Tuesday, September 01, 2015

Respected Director-Can You clean the system?

ಪರೀಕ್ಷಾ ಕಾರ್ಯಗಳ ನಂತರ ಮತ್ತೊಮ್ಮೆ ಇಂಗ್ಲೀಷ್ ದೈನಿಕದ ಮುಖಪುಟದಲ್ಲಿ ಬರುವಂತಾಗಿದೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಾಧನೆ.  ಇದನ್ನು ನಿಜವೋ ಸುಳ್ಳೋ ಎಂದು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಕೋರಿ ಈ ಬ್ಲಾಗ್ ಪೋಸ್ಟ್ ಮಾಡಲಾಗಿದೆ. ಓದಿರದಿದ್ದರೆ ಮತ್ತೊಮ್ಮೆ ಓದಿ.

Thursday, April 23, 2015

ಇವುಗಳಿಗೆ ಉತ್ತರ ಕೊಡುವಿರಾ-2 ?

ನಿರ್ದೇಶಕರೇ,
ನಿಮ್ಮ ಕಚೇರಿಯಲ್ಲಿ ನಡೆಯುತ್ತಿರುವ ನಿಯಮಬಾಹಿರ ಕೃತ್ಯಗಳನ್ನು ನಾನು ನ್ಯಾಯಾಲಯ ಮತ್ತು ಸಕ್ಷಮ ಪ್ರಾಧಿಕಾರ ಮತ್ತು ಮಾಧ್ಯಮಗಳಿಗೆ ತಿಳಿಯಪಡಿಸಬೇಕಾಗಿರುವುದರಿಂದ ನಾನು ಸಲ್ಲಿಸಿರುವ ಈ ಕೆಳಕಂಡ ಅರ್ಜಿಗಳಿಗೆ ನಿಮ್ಮಿಂದ ಸಮರ್ಪಕ ಉತ್ತರವನ್ನು ಅತ್ಯಂತ ಜರೂರಾಗಿ ಬಯಸಿರುತ್ತೇನೆ. ನಿಮ್ಮ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಜನರ ಮುಂದಿಡಲು ಇದು ಸಕಾಲ










Friday, April 17, 2015

ಇವುಗಳಿಗೆ ಉತ್ತರ ಕೊಡುವಿರಾ ?

ನಿರ್ದೇಶಕರೇ,
ನಿಮ್ಮ ಕಚೇರಿಯಲ್ಲಿ ನಡೆಯುತ್ತಿರುವ ನಿಯಮಬಾಹಿರ ಕೃತ್ಯಗಳನ್ನು ನಾನು ನ್ಯಾಯಾಲಯ ಮತ್ತು ಸಕ್ಷಮ ಪ್ರಾಧಿಕಾರ ಮತ್ತು ಮಾಧ್ಯಮಗಳಿಗೆ ತಿಳಿಯಪಡಿಸಬೇಕಾಗಿರುವುದರಿಂದ ನಾನು ಸಲ್ಲಿಸಿರುವ ಈ ಕೆಳಕಂಡ ಅರ್ಜಿಗಳಿಗೆ ನಿಮ್ಮಿಂದ ಸಮರ್ಪಕ ಉತ್ತರವನ್ನು ಅತ್ಯಂತ ಜರೂರಾಗಿ ಬಯಸಿರುತ್ತೇನೆ. ನಿಮ್ಮ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಜನರ ಮುಂದಿಡಲು ಇದು ಸಕಾಲ.    




ನಿಮ್ಮಿಂದ ಮಾಹಿತಿಯ ನಿರೀಕ್ಷೆಯಲ್ಲಿರುವ

Wednesday, April 15, 2015

ಅದಕ್ಷ ಅಧಿಕಾರಿಗಳ ಮೂರ್ಖತನದ ತೀರ್ಮಾನಗಳಿಂದಾಗಿ ಹಾಳಾದ ಪದವಿ ಪೂರ್ವ ಶಿಕ್ಷಣ ಇಲಾಖೆ,

ಇಲಾಖಾ ಮುಖ್ಯಸ್ಥರೇ,
ನಿಮ್ಮ ಕಾಲದಲ್ಲಿ ನಡೆಯುತ್ತಿರುವ ಈ "ಮಾಸ್ ಗ್ರೇಸ್ ಮಾರ್ಕ್ಸ್" ಹಿಂದೆಂದೂ ಕರ್ನಾಟಕ ಕೇಳಿರಲೇ ಇಲ್ಲ. ಈ ಶ್ರೇಯ ತಮಗೇ ಸಲ್ಲಬೇಕು. ಹೇಗಿದ್ದ ಇಲಾಖೆಯನ್ನು ಹೇಗೆ ಮಾಡಲಾಯಿತು? ನೀವು ಇಲಾಖೆಯನ್ನು ಮಾರಲು ಅಥವಾ ಇನ್ನೇನಾದರೂ ಮಾಡಲು ತೀರ್ಮಾನಿಸಿದ್ದೀರೋ ಹೇಗೆ? ಐ ಎ ಎಸ್  ಸರ್ಕಾರ ಕೊಟ್ಟ ಮಾತ್ರಕ್ಕೆ ಎಲ್ಲರೂ ಎಲ್ಲಾ ತಿಳಿದುಕೋ ಬೇಕು ಅಂತಾ ಇಲ್ಲ. ಜ್ಞಾನ  ಯಾರೊಬ್ಬರ ಸ್ವತ್ತು ಅಲ್ಲ. ನಿಮ್ಮ ಬಳಿ ಇರುವ ಹೊಗಳು ಭಟ್ಟರನ್ನು ದೂರ ಇಡಿ. ಕೆಲಸ  ಮಾಡುವ ಅಧಿಕಾರಿಗಳಿಗೆ ಪ್ರಾಮುಖ್ಯತೆ ಕೊಡಿ. ನಿಮ್ಮಲ್ಲಿ ಸರ್ಕಾರದ ಅನ್ನ ತಿನ್ನುತ್ತಿದ್ದೇನೆನ್ನುವ  ಕಿಂಚಿತ್ತಾದರೂ ಪ್ರಾಮಾಣಿಕತೆ  ಇದ್ದರೆ ಇಲಾಖೆಯನ್ನು ಪಾರದರ್ಷಕವನ್ನಾಗಿಸಿ ಆಡಳಿತ ನೀಡಿ. ಅದು ಬಿಟ್ಟು ರಿಟೈರ್ಡ್ ಆದ ಅಧಿಕಾರಿಗಳನ್ನು ರೀಟೈನ್ ಮಾಡಿಕೊಂಡು ನಡೆಸುತ್ತಿರುವ ನಿಮ್ಮ ಆಡಳಿತ ನಿಜಕ್ಕೂ ನಾಚಿಕೆಗೇಡು. ಹೀಗಂತಾ ನಾನು ಹೇಳುತ್ತಿಲ್ಲ. ಸಾರ್ವಜನಿಕರೇ ಹೇಳುತ್ತಿದ್ದಾರೆ... ಇದು ಮೀಡಿಯಾಗಳಲ್ಲೂ ಸಹಾ ಚರ್ಚೆಯಾಗಿರೋದು ನಿಮಗೂ ಗೊತ್ತು.... 
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆಯಲ್ಲಿ ಕೇಳಲಾಗಿರುವ ಈ ಕೆಳಗಿನ ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರ ಇದೆಯೇ?
■ What was the department doing till the evaluators brought the mistakes to its notice?
■ What happens to merit students who did not attempt wrong questions, thinking it is a waste of time?
■ What action will be initiated against the question paper setters?
■ What if a student misses the first rank in CET because he or she did not attempt a wrong question?
■ After evaluators flagged 13 questions as wrong in the English paper, on what basis did the authorities decide to grant just five grace marks?
ನಿಮ್ಮನ್ನು ಯಾರು ತಪ್ಪು ದಾರಿಗೆ ಎಳೆಯುತ್ತಿದ್ದಾರೋ ಅಥವಾ ಈ ಮೂರ್ಖತನದ ತೀರ್ಮಾನಗಳು ನಿಮ್ಮವೆಯೋ ನಮ್ಮಂತಹ ನಾಗರೀಕರಿಗೆ ಗೊತ್ತಿಲ್ಲ. ವಿದ್ಯಾರ್ಥಿಗಳ ಜೀವನದ ಜೊತೆ ಆಟ ಆಡೋದನ್ನ ಬಿಟ್ಟುಬಿಡಿ. ನಿಮ್ಮ ಈ ರೀತಿಯಾದಂತಹಾ ಘನಂದಾರಿ "ಮಾಸ್ ಗ್ರೇಸ್ ಮಾರ್ಕ್ಸ್" ನಿಂದಾಗಿ ಇಲಾಖೆ ಇನ್ನೂ ಸಾವಿರಾರು ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಎದುರಿಸಬೇಕಾಗುತ್ತದೆ. ಇದು ನೀವು ನಿರ್ದೇಶಕರಾಗಿ ಇಲಾಖೆಗೆ ನೀಡುತ್ತಿರುವ ಬಹು ದೊಡ್ಡ ಕೊಡುಗೆ !
"Let the noble thoughts come from all the side" ಎಂದು ಯೋಚಿಸಿದ್ದರೆ, ಹಿಟ್ಲರ್ ರೀತಿ ಸರ್ವಾಧಿಕಾರದ ಧೋರಣೆ ಬಿಟ್ಟಿದ್ದರೆ ಬಹುಶ: ಈ ರೀತಿಯಾಗಿ ಆಗುತ್ತಿರಲಿಲ್ಲ. ಇನ್ನು ಮುಂದಾದರೂ ಬ್ರಷ್ಟ ಅಧಿಕಾರಿಗಳನ್ನು ಇಲಾಖೆಯಿಂದ ಹೊರಗೆ ಹಾಕಿ ಚೆನ್ನಾಗಿ ನಿಯಮಗಳನ್ನು ಓದಿಕೊಂಡು ಕಾನೂನಿನನುಸಾರ ಕರ್ತವ್ಯ ನಿರ್ವಹಿಸಿ ಎಂದು ಆಶಿಸುವೆ 
ಸಾರ್ವಜನಿಕ ಹಿತದೃಷ್ಟಿಯಿಂದ  
ಪೋಷಕರ/ಜನಸಾಮಾನ್ಯರ ಪರವಾಗಿ 
ಮಧು 
ಬೆಂಗಳೂರು 

Tuesday, April 07, 2015

ಏನೀ ಅಪಮೌಲ್ಯಮಾಪನ ?

ನಿರ್ದೇಶಕರೇ,
 ಬರೀ ಪರೀಕ್ಷೆಗಳನ್ನು ನಡೆಸುವುದಷ್ಟೇ ಮುಖ್ಯವಲ್ಲ ! ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವೂ ಅಷ್ಟೇ ಪಾವಿತ್ರವಾದುದು ಎಂದು ಮಾಧ್ಯಮಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ತಿಳಿ ಹೇಳುವ ಕಾಲ ಬಂದಿದೆ.  ನೋಡಿ೧, ನೋಡಿ ೨, ನೋಡಿ ೩, ನೋಡಿ ೪ , ನೋಡಿ ೫  , ನೋಡಿ ೬
ಕಳೆದ ಒಂದು ವಾರದಿಂದ ಸದಾ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು ಜಂಟಿ ನಿರ್ದೇಶಕರ ಬೇಜವಾಬ್ದಾರಿತನದ ಉತ್ತರಗಳಿಂದಾಗಿ ಇನ್ನೂ ಎದುರಿಸಬೇಕಾದ ಪರಿಣಾಮಗಳು ಸಾಕಷ್ಟಿವೆ. ತನ್ನ ಕಚೇರಿಯಲ್ಲಿಯೇ ಸುಮಾರು ೬೫೦ ಕಡತಗಳನ್ನು ಬಾಕಿ ಇಟ್ಟುಕೊಂಡಿರುವ ನಿರ್ದೇಶಕರು ಅದ್ಯಾವ ಪರಿ ಕೆಲಸ ಮಾಡುತ್ತಿದ್ದರೆಂದು ನಾಗರೀಕರೇ ಹೇಳುತ್ತಿದ್ದಾರೆ. ದಿನಾಂಕ ೨೬/೦೩/೨೦೧೫ರ  ನನ್ನ ಬ್ಲಾಗ್ ಬರಹದಲ್ಲಿ ಕೆಲವು ವಿಚಾರಗಳ ಬಗ್ಗೆ ತಿಳಿಯಪದಿಸಿದ್ದರೂ ಈ ಬಗ್ಗೆ ನಿಮ್ಮಿಂದ ಏಕೆ ಇದುವರೆವಿಗೂ ಉತ್ತರ ಬಂದಿಲ್ಲ? ಈಗಲಾದರೂ ಉತ್ತರಿಸಿರುವಿರಾ?



Monday, March 30, 2015

ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕೆ ಸಾರ್ವಜನಿಕರ ಪರವಾಗಿ ವಂದನೆಗಳು ಮತ್ತು ನಾಲ್ಕಾರು ತಿಂಗಳುಗಳಿಂದ ಬಾಕಿ ಇರುವ ಕಡತಗಳನ್ನು ವಿಲೇ ಮಾಡಲು ಕೋರಿ

ಮಾನ್ಯ ನಿರ್ದೇಶಕರೇ,
ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯವನ್ನು ಲೋಪವಿಲ್ಲದೇ ಯಶಸ್ವಿಯಾಗಿ ಪೂರೈಸಿದ್ದಕ್ಕೆ ಸಾರ್ವಜನಿಕರ ಪರವಾಗಿ ಕೃತಜ್ಞತೆಗಳು. ನಾಲ್ಕಾರು ತಿಂಗಳುಗಳಿಂದ ನಿಮ್ಮ ಪರಿವೀಕ್ಷಣೆಗೆ  ಬಾಕಿ ಇರುವ ಕಡತಗಳನ್ನು ವಿಲೇ ಮಾಡಲು ಈ ಮೂಲಕ ಕೋರಲಾಗಿದೆ. ಹಾಗೆಯೇ ಅಪೀಲು ಪ್ರಕರಣಗಳ ಶೀಘ್ರ ವಿಲೇವಾರಿಗೂ ಗಮನ ಹರಿಸಲು ಕೋರಿದೆ. 

ಸಾರ್ವಜನಿಕ ಹಿತದೃಷ್ಟಿಯಿಂದ
ಮಧು ಸಿ.ಎಸ್.
ನ್ಯಾಯವಾದಿ,
ಬೆಂಗಳೂರು 

Friday, March 27, 2015

Kindly ensure transparency and legality in Sarvodaya PU College (UU-024) Enquiry.

Respected Director,
I had filed a complaint on Sarvodaya PU College, Tumkur (UU-024) in the year 2009. I would be very glad, if you read my complaint. (Kindly see my earlier thread on this)
On my complaint the Government of Karnataka was pleased to Direct the Director, PUE, Bangalore to conduct enquiry on the allegations made against the illegal appointments in the said college.
To my surprise I had filed a detailed complaint on 23/10/2009 to the Director, PUE Bangalore, till date no action has been taken on that. For your kind information and surprise the copy of original complaint has been sold to the management! As a result I got threatening calls from the Management of Sarvodaya College. 
The officers have failed to observe the principles of Natural Justice while conducting the Enquiry. They have ignored the Statements and the certified documents produced by me. Till date I have no information as to the Enquiry on my complaint by the department. The Superintendent of Tumkur District has tried his level best to stall the Enquiry, since he was pro-management departmental employee.!!!
Your Department had constituted an Enquiry team (headed by Sri Rajegowda, Sri Narayanaswamy, Sri Siddaiah, Sri Devaraju, Sri Vishwanath, Sri Siddalingaswamy, Sri Ganesh, Sri Mahadevaiah etc) Now the Members of Enquiry team are not willing to go in accordance with laws. From their attitude, it appears that they are protecting the wrong doers.
Kindly instruct them  the following:
1. Issue enquiry/notice to the employees whose appointments are alleged to be illegal.
2. Issue the same enquiry/notice to the Legal Management of the said college
3. Ask them to finish  it by the end of April (including the final Notice)

Pls remember, the documents are taken from your office through RTI and if your office subordinates are not complying the law, I may be constrained to approach the appropriate forum with this letter as the deemed notice.

With Public Interest....

Madhu C S 
Advocate
Bangaluru


Thursday, March 26, 2015

You must see the illegalities in the Departmentof PUE-Open letter

Respected Director,
See the below News paper report first.

ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರೇ,  ನಿಮ್ಮ ಕಚೇರಿಯಲ್ಲಿ ನಡೆಯುವ/ನಡೆಯುತ್ತಿರುವ ಅಕ್ರಮಗಳನ್ನು ನಿಮ್ಮ ಗಮನಕ್ಕೆ ತರುವ ಉದ್ದೇಶದಿಂದ ನಿಮ್ಮೊಂದಿಗೆ ಒಂದು ಅಧಿಕೃತ ಭೇಟಿಗೆ ಕೋರಿದ್ದೆನು. ನೀವು ಅದನ್ನು ಉದ್ದೇಶಪೂರ್ವಕವಾಗಿ ನಿರಕಾರಿಸಿರುತ್ತೀರೆಂದು ನನಗೆ ತಿಳಿಯಿತು. ಜೊತೆಗೆ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯ ಈ ತರಹದ ನಡೆಯಿಂದ ಬೇಸರದ ಜೊತೆಗೆ ಅಸಹ್ಯವೂ ಮೂಡಿತು. ನನಗೆ ನಿಮ್ಮ ಕಚೇರಿಯಲ್ಲಿ ಯಾರ ಮೇಲೂ ದ್ವೇಷವಿಲ್ಲ, ಅಥವಾ ಯಾರ ಪರವಾಗಿಯೂ ನಾನು ಮಾತನಾಡುವುದಿಲ್ಲ. ಅಕ್ರಮ ಅಕ್ರಮವೇ. ಅದು ನಿಮ್ಮಿಂದಾಗಲೀ ಅಥವಾ ನಿಮ್ಮ ಕೈಕೆಳಗಿನ ಅಧಿಕಾರಿಯಿಂದಾಗಲೀ! ನಿಮ್ಮ ಕಚೇರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನಿಮಗೆ ಗೊತ್ತಿದ್ದೂ ಏಕೆ ಸುಮ್ಮನಿದ್ದೀರೋ ನನಗೆ ತಿಳಿಯದು. (ಗೊತ್ತಿಲ್ಲದಿದ್ದರೆ ಅದು ನಿಮ್ಮದೇ ತಪ್ಪು) ನಿಮ್ಮ ಸುತ್ತಾ ಇರೋ ಎಲ್ಲಾ ಅಧಿಕಾರಿಗಳು ನಿಮ್ಮ ಹೊಗಳು ಭಟ್ಟರೇ  ಹೊರತು  ಇಲಾಖೆಗೆ ಮತ್ತು ನಿಮಗೆ ಗೌರವ ತರುವ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ ಎಂಬುದು ನಿಜವಾದ ಸಂಗತಿ. ಈ ಸಂಗತಿಯನ್ನು ಅರಗಿಸಿಕೊಳ್ಳಲು ನಿಮಗೆ ಕಷ್ಟವಾಗಬಹುದು. ಯಾರೊಬ್ಬರು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಆದ ಮಾತ್ರಕ್ಕೆ ಮತ್ತು ಐ.ಎ.ಎಸ್. ಆದ ಮಾತ್ರಕ್ಕೆ ಇಲಾಖೆಯ ಎಲ್ಲಾ ವಿಷಯ/ನಿಯಮಗಳು ತಿಳಿದಿರುತ್ತದೆ ಎಂಬ ಮಾತು ಅಪ್ಪಟ ಸುಳ್ಳು. 
         ನಿಮ್ಮ ಕೈಕೆಳಗಿರುವ ಅಧಿಕಾರಿಗಳು ನಿಮಗೆ ಚಳ್ಳೆ ಹಣ್ಣು ತಿನ್ನಿಸಿ ಅಕ್ರಮಗಳನ್ನು ಮಾಡಿಸಿರುವುದನ್ನು ನಿಮ್ಮ ಗಮನಕ್ಕೆ ದಾಖಲೆಗಳ ಸಮೇತ ತರುತ್ತೇನೆ. ನಿಮ್ಮಿಂದ ಎಷ್ಟು ನಿಯಮಗಳು ಉದ್ದೇಶಪೂರ್ವಕವಾಗಿ ಉಲ್ಲಂಘನೆಯಾಗಿವೆ ಎಂಬುದನ್ನೂ ನಿಮ್ಮ ಗಮನಕ್ಕೆ ತರುತ್ತೇನೆ. ನನಗೆ ನಿಮ್ಮ ಇಲಾಖೆಯ ಸುಧಾರಣೆಯಿಂದ ಆಗಬೇಕಾದ್ದೇನೂ ಇಲ್ಲ. ಆದರೆ ಕಷ್ಟ ಅನುಭವಿಸುತ್ತಿರುವ  ಸಾರ್ವಜನಿಕರು ಮತ್ತು ಅವರ ತೆರಿಗೆಯಿಂದ ಸಂಬಳ ಪಡೆಯುತ್ತಿರುವ ನಿಮ್ಮಂತಹಾ ಸಾರ್ವಜನಿಕ ಅಧಿಕಾರಿಗಳು ನಿಯಮಾನುಸಾರ ಕೆಲಸ ಮಾಡಬೇಕೆ ಹೊರತು ನಿಮ್ಮ ಇಚ್ಚೆಯಂತಲ್ಲ. ಅವರವರ ಇಚ್ಚೆಯಂತೆ ಕೆಲಸ ಮಾಡಲು ಇದು ಯಾರೊಬ್ಬರ ವೈಯಕ್ತಿಕ ಸ್ವತ್ತಲ್ಲ. ಪ್ರತಿಯೊಂದು ಪೈಸೆಗೂ ಲೆಕ್ಕ ಇಡಬೇಕಾದ್ದು ಮತ್ತು ಅದನ್ನು ಸಾರ್ವಜನಿಕ ಬಳಕೆಗೆ ವಿನಿಯೋಗಿಸಬೇಕಾದ್ದು ನಿಮ್ಮ ಕರ್ತವ್ಯ. ಅದನ್ನು ತಿಳಿ ಹೇಳಲಿಕ್ಕೆಂದು ನಿಮ್ಮೊಂದಿಗೆ ಅಧಿಕೃತ ಭೇಟಿ ಬಯಸಿದ್ದು. 
         ಸಾರ್ವಜನಿಕರಿಗೆ ಸಿಗದೇ,  ನಿಮ್ಮ ನಿರ್ಧಾರಕ್ಕೆಂದು ಬಂದಿರುವ ಕಡತಗಳನ್ನು ತಿಂಗಳುಗಟ್ಟಲೆ ಇಟ್ಟೊಕೊಂಡು ಮೀಟಿಂಗ್ ಎಂದು ಹೇಳುತ್ತಾ ನಾಲ್ಕಾರು ತಿಂಗಳಿಂದ ಪ್ರಮುಖ ಕಡತಗಳ ಮೇಲೆ ಕ್ರಮ ತೆಗೆದುಕೊಳ್ಳದಿರುವ ನಿಮ್ಮ ಕ್ರಮವನ್ನು ಯಾರೂ ಶ್ಲಾಘಿಸುವುದಿಲ್ಲ. ಅದನ್ನೇ ಬಂಡವಾಳ ಮಾಡಿಕೊಳ್ಳೋ ನಿಮ್ಮ ಕೈಕೆಳಗಿನ ಅಧಿಕಾರಿಗಳು ಕಡತ ಸಂಬಂಧಪಟ್ಟ ಖಾಸಗಿ ಕಾಲೇಜುಗಳವರಿಂದ ಹಣ ವಸೂಲಿ ಮಾಡಿಕೊಂಡು ಇದು ಸಿ.ಎಂ./ಮಿನಿಷ್ಟರ್ ಪೋನ್ ಮಾಡಿದ್ರು ಮೇಡಂ ಅಂತಾ ಹೇಳಿ ನಿಮ್ಮಿಂದ ಸೈನ್ ಪಡೀತಾರೆ. ಇದೆಲ್ಲವನ್ನೂ ಜನ ಹೇಳಬೇಕೆಂದು ಕೊಂಡು ನಿಮ್ಮ ಬಳಿಗೆ ಬಂದರೆ ಅದನ್ನೂ ತಡೆಯುವ ಅಧಿಕಾರಿಗಳು ನಿಮಗೆ ರಾಷ್ಟ್ರಪತಿಗಿಂತ ಹೆಚ್ಚಿಗೆ ಕೆಲಸ ಇದೆ ಅನ್ನೋ ರೀತಿಲಿ ಕೃತಕ ಪರಿಸರ ಶೃಷ್ಟಿ ಮಾಡುತ್ತಾರೆ. ಮರೆಯದಿರಿ ನೀವು ದೇವರಲ್ಲ.. ನೀವೊಬ್ಬರು ಸಾರ್ವಜನಿಕ ನೌಕರಿಣಿ ಅಷ್ಟೇ!
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಈ ಕೆಳಗಿನ ವಿಚಾರಗಳನ್ನು ಎಂದಾದರೂ ಪರಿಶೀಲಿಸಿದ್ದೀರಾ?
೧. ನಿಮ್ಮ ಕಚೇರಿಯಲ್ಲಿ ಯಾರು ತಾನೇ ಬೆಳಿಗ್ಗೆ ಸರಿಯಾದ ಸಮಯಕ್ಕೆ (೧೦ ಗಂಟೆಗೆ) ಕಚೇರಿಗೆ ಬರುತ್ತಾರೆ?   
೨. ನಿಮ್ಮ ಕಚೇರಿಯಲ್ಲಿ ಯಾರು ಸಂಜೆ ಕಚೇರಿ ಸಮಯ ಮುಗಿದ ನಂತರ ತೆರಳುತ್ತಾರೆ?
೩. ನಿಮ್ಮ ಕಚೇರಿಯಲ್ಲಿ ಯಾರನ್ನು ಸಂಪನ್ಮೂಲ ವ್ಯಕ್ತಿ ಎಂದು ಪರಿಗಣಿಸಿ ಅವರ ಸಲಹೆ ಸೂಚನೆ ಪಡೆಯುತ್ತಿದ್ದೀರಾ?
೪. ಎಂದಾದರೂ ಇಲಾಖೆಯಲ್ಲಿ ರೆವಿನ್ಯೂ ರೀ ಕಾನ್ಸಿಲಿಯೇಷನ್ ಆಗ್ತಾ ಇದೆಯಾ ಎಂದು ಪರಿಶೀಲಿಸಿದ್ದೀರಾ?
೫. ಖಾಸಗಿ ಕಾಲೇಜುಗಳ ಮಾನ್ಯತೆ ನವೀಕರಣಕ್ಕೆ ನೀವು ತಯಾರು ಮಾಡೋ ಚೆಕ್ ಲಿಸ್ಟ್ ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ಪದವಿ ಪೂರ್ವ ಶಿಕ್ಷಣ ನಿಯಮಗಳು ೨೦೦೬ಗೆ ಅನುಸಾರವಿದೆಯೇ ಎಂದು ಕ್ರಾಸ್ ವೆರಿಪಿಕೇಷನ್ ಮಾಡಿದ್ದೀರಾ?
೬. ಕಾರ್ಯಭಾರ ಇಲ್ಲದಿರೋ (೮ ಅವಧಿ ಮಾತ್ರ) ಹುದ್ದೆಗಳನ್ನು ಭರ್ತಿ ಮಾಡೋಕೆ ಆಡಳಿತ ಮಂಡಳಿಗೆ ಅನುಮತಿ ನೀಡುತ್ತಿದ್ದೀರಲ್ಲ ಅದು ಯಾವ ನಿಯಮದ ಉಲ್ಲಂಘನೆ ಅಂತಾ ಗೊತ್ತೇ?
೭. ಇಲ್ಲೀಗಲ್ ಆಗಿ ಪ್ರಾಂಶುಪಾಲರ ಹುದ್ದೆಗೆ ಪ್ರಮೋಷನ್ ಅಪ್ರೂವ್ ಮಾಡುತ್ತಿದ್ದೀರಲ್ಲ -ಯಾವ ನಿಯಮಗಳ ಅನುಸಾರ ನಿಯಮಬಾಹಿರ ಅಪ್ರೂವಲ್ ಮಾಡುತ್ತಿದ್ದೀರಾ ?
೮. ಕೆ.ಸಿ.ಎಸ್. ಅರ್. ನಿಯಮಗಳ ಅನುಸಾರ ಶ್ರೀ ವಿನಾಯಕ್ ಇವರನ್ನು ನಿವೃತ್ತಿಯ ನಂತರ ನೇಮಕ ಮಾಡಿದ್ದಿರಾ? ಹಾಗಿದ್ದಲ್ಲಿ ಅದಕ್ಕೆ ಸರ್ಕಾರದ ಪೂರ್ವಾನುಮತಿ ನಿಮ್ಮ ಬಳಿ ಇದೆಯೇ?
೯. ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಕೆಲಸ ಕೇವಲ ಪರೀಕ್ಷೆಗಳನ್ನು ನಡೆಸುವುದಷ್ಟೇ ಅಲ್ಲ ಜೊತೆಗೆ ಶಿಕ್ಷಣ ಕಾಯ್ದೆಯ ಕಲಮು ೫೭ ಮತ್ತು ಪ.ಪೂ.ನಿಯಮಗಳು ೨೦೦೬ರ ನಿಯಮ ೬ನ್ನು ಎಂದಾದರೂ ಅಭ್ಯಾಸ ಮಾಡುವ ಅವಕಾಶ ನಿಮಗೆ ಸಿಕ್ಕಿದೆಯೇ?
೧೦. ನಿಮ್ಮ ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ಇದ್ದು ನಿಯಮಗಳಲ್ಲಿ ಪರಿಣಿತಿ ಪಡೆದಿರುವ ಅಧಿಕಾರಿ ನೌಕರರ ಅಭಿಪ್ರಾಯಯನ್ನು ಯಾವುದಾದರೂ ಸಂಕೀರ್ಣ ಕಡತದಲ್ಲಿ ಪಡೆದಿರುವಿರಾ?
ನಿಮ್ಮ ಕಾರ್ಯ ವೈಕರಿ ಮತ್ತು ಮುಕ್ತ ಜನಾಭಿಪ್ರಾಯಕ್ಕೆ ಸಿದ್ಧರಿರುವಿರಾದರೆ ನಾನು ನಿಮ್ಮೆಲ್ಲ ನೌಕರರ ಮುಂದೆ ನಿಮ್ಮ ಇಲಾಖೆಯಿಂದ ಆಗಿರುವ ಅಕ್ರಮಗಳು/ನಿಮ್ಮ ಅವಧಿಯಲ್ಲಿ ಆಗಿರುವ ಕಾನೂನು ಬಾಹಿರ ಆದೇಶಗಳನ್ನು ದಾಖಲೆ ಸಮೇತ ನಿಮ್ಮ ಮುಂದೆ ಇಡಲಿದ್ದೇನೆ. ಅದಕ್ಕಾಗಿ ಅವಕಾಶ ಕೊಡಲು ಸಿದ್ಧರಿರುವಿರಾ?

ಇವೆಲ್ಲವುಗಳು ಸಾರ್ವಜನಿಕ  ಹಿತಾಸಕ್ತಿಯಿಂದ ನಿಮಗೆ ನಾನು ಕೇಳುತ್ತಿರುವ ವಿಚಾರಗಳು. ಇಲಾಖೆಯ ಮುಖ್ಯಸ್ಥರು ನೀವು. ಇಲಾಖೆಯ ಎಲ್ಲಾ ನಿಯಮಬಾಹಿರ ಕಾರ್ಯಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೀವೇ ಜವಾಬ್ದಾರಿ. ಇನ್ನಾದರೂ ಈ ಅಕ್ರಮಗಳನ್ನು ತಡೆಗಟ್ಟಿ ನಿಯಮಾನುಸಾರ ಕರ್ತವ್ಯ ನಿರ್ವಹಿಸಿಕೊಂಡು ಹೋಗಿ ಎಂದು ಆಶಿಸುವೆ. ನಿಮ್ಮ ಇಲಾಖೆಯಲ್ಲಿ ನಿಯಮಬಾಹಿರ/ಅಕ್ರಮ ಆದೇಶಗಳು ಮುಂದುವರೆಯುವವರೆಗೆ ನನ್ನ ಈ ಬರಹವೂ ಬ್ಲಾಗ್ ನಲ್ಲಿ ಮುಂದುವರೆಯುತ್ತದೆ  ಮತ್ತು ನಿಮ್ಮ ಇಲಾಖೆಯ ಈ ಕೃತ್ಯಗಳನ್ನು ಸಕ್ಷಮ ಪ್ರಾಧಿಕಾರಗಳ ಗಮನಕ್ಕೆ ತರುವ ಯತ್ನವೂ ನಡೆಯುತ್ತದೆ. ಇಲಾಖೆಯಲ್ಲಿ ಸುಧಾರಣೆ ತಂದು ಅದನ್ನು ತಪ್ಪಿಸುವಿರೆಂಬ ಸದುದ್ದೇಶದೊಂದಿಗೆ... 

ಸಾರ್ವಜನಿಕ ಹಿತದೃಷ್ಟಿಯಿಂದ 
ಸಿ.ಎಸ್. ಮಧು 
ನ್ಯಾಯವಾದಿ 
ಬೆಂಗಳೂರು 

Thursday, March 19, 2015

Letter to the Director, Department of PUE-With public interest

Respected Director,
After a gap of more than one and half year I am wring this blog with utmost public interest and without any personal interest or grudge. I  am hereby bringing to your kind notice that some of your subordinate officials are misleading you and making money through their corrupt means. It seems that relying on their words, you have also passed a number of illegal orders also. My humble advise is, at least you inculcate the habit of listening to the public, their opinion on your and your department's work (once in a week). Please remember that your Department, officers, even the Director of the Department is for public service. therefore I humbly request you to ensure the same.
No one is perfect. If your are towards reforms in the department please observe the following words:
"LET THE NOBLE THOUGHTS COME FROM ALL THE SIDES".

Written in the utmost public interest.

Pls do the needful and oblige.