ಕೋಲಾರ: ರಸೀದಿ ನೀಡದೆ ಶುಲ್ಕ ವಸೂಲು ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಶುಕ್ರವಾರ ಎಸ್ಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿ ವಿದ್ಯಾರ್ಥಿಯಿಂದ 200 ರೂಪಾಯಿ ಶುಲ್ಕವನ್ನು ವಸೂಲು ಮಾಡುತ್ತಿದ್ದು, ಅದಕ್ಕೆ ರಸೀದಿ ಕೊಡುತ್ತಿಲ್ಲ. ಈ ಕುರಿತು ಪ್ರಶ್ನಿಸಿದಾಗ, ಶಾಲಾ ಅಭಿವೃದ್ಧಿ ಶುಲ್ಕವೆಂದು ರೂ. 200 ವಸೂಲು ಮಾಡಲಾಗುತ್ತಿದೆ. ಮೊದಲಿನಿಂದಲೂ ಅದಕ್ಕೆ ರಸೀದಿ ಕೊಡುತ್ತಿಲ್ಲ ಎಂದು ಪ್ರಾಂಶುಪಾಲರು ಹೇಳುತ್ತಾರೆ. ಅವರ ಈ ಮಾತು ಅನುಮಾನ ಮೂಡಿಸುತ್ತದೆ ಎಂದು ಎಸ್ಎಫ್ಐ ಕಾರ್ಯಕರ್ತರು ದೂರಿದರು.
ಸರ್ಕಾರಿ ಸಂಸ್ಥೆಯಲ್ಲಿ ಯಾವುದೇ ಶುಲ್ಕ ಸಂಗ್ರಹಿಸಿದರೂ ರಸೀದಿ ನೀಡಬೇಕು ಎಂಬುದು ನಿಯಮ. ಆದರೆ ಕಾಲೇಜಿನಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ರಸೀದಿ ಇಲ್ಲದೆ ಪಡೆದಿರುವ ಶುಲ್ಕವನ್ನು ವಿದ್ಯಾರ್ಥಿಗಳಿಗೆ ವಾಪಸ್ ನೀಡಬೇಕು. ರಸೀದಿ ನೀಡದೆ ಹಣ ಸಂಗ್ರಹ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ನಂತರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ದೂರು ಸಲ್ಲಿಸಲಾಯಿತು ಎಂದು ಮುಖಂಡರು ತಿಳಿಸಿದ್ದಾರೆ.
ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯ ಅಮರೇಶ್, ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್.ಸಂದೀಪ್, ಉಪಾಧ್ಯಕ್ಷ ಶಿವರಾಜ್ ಅವರು ಧರಣಿ ನೇತೃತ್ವವನ್ನು ವಹಿಸಿದ್ದರು.
Prajavani dialy dated 19.11.2011
click on the link to read newsthread http://www.prajavani.net/web/include/story.php?news=50886§ion=3&menuid=10
No comments:
Post a Comment