕಿಂತ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳ ಹೆಸರು ಕಾಣಿಸಿಕೊಂಡಿಲ್ಲ!
ನಗರದ ಪದವಿಪೂರ್ವ ಕಾಲೇಜುಗಳಲ್ಲಿ ಮೊದಲ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಹೆಚ್ಚಿನ ಕಾಲೇಜುಗಳಲ್ಲಿ ಎರಡನೇ ಪಟ್ಟಿ ಇದೇ 9ರಂದು ಪ್ರಕಟವಾಗುವ ನಿರೀಕ್ಷೆ ಇದೆ. ಸಾಮಾನ್ಯ ವಿಭಾಗದಲ್ಲಿ ವಿದ್ಯಾರ್ಥಿಗಳ ಸೇರ್ಪಡೆಗೆ ಕಾಲೇಜುಗಳು ನಿಗದಿಪಡಿಸಿರುವ ಅಂಕ ಮಿತಿಯಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಹೆಚ್ಚಿನ ಕಾಲೇಜುಗಳಲ್ಲಿ ಅಂಕದ ಮಿತಿ ಕಳೆದ ವರ್ಷಕ್ಕಿಂತ ಈ ಸಲ ಶೇ 0.3ರಿಂದ ಶೇ 0.5 ಹೆಚ್ಚಾಗಿದೆ ಎಂಬುದು ಕಾಲೇಜುಗಳ ಆಡಳಿತ ಮಂಡಳಿಗಳ ಹೇಳಿಕೆ.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 76.13ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ದಾಖಲೆಯ ಫಲಿತಾಂಶ ಬಂದಿತ್ತು. ಕಳೆದ ವರ್ಷ ಶೇ 73.90ರಷ್ಟು ಫಲಿತಾಂಶ ಬಂದಿತ್ತು. ಈ ವರ್ಷದ ಫಲಿತಾಂಶದಲ್ಲಿ ಶೇ 2.23ರಷ್ಟು ಏರಿಕೆಯಾಗಿತ್ತು. ಇದರಿಂದಾಗಿ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಕೆ ಪ್ರಮಾಣವೂ ಜಾಸ್ತಿಯಾಗಿತ್ತು. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ನಗರದ `ಪ್ರತಿಷ್ಠಿತ` ಕಾಲೇಜುಗಳಲ್ಲಿ ಸೇರ್ಪಡೆಯಾಗುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದರು. ಮೊದಲ ಪಟ್ಟಿಯಲ್ಲಿ ಉನ್ನತ ಶ್ರೇಣಿ ಹಾಗೂ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆ ಸಿಕ್ಕಿಲ್ಲ.
ವಿಜ್ಞಾನ ವಿಭಾಗದಲ್ಲೂ ಪಿಸಿಎಂಬಿಗಿಂತ ಪಿಸಿಎಂಸಿ ಹಾಗೂ ಪಿಸಿಎಂಇ ಕಲಿಕೆಗೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ವ್ಯಕ್ತಪಡಿಸಿರುವುದು ಈ ಬಾರಿಯ ವಿಶೇಷ. ಅಲ್ಲದೆ, ವಾಣಿಜ್ಯ ವಿಭಾಗಕ್ಕೂ ಹೆಚ್ಚಿನ ಬೇಡಿಕೆ ಕುದುರಿದೆ. ಆದರೆ ಕಲಾ ವಿಭಾಗದ ಅಂಕದ ಮಿತಿ ಶೇ 85ರ ಗಡಿ ದಾಟಿಲ್ಲ. ಎರಡನೇ ಪಟ್ಟಿಯಲ್ಲಿ ಶೇ 80ಕ್ಕಿಂತ ಅಧಿಕ ಗಳಿಸಿದ ವಿದ್ಯಾರ್ಥಿಗಳ ಅವಕಾಶ ಲಭ್ಯವಾಗುವ ನಿರೀಕ್ಷೆ ಇದೆ. ಇನ್ನೊಂದೆಡೆ, ಈ ಬಾರಿ ಪಿಯುಸಿ ಹಾಗೂ ಸಿಇಟಿಯಲ್ಲಿ ಶ್ರೇಯಾಂಕ ಗಳಿಸಿದ ಕಾಲೇಜುಗಳಲ್ಲಿ ಸೇರ್ಪಡೆಗೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ.
ಎಂಇಎಸ್ ಕಾಲೇಜು ಅಗ್ರ: ಎಂಇಎಸ್ ಕಿಶೋರ ಕೇಂದ್ರ ಕಾಲೇಜಿಗೆ ಈ ಸಲವೂ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಮೊದಲ ಪಟ್ಟಿಯಲ್ಲಿ ವಿಜ್ಞಾನ ವಿಭಾಗಕ್ಕೆ ಶೇ 95ಕ್ಕಿಂತ ಕಡಿಮೆ ಅಂಕ ಗಳಿಸಿದವರ ಹೆಸರು ಕಾಣಿಸಿಕೊಂಡಿಲ್ಲ. ಇಲ್ಲಿ ಪಿಸಿಎಂಬಿಗೆ ಶೇ 96.29, ಪಿಸಿಎಂಇಗೆ ಶೇ 96.64, ಪಿಸಿಎಂಸಿಗೆ ಶೇ 97, ವಾಣಿಜ್ಯ ವಿಭಾಗಕ್ಕೆ ಶೇ 93 ಅಂಕದ ಮಿತಿ ನಿಗದಿಪಡಿಸಲಾಗಿದೆ. ಇಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಶೇ 0.4ರಷ್ಟು ಅಂಕದ ಮಿತಿ ಜಾಸ್ತಿ ಆಗಿದೆ.
ಎಲ್ಲೆಲ್ಲಿ ಎಷ್ಟು: ನಗರದ ಜೈನ್ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಶೇ 89, ವಾಣಿಜ್ಯ ವಿಭಾಗಕ್ಕೆ ಶೇ 82, ಕಲಾ ವಿಭಾಗಕ್ಕೆ ಶೇ 70, ಕ್ರೈಸ್ಟ್ ಪದವಿಪೂರ್ವ ಕಾಲೇಜಿನಲ್ಲಿ ಪಿಸಿಎಂಇಗೆ ಶೇ 94, ಪಿಸಿಎಂಬಿಗೆ ಶೇ 93 ಹಾಗೂ ವಾಣಿಜ್ಯ ವಿಭಾಗಕ್ಕೆ ಶೇ 91ಕ್ಕಿಂತ ಅಧಿಕ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಿಸಿಎಂಬಿಗೆ ಶೇ 91, ಪಿಸಿಎಂಇಗೆ ಶೇ 93, ವಾಣಿಜ್ಯ ವಿಭಾಗಕ್ಕೆ ಶೇ 91, ಮಲ್ಲೇಶ್ವರ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಶೇ 80, ರಾಜಾಜಿನಗರದ ಬಸವೇಶ್ವರ ಪಿಯು ಕಾಲೇಜಿನಲ್ಲಿ ಪಿಸಿಎಂಬಿಗೆ ಶೇ 83, ಪಿಸಿಎಂಸಿಗೆ ಶೇ 84 ಅಂಕದ ಮಿತಿ ನಿಗದಿಪಡಿಸಲಾಗಿದೆ. ಶೇಷಾದ್ರಿಪುರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪಿಸಿಎಂಸಿಗೆ ಶೇ 93.44, ಪಿಸಿಎಂಇಗೆ ಶೇ 92.48, ಪಿಸಿಎಂಬಿಗೆ ಶೇ 92 ಅಂಕದ ಮಿತಿ ನಿಗದಿಪಡಿಸಲಾಗಿದೆ.
`ಕೆಲವು ಕಾಲೇಜುಗಳು ಹಟಕ್ಕೆ ಬಿದ್ದು ವಿಜ್ಞಾನ ವಿಭಾಗಕ್ಕೆ ಶೇ 80ಕ್ಕಿಂತ ಅಧಿಕ ಮಿತಿ ನಿಗದಿಪಡಿಸಿವೆ. ಆದರೆ ಆ ಕಾಲೇಜುಗಳತ್ತ ವಿದ್ಯಾರ್ಥಿಗಳು ಸುಳಿದಿಲ್ಲ. ಬೆರಳೆಣಿಕೆಯ ವಿದ್ಯಾರ್ಥಿಗಳು ಸೇರ್ಪಡೆಯಾದ ಉದಾಹರಣೆ ಉಂಟು. ಒಳ್ಳೆಯ ಟ್ಯೂಷನ್ ವ್ಯವಸ್ಥೆ ಇರುವ ಕಾಲೇಜುಗಳಿಗೆ ಹೆಚ್ಚಿನ ಶುಲ್ಕ ತೆತ್ತು ಸೇರ್ಪಡೆಯಾಗಲು ವಿದ್ಯಾರ್ಥಿಗಳು ಆಸಕ್ತಿ ವಹಿಸಿದ್ದಾರೆ. ಈ ಬಾರಿ ಪಿಯುಸಿಯಲ್ಲಿ ಕಾಲೇಜುಗಳು ಗಳಿಸಿದ ಉತ್ತಮ ಫಲಿತಾಂಶ ಆ ಕಾಲೇಜುಗಳ ಬೇಡಿಕೆಯನ್ನು ಹೆಚ್ಚಿಸಿವೆ` ಎಂದು ಪದವಿ ಪೂರ್ವ ಕಾಲೇಜೊಂದರ ಪ್ರಾಂಶುಪಾಲರು ಅಭಿಪ್ರಾಯಪಟ್ಟರು.
`ಈ ಬಾರಿ ಎಂಇಎಸ್ ಕಾಲೇಜಿಗೆ ಬಂದ ಅರ್ಜಿಗಳ ಸಂಖ್ಯೆ ಹೆಚ್ಚಾಗಿತ್ತು. ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ಸೇರ್ಪಡೆಯಾಗಲು ಮೊದಲ ಆದ್ಯತೆ ನೀಡುತ್ತಾರೆ. ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಕಷ್ಟಕರವಾಗಿತ್ತು. ಸಂಸ್ಥೆಗೆ ವಾಣಿಜ್ಯ ವಿಭಾಗದಲ್ಲಿ ಹತ್ತರೊಳಗೆ ಮೂರು ಶ್ರೇಯಾಂಕ, ಸಿಇಟಿಯಲ್ಲಿ ಶ್ರೇಯಾಂಕ, ವಿಜ್ಞಾನ ವಿಭಾಗದಲ್ಲಿ ಶ್ರೇಯಾಂಕ ಬಂದಿದೆ. ಸಂಸ್ಥೆಯ ಗುಣಮಟ್ಟದ ಶಿಕ್ಷಣದ ಕಾರಣಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ` ಎಂದು ಪಿ.ಯು ಕಾಲೇಜಿನ ಪ್ರಾಂಶುಪಾಲ ಡಾ.ಎಲ್. ರಾಮ್ `ಪ್ರಜಾವಾಣಿ`ಗೆ ತಿಳಿಸಿದರು.
ಪದವಿಪೂರ್ವ ಕಾಲೇಜುಗಳ ಸೇರ್ಪಡೆ: ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರೂ ಸೀಟಿಲ್ಲ!
Friday, June 01, 2012
ಮರು ಮೌಲ್ಯಮಾಪನ: ಪ್ರತಿಭಾನ್ವಿತರಿಗೆ ಅಡ್ಡಿ-
ಬೆಳಗಾವಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಮರು ಮೌಲ್ಯಮಾಪನಕ್ಕೆ
ಜಾರಿಗೊಳಿಸಿರುವ ಅವೈಜ್ಞಾನಿಕ ನಿಯಮದಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ
ಅಂಕ ನಿರೀಕ್ಷಿಸಿದ್ದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಅವಕಾಶದಿಂದ
ವಂಚಿತರಾಗುತ್ತಿದ್ದಾರೆ.
ಇಲಾಖೆಯ ನಿಯಮದ ಪ್ರಕಾರ ಯಾವುದೇ ವಿಷಯದಲ್ಲಿ ಮರು ಮೌಲ್ಯಮಾಪನ ನಡೆಸಿದಾಗ, ಈ ಹಿಂದೆ ಪಡೆದ ಅಂಕಕ್ಕಿಂತ 6 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತದೆ. ಮರು ಮೌಲ್ಯಮಾಪನದಲ್ಲಿ 5 ಹಾಗೂ ಅದಕ್ಕಿಂತ ಕಡಿಮೆ ಅಂಕ ಪಡೆದರೆ, ಅದನ್ನು ಪರಿಗಣಿಸದೆ ಈ ಹಿಂದೆ ಪಡೆದ ಅಂಕವನ್ನೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಇಲಾಖೆಯ ಈ ನಿಮಯದಿಂದಾಗಿ ಪರೀಕ್ಷೆಯ ಮೂಲ ಮೌಲ್ಯಮಾಪನದಲ್ಲಿ 95 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ವಿಜ್ಞಾನ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ನಿರೀಕ್ಷಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗದೇ ಹತಾಶರಾಗುತ್ತಿದ್ದಾರೆ.
`ದ್ವಿತೀಯ ಪಿಯುಸಿ ಪರೀಕ್ಷೆಯ ರಸಾಯನಶಾಸ್ತ್ರ ವಿಷಯದಲ್ಲಿ 100 (ಪಡೆದದ್ದು 93) ಹಾಗೂ ಗಣಿತದಲ್ಲಿ 100 (99 ಅಂಕ) ಬರಬೇಕಿತ್ತು. ಮರು ಮೌಲ್ಯಮಾಪನ ನಡೆಸುವ ಸಂದರ್ಭದಲ್ಲಿ ಮೌಲ್ಯಮಾಪಕರು 6 ಅಂಕಕ್ಕಿಂತ ಕಡಿಮೆ ಅಂಕವನ್ನು ಹಾಕಿದರೆ ಅದನ್ನು ಪರಿಗಣಿಸುವುದಿಲ್ಲ ಎಂಬ ಕಾರಣಕ್ಕೆ ಮರು ಮೌಲ್ಯಮಾಪನಕ್ಕೆ ಹಾಕಲಿಲ್ಲ ಎನ್ನುತ್ತಾರೆ ಬೆಳಗಾವಿಯ ಜೈನ ಕಾಲೇಜಿನ ವಿದ್ಯಾರ್ಥಿ ವೈಭವ ಪಾಟೀಲ.
`ಗಣಿತ ವಿಷಯದಲ್ಲಿ 99 (ಪಡೆದದ್ದು 94) ಹಾಗೂ ರಸಾಯನಶಾಸ್ತ್ರದಲ್ಲಿ 99 (ಪಡೆದದ್ದು 93) ಅಂಕಗಳನ್ನು ನಿರೀಕ್ಷಿಸಿದ್ದೆ. ಅಲ್ಲದೇ ಮರು ಮೌಲ್ಯಮಾಪನದ ಒಂದು ವಿಷಯಕ್ಕೆ ರೂ 1050 ಶುಲ್ಕ ವಿಧಿಸಲಾಗುತ್ತಿದೆ. ಹಣವೂ ವಾಪಸ್ ಸಿಗುವುದಿಲ್ಲ. ಹೀಗಾಗಿ 97 ಅಂಕ ನಿರೀಕ್ಷಿಸಿದ್ದ ಜೀವಶಾಸ್ತ್ರ (86) ವಿಷಯವನ್ನು ಮಾತ್ರ ಮರು ಮೌಲ್ಯಮಾಪನಕ್ಕೆ ಹಾಕಿದ್ದೇನೆ` ಎಂದು ವಿದ್ಯಾರ್ಥಿ ಶುಭಂ ಆರ್. ಪಾಟೀಲ `ಪ್ರಜಾವಾಣಿ` ಬಳಿ ಅಳಲು ತೋಡಿಕೊಂಡರು.
`ವಿಜ್ಞಾನ ವಿದ್ಯಾರ್ಥಿಗಳಿಗೆ ಒಂದೆರಡು ವಿಷಯಗಳಲ್ಲಿ ಮೂರು- ನಾಲ್ಕು ಅಂಕಗಳು ಹೆಚ್ಚಿದರೂ, ಸಿಇಟಿ ರ್ಯಾಂಕಿಂಗ್ನಲ್ಲಿ 100ರಿಂದ 150ರಷ್ಟು ವ್ಯತ್ಯಾಸವಾಗುತ್ತದೆ. ಕಡಿಮೆ ರ್ಯಾಂಕಿಂಗ್ ಪಡೆಯುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ತಾವು ಸೇರಬೇಕೆಂದುಕೊಂಡಿದ್ದ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಿಂದ ವಂಚಿತರಾಗುತ್ತಿದ್ದಾರೆ.
ಹೀಗಾಗಿ ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನದಲ್ಲಿ ಹೇಗೆ ಒಂದು ಅಂಕ ಹೆಚ್ಚಿಗೆ ಪಡೆದರೂ ಪರಿಗಣಿಸಲಾಗುತ್ತದೆಯೋ, ಅದೇ ರೀತಿ ಪಿಯುಸಿಯಲ್ಲೂ ಪರಿಗಣಿಸಬೇಕು` ಎಂದು ಪಾಲಕರಾದ ಅನೇಕಾಂತ ಪಾಟೀಲ ಒತ್ತಾಯಿಸುತ್ತಾರೆ.
95ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಮರು ಮೌಲ್ಯಮಾಪನಕ್ಕೆ ಅವಕಾಶ ಇಲ್ಲದಿರುವುದರಿಂದ ಅವರು ಇನ್ನೂ ಹೆಚ್ಚಿನ ಅಂಕ ನಿರೀಕ್ಷಿಸಿದ್ದರೆ, ಮರು ಎಣಿಕೆಗೆ ಹಾಕಬಹುದು. ಯಾವುದಾದರು ಪ್ರಶ್ನೆಯ ಉತ್ತರಕ್ಕೆ ಅಂಕವನ್ನು ನೀಡದೇ ಇರುವುದು ಈ ಸಂದರ್ಭದಲ್ಲಿ ಕಂಡು ಬಂದರೆ, ಮರು ಎಣಿಕೆಯಲ್ಲಿ ಅದರ ಅಂಕವನ್ನೂ ಸೇರಿಸಿಕೊಂಡು ಫಲಿತಾಂಶವನ್ನು ನೀಡಲಾಗುವುದು” ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತೆ ವಿ. ರಶ್ಮಿ `ಪ್ರಜಾವಾಣಿ`ಗೆ ತಿಳಿಸಿದರು.
ಇಲಾಖೆಯ ನಿಯಮದ ಪ್ರಕಾರ ಯಾವುದೇ ವಿಷಯದಲ್ಲಿ ಮರು ಮೌಲ್ಯಮಾಪನ ನಡೆಸಿದಾಗ, ಈ ಹಿಂದೆ ಪಡೆದ ಅಂಕಕ್ಕಿಂತ 6 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತದೆ. ಮರು ಮೌಲ್ಯಮಾಪನದಲ್ಲಿ 5 ಹಾಗೂ ಅದಕ್ಕಿಂತ ಕಡಿಮೆ ಅಂಕ ಪಡೆದರೆ, ಅದನ್ನು ಪರಿಗಣಿಸದೆ ಈ ಹಿಂದೆ ಪಡೆದ ಅಂಕವನ್ನೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಇಲಾಖೆಯ ಈ ನಿಮಯದಿಂದಾಗಿ ಪರೀಕ್ಷೆಯ ಮೂಲ ಮೌಲ್ಯಮಾಪನದಲ್ಲಿ 95 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ವಿಜ್ಞಾನ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ನಿರೀಕ್ಷಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗದೇ ಹತಾಶರಾಗುತ್ತಿದ್ದಾರೆ.
`ದ್ವಿತೀಯ ಪಿಯುಸಿ ಪರೀಕ್ಷೆಯ ರಸಾಯನಶಾಸ್ತ್ರ ವಿಷಯದಲ್ಲಿ 100 (ಪಡೆದದ್ದು 93) ಹಾಗೂ ಗಣಿತದಲ್ಲಿ 100 (99 ಅಂಕ) ಬರಬೇಕಿತ್ತು. ಮರು ಮೌಲ್ಯಮಾಪನ ನಡೆಸುವ ಸಂದರ್ಭದಲ್ಲಿ ಮೌಲ್ಯಮಾಪಕರು 6 ಅಂಕಕ್ಕಿಂತ ಕಡಿಮೆ ಅಂಕವನ್ನು ಹಾಕಿದರೆ ಅದನ್ನು ಪರಿಗಣಿಸುವುದಿಲ್ಲ ಎಂಬ ಕಾರಣಕ್ಕೆ ಮರು ಮೌಲ್ಯಮಾಪನಕ್ಕೆ ಹಾಕಲಿಲ್ಲ ಎನ್ನುತ್ತಾರೆ ಬೆಳಗಾವಿಯ ಜೈನ ಕಾಲೇಜಿನ ವಿದ್ಯಾರ್ಥಿ ವೈಭವ ಪಾಟೀಲ.
`ಗಣಿತ ವಿಷಯದಲ್ಲಿ 99 (ಪಡೆದದ್ದು 94) ಹಾಗೂ ರಸಾಯನಶಾಸ್ತ್ರದಲ್ಲಿ 99 (ಪಡೆದದ್ದು 93) ಅಂಕಗಳನ್ನು ನಿರೀಕ್ಷಿಸಿದ್ದೆ. ಅಲ್ಲದೇ ಮರು ಮೌಲ್ಯಮಾಪನದ ಒಂದು ವಿಷಯಕ್ಕೆ ರೂ 1050 ಶುಲ್ಕ ವಿಧಿಸಲಾಗುತ್ತಿದೆ. ಹಣವೂ ವಾಪಸ್ ಸಿಗುವುದಿಲ್ಲ. ಹೀಗಾಗಿ 97 ಅಂಕ ನಿರೀಕ್ಷಿಸಿದ್ದ ಜೀವಶಾಸ್ತ್ರ (86) ವಿಷಯವನ್ನು ಮಾತ್ರ ಮರು ಮೌಲ್ಯಮಾಪನಕ್ಕೆ ಹಾಕಿದ್ದೇನೆ` ಎಂದು ವಿದ್ಯಾರ್ಥಿ ಶುಭಂ ಆರ್. ಪಾಟೀಲ `ಪ್ರಜಾವಾಣಿ` ಬಳಿ ಅಳಲು ತೋಡಿಕೊಂಡರು.
`ವಿಜ್ಞಾನ ವಿದ್ಯಾರ್ಥಿಗಳಿಗೆ ಒಂದೆರಡು ವಿಷಯಗಳಲ್ಲಿ ಮೂರು- ನಾಲ್ಕು ಅಂಕಗಳು ಹೆಚ್ಚಿದರೂ, ಸಿಇಟಿ ರ್ಯಾಂಕಿಂಗ್ನಲ್ಲಿ 100ರಿಂದ 150ರಷ್ಟು ವ್ಯತ್ಯಾಸವಾಗುತ್ತದೆ. ಕಡಿಮೆ ರ್ಯಾಂಕಿಂಗ್ ಪಡೆಯುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ತಾವು ಸೇರಬೇಕೆಂದುಕೊಂಡಿದ್ದ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಿಂದ ವಂಚಿತರಾಗುತ್ತಿದ್ದಾರೆ.
ಹೀಗಾಗಿ ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನದಲ್ಲಿ ಹೇಗೆ ಒಂದು ಅಂಕ ಹೆಚ್ಚಿಗೆ ಪಡೆದರೂ ಪರಿಗಣಿಸಲಾಗುತ್ತದೆಯೋ, ಅದೇ ರೀತಿ ಪಿಯುಸಿಯಲ್ಲೂ ಪರಿಗಣಿಸಬೇಕು` ಎಂದು ಪಾಲಕರಾದ ಅನೇಕಾಂತ ಪಾಟೀಲ ಒತ್ತಾಯಿಸುತ್ತಾರೆ.
95ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಮರು ಮೌಲ್ಯಮಾಪನಕ್ಕೆ ಅವಕಾಶ ಇಲ್ಲದಿರುವುದರಿಂದ ಅವರು ಇನ್ನೂ ಹೆಚ್ಚಿನ ಅಂಕ ನಿರೀಕ್ಷಿಸಿದ್ದರೆ, ಮರು ಎಣಿಕೆಗೆ ಹಾಕಬಹುದು. ಯಾವುದಾದರು ಪ್ರಶ್ನೆಯ ಉತ್ತರಕ್ಕೆ ಅಂಕವನ್ನು ನೀಡದೇ ಇರುವುದು ಈ ಸಂದರ್ಭದಲ್ಲಿ ಕಂಡು ಬಂದರೆ, ಮರು ಎಣಿಕೆಯಲ್ಲಿ ಅದರ ಅಂಕವನ್ನೂ ಸೇರಿಸಿಕೊಂಡು ಫಲಿತಾಂಶವನ್ನು ನೀಡಲಾಗುವುದು” ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತೆ ವಿ. ರಶ್ಮಿ `ಪ್ರಜಾವಾಣಿ`ಗೆ ತಿಳಿಸಿದರು.
ಮರು ಮೌಲ್ಯಮಾಪನ: ಪ್ರತಿಭಾನ್ವಿತರಿಗೆ ಅಡ್ಡಿ
Subscribe to:
Posts (Atom)